My Blog List

Wednesday, October 08, 2008

ಆಯುಧಪೂಜೆ ಮತ್ತು ಹಸಿವು...


ಇಂದು ಮಹಾನವಮಿ ಆಯುಧಪೂಜೆಯ ಪ್ರಯುಕ್ತ ಕಛೇರಿಗೆ ರಜೆಯಾದ ಕಾರಣ ಬೆಳಿಗ್ಗೆ ತಡವಾಗಿ ಅಂದರೆ ೭.೪೫ಕ್ಕೆ ಎದ್ದು ಸಂಪದ ಸಮುದಾಯದಲ್ಲಿ ಕೆಲವು ಪ್ರತಿಕ್ರಿಯೆಗಳನ್ನು ನೀಡಿ, ನಂತರ ಕಾರನ್ನು, ಬೈಕನ್ನು ತೊಳೆಯಲು ಕೋಣೆಯಿಂದ ಹೊರಡಲನುವಾಗುತ್ತಿದ್ದೆ. ಅಷ್ಟರಲ್ಲಿ ನನ್ನ ಚಿಕ್ಕಮ್ಮನ ಮಗ ಫೋನ್ ಮಾಡಿದ. ಏನು ವಿಷಯ ಅಂತ ಕೇಳಲು ಅವನು "ನಮ್ಮ ಮನೆಗೇ ಬಾ. ಇಲ್ಲೆ ಕಾರನ್ನು ತೊಳೆಯೋಣ. ಇಬ್ಬರ ಕಾರುಗಳನ್ನು ತೊಳೆಯಲು ಪರಸ್ಪರ ಸಹಾಯ ಮಾಡಿದಂತಾಗುತ್ತದೆ" ಅಂತ ಹೇಳಿದ. ನಾನು "ಸರಿ ಬರ್ತೀನಿ" ಅಂತ ಹೇಳಿ ಫೋನ್ ಕಟ್ ಮಾಡಿ ಅಮ್ಮ ಕೊಟ್ಟ ಹಾರ್ಲಿಕ್ಸ್ ಅನ್ನು ಕುಡಿದು ಕಾರನ್ನು ಓಡಿಸಿಕೊಂಡು ಪಕ್ಕದ ರಸ್ತೆಯಲ್ಲಿರುವ ಅವನ ಮನೆಗೆ ಹೋದೆ. ಆಗ ಸಮಯ ಹತ್ತು ಘಂಟೆ. ಇಂದು ರಜೆಯಾದ ಕಾರಣ ತಿಂಡಿಯೂ ತಡ. ಅಲ್ಲಿ ಹೋದ ತಕ್ಷಣ ನನ್ನ ಚಿಕ್ಕಮ್ಮ ಕಾಫಿ ಕುಡೀತೀಯೇನೋ ಅಂತ ಕೇಳಲು ಇನ್ನೊಂದು ಸ್ವಲ್ಪ ಹೊತ್ತು ಆಗಲಿ ಅಂತ ಹೇಳಿ ಕಾರನ್ನು ತೊಳೆಯಲು ಅಣಿಯಾದೆವು.

ಅಷ್ಟರಲ್ಲಿ ನನ್ನ ಸ್ನೇಹಿತರೊಬ್ಬರು ಎಸ್. ಎಮ್. ಎಸ್. ಮಾಡಿ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು ಅಂತ ಸಂದೇಶ ಕಳುಹಿಸಿದ್ದರು. ಅವರಿಗೆ ಫೋನ್ ಮಾಡಿ ದಸರಾ ಹಬ್ಬದ ಶುಭಾಶಯಗಳನ್ನು ಹೇಳಿ , ಹಾಗೇ ಅವರ ಯೋಗಕ್ಷೇಮವನ್ನು ವಿಚಾರಿಸಿ ಮಾತನ್ನು ಮುಗಿಸುವಷ್ಟರಲ್ಲಿ ೧೫ ನಿಮಿಷಗಳು ಕಳೆದು ಹೋದವು. ನಂತರ ವಿಮೆ ಏಜೆಂಟ್ ಫೋನ್ ಮಾಡಿ "ನಿಮ್ಮ ಕಾರಿನ ವಿಮೆ ಬರುವ ಭಾನುವಾರದಂದು ಕೊನೆಗೊಳ್ಳುತ್ತದೆ, ಆದ್ದ್ರಿಂದ ನೀವು ಶುಕ್ರವಾರವೇ ನಮ್ಮ ಕಛೇರಿಗೆ ಬಂದು ವಿಮೆಯನ್ನು ಕಟ್ಟಬೇಕು". ಕೊನೆಯಲ್ಲಿ ವಿಮೆಗೆ ಕಟ್ಟಬೇಕಾದ ಒಟ್ಟು ಮೊತ್ತವನ್ನು ಹೇಳಿ ಫೋನ್ ಕಟ್ ಮಾಡಿದರು. ಸರಿ ಹೊತ್ತಾಗುತ್ತದೆ ಅಂತ ಫೋನನ್ನು ಸೈಲೆನ್ಟ್ ಮೋಡ್ ಗೆ ಮಾಡಿ ಕಾರನ್ನು ತೊಳೆಯಲು ಶುರುಮಾಡಿದಾಗ ವೇಳೆ ಹತ್ತು ಘಂಟೆ ಮೂವತ್ತು ನಿಮಿಷವಾಗಿತ್ತು. ಬೆಳಿಗ್ಗೆ ಒಂದು ಲೋಟ ಹಾರ್ಲಿಕ್ಸ್ ಬೆರೆಸಿದ ಹಾಲನ್ನು ಕುಡಿದಿದ್ದರಿಂದ ಹೊಟ್ಟೆ ತುಂಬಾ ಹಸಿದಿತ್ತು. ಕಾರುಗಳನ್ನು ತೊಳೆಯುದೇ ಸ್ನಾನ ಇಲ್ಲ, ಸ್ನಾನ ಮಾಡದೇ ತಿಂಡಿಯೂ ಇಲ್ಲ, ತೀರ್ಥವೂ ಇಲ್ಲ. :-(

ಮೊದಲು ನನ್ನ ಚಿಕ್ಕಮ್ಮನ ಮಗನ ಮಾರುತಿ ವ್ಯಾನನ್ನು ತೊಳೆಯಲು ಶುರುಮಾಡಿದೆವು. ಸುಮಾರು ಹನ್ನೆರಡು ಘಂಟೆಯ ಹೊತ್ತಿಗೆ ಅವನ ಕಾರನ್ನು ತೊಳೆದು ಒರೆಸಿ ಆಚೆ ನಿಲ್ಲಿಸಿ ನಂತ ನನ್ನ ಕಾರನ್ನು ತೊಳೆಯಲು ಶುರುಮಾಡಿದೆವು. ನನ್ನ ಕಾರನ್ನು ಇತ್ತೀಚೆಗಷ್ಟೇ ಸರ್ವೀಸ್ ಮಾಡಿಸಿದ್ದರಿಂದ ಜಾಸ್ತಿ ಕೊಳೆಯಿರಲಿಲ್ಲ. ಕಾರುಗಳನ್ನು ತೊಳೆದು ಒರೆಸುವ ಹೊತ್ತಿಗೆ ಗಡಿಯಾರದಲ್ಲಿ ಹನ್ನೆರಡು ಘಂಟೆ ಮೂವತ್ತು ನಿಮಿಷವಾಗಿತ್ತು.


ಬೆಳಗ್ಗಿನಿಂದ ಏನೂ ತಿನ್ನದೇ ಹೊಟ್ಟೆ ಹಸಿದಿದ್ದ ಕಾರಣ, ಮನೆಗೆ ಬಂದು ಬೇಗ ಬೇಗ ಬೈಕನ್ನು ತೊಳೆದು ಸ್ನಾನ ಮಾಡಿ, ದಿನವೂ ಮಾಡುವ ಸಂಧ್ಯಾವಂದನೆಯನ್ನು ಇಂದು ಮಾಡದೆ, ರಾಹುಕಾಲ ಮುಗಿಯುವವರೆಗೂ ಕಾದು ೧.೩೦ ರ ನಂತರ ಕಾರು ಮತ್ತು ಬೈಕುಗಳ ಪೂಜೆಯನ್ನು ಮಾಡಿ, ಚಕ್ರಕ್ಕೆ ನಿಂಬೇಹಣ್ಣುಗಳನ್ನು ಇಟ್ಟು, ಗಾಡಿಗಳಲ್ಲಿ ಒಂದು ಸುತ್ತು ಹೊಡೆದು ಮನೆಗೆ ಬಂದು ಅಮ್ಮ ಮಾಡಿದ್ದ ತರಕಾರಿ ಪಲಾವ್, ಆಂಬೊಡೆ, ಗಸಗಸೆ ಪಾಯಸವನ್ನು ತಿನ್ನುವ ಹೊತ್ತಿಗೆ ಸಮಯ ಎರಡು ಘಂಟೆ ಮೂವತ್ತು ನಿಮಿಷವಾಗಿತ್ತು.




ನಾಳೆ ವಿಜಯದಶಮಿಯ ಪ್ರಯುಕ್ತ ರಜೆ.




1 comment:

  1. ನಮ್ಮ ಮನೇಲಿ ನಾವು ಪ್ರತಿ ವರ್ಷ ಆಯುಧ ಪೂಜೆ ದಿನ ಎರಡೇ ಹೊತ್ತು ಊಟ ಮಾಡೋದು :( ಅಪ್ಪನ factory ಅಲ್ಲಿ ಪೂಜೆ ಆಗೋ ಹೊತ್ತಿಗೆ ಮಧ್ಯಾಹ್ನ ಆಗಿ ಹೋಗಿರುತ್ತೆ :) ಊಟ ಮಾಡಿ ಊರಿಗೆ ಹೋಗೋದು :) ರಾತ್ರಿ ಊಟ ಊರಲ್ಲಿ... :)

    ReplyDelete