My Blog List

Thursday, November 12, 2009

ಇಂಗ್ಲೆಂಡಿನ ಸ್ಟೋನ್ ಹೆಂಜ್

ಇಂಗ್ಲೆಂಡಿನ ಸ್ಟೋನ್ ಹೆಂಜ್





ಗುಹೆಗಳಲ್ಲಿ ವಾಸ ಮಾಡುತ್ತ ಬೇಟೆಯಾಡಿ ಜೀವಿಸುತ್ತಿದ್ದ ಪುರಾತನ ಮಾನವ ಕ್ರಮೇಣ ಪಶುಪಾಲನೆ, ಕೃಷಿಯಂಥ ಹೊಸ ವಿಷಯಗಳನ್ನು ಕಲಿಯುವುದರ ಜೊತೆಗೆ ತನ್ನದೇ ರೀತಿಯಲ್ಲಿ ಖಗೋಳ ಜ್ಞಾನವನ್ನು ಆರ್ಜಿಸಿದ. ನಿಸರ್ಗಕ್ಕೆ ಹೊಂದಿಕೊಂಡೇ ಬದುಕುತ್ತಿದ್ದ ಆತನಿಗೆ ಪರಿವಾರ ದೊಡ್ಡದಾದಂತೆ ಹೆಚ್ಚು ಹೆಚ್ಚು ಧಾನ್ಯ ಬೆಳೆಯಬೇಕಾದ ಹಾಗೂ ಅದನ್ನು ಸಂಗ್ರಹಿಸಿಡಬೇಕಾದ ಅಗತ್ಯ ಉಂಟಾಯಿತು. ಯಾವ ದಿಕ್ಕಿನಲ್ಲಿ ಮೋಡ ಹೆಪ್ಪುಗಟ್ಟಿದಾಗ ಮಳೆ ಬೀಳುತ್ತದೆ, ಯಾವ ಮರದಲ್ಲಿ ಯಾವ ಹಣ್ಣು ಬಿಡುತ್ತದೆ, ಇತ್ಯಾದಿಗಳನ್ನು ಅನುಭವದಿಂದ ಕಂಡುಕೊಂಡ. ಹಾಗೆಯೇ ಹಗಲು, ರಾತ್ರಿ, ಸೂರ್ಯ ಚಂದ್ರ, ನಕ್ಷತ್ರಗಳ ವೀಕ್ಷಣೆಯಿಂದ ಕಾಲವನ್ನು ಅಳೆಯಲು ಕಲಿತ.

ಈಗ ಖಗೋಳ ವಿಜ್ಞಾನ ಸಾಕಷ್ಟು ಮುಂದುವರೆದಿದೆ. ಗ್ರಹಗಳು, ನಕ್ಷತ್ರಗಳು ನಿಹಾರಿಕೆಗಳು, ಆಕಾಶಕಾಯಗಳು - ಹೀಗೆ ಆಸಕ್ತಿದಾಯಕವಾದ ಹಲವು ವಿಷಯಗಳ ಅಭ್ಯಾಸ ನಿರಂತರವಾಗಿ ನಡೆಯುತ್ತಲೂ ಇದೆ. ಜಗತ್ತಿನ ಅನೇಕ ಕಡೆ ದೂರದ ನಕ್ಷತ್ರಗಳನ್ನು ಅಭ್ಯಸಿಸುತ್ತ, ಸೌರಮಂಡಲದ ಅದ್ಭುತಗಳಿಗೆ ಸದಾ ಕಣ್ಣು ತೆರೆದುಕೊಂದಿರುವ ಹಲವಾರು ಅತ್ಯಾಧುನಿಕ ವೀಕ್ಷಣಾಲಯಗಳಿವೆ.

ಪುರಾತನ ಮನುಷ್ಯರು ಸಹ ತಮ್ಮದೇ ರೀತಿಯಲ್ಲಿ ವೀಕ್ಷಣಾಲಯಗಳನ್ನು ನಿರ್ಮಿಸಿಕೊಂದು ಖಗೋಳವನ್ನು ಅಭ್ಯಾಸ ಮಾಡುತ್ತಿದ್ದರು ಎಂಬುದಕ್ಕೆ ಅನೇಕ ಪುರಾವೆಗಳಿವೆ. ಇಂಗ್ಲೆಂಡಿನ ಸ್ಯಾಲಿಸ್ಬರಿ ಮೈದಾನದಲ್ಲಿ ಇರುವ ಸ್ಟೋನ್ ಹೆಂಜ್ ಎಂಬ ಕಲ್ಲು ಕಂಬಗಳ ಗುಡಿ ಅಂಥವುಗಳಲ್ಲೊಂದು.





ಇಲ್ಲಿ ೪.೫-೬ಮೀ. ಎತ್ತರದ ಕಲ್ಲು ಚಪ್ಪಡಿಗಳನ್ನು ಅವುಗಳ ಅಕ್ಷ ದಕ್ಷಿಣಾಯನ ದಿನದಂದು ಉದಯಿಸುವ  ಸೂರ್ಯನ ಮಧ್ಯಭಾಗವನ್ನು ಸರಿಯಾಗಿ ಭೇದಿಸುವಂತೆ ನಿಲ್ಲಿಸಲಾಗಿದೆ. ಇದು ಕ್ರಿ. ಪೂ. ೨೫೦೦ರಷ್ಟು ಹಿಂದಿನದು ಎಂದು ಹೇಳಲಾಗುತ್ತಿದೆ. ಆಗಿನ್ನೂ ಮಾನವನಿಗೆ ಲೋಹಗಳ ಪರಿಚಯವೂ ಆಗಿರಲಿಲ್ಲ. ಆದರೂ ಪೂರ್ವನಿವಾಸಿಗಳ ಖಗೋಳ ಪ್ರಜ್ಞೆ ನಮ್ಮನ್ನು ಅಚ್ಚರಿಗೊಳಿಸದೆ ಇರುವುದಿಲ್ಲ. ಆ ಜನರು ಅದನ್ನು ಕಾಲವನ್ನು ಅಳೆಯುವ ಯಂತ್ರವಾಗಿ, ಸೂರ್ಯಾರಾಧನೆಯ ಮಂದಿರವಾಗಿ, ವೀಕ್ಷಣಾಲಯವಾಗಿ ಅಥವಾ ಧಾರ್ಮಿಕ ಕ್ರಿಯೆಗಳ ಕೇಂದ್ರವಾಗಿ ಬಳಸಿರಬಹುದೆಂದು ಊಹಿಸಲಾಗಿದೆ. ಈ ನಿಟ್ಟಿನಲ್ಲಿ ಇನ್ನೂ ಚರ್ಚೆಗಳು ನಡೆಯುತ್ತಲೇ ಇವೆ.

ಚಿತ್ರ ಕೃಪೆ: ವಿಕಿಪೀಡಿಯಾ

Tuesday, November 10, 2009

ಪಿಸಾ ಗೋಪುರ

ಪಿಸಾ ಗೋಪುರ

ಪಿಸಾ, ಮಧ್ಯ ಇಟಲಿಯ ಟಸ್ಕನಿಯ ಪ್ರಾಂತ್ಯದ ಒಂದು ನಗರ. ಅದರ ಕೇಂದ್ರ ಭಾಗದಲ್ಲಿರುವ ಪಿಸಾ ಗೋಪುರ (ಕ್ಯಾಂಪಾನೈಲ್ ಕಟ್ಟಡ) ಅಧುನಿಕ ಜಗತ್ತಿನ ಏಳು ಅದ್ಭುತಗಳಲ್ಲೊಂದೆಂದು ಪ್ರಖ್ಯಾತವಾಗಿದೆ. ಈ ಗೋಪುರದ ನಿರ್ಮಾಣ ಕ್ರಿ. ಶ. ೧೧೭೩ರಲ್ಲಿ ಪ್ರಾರಂಭವಾಗಿ ಕ್ರಿ. ಶ. ೧೩೫೦ರಲ್ಲಿ ಮುಕ್ತಾಯಗೊಂಡಿತು. ಅದರ ಸಮೀಪದಲ್ಲಿರುವ ಬ್ಯಾಪ್ಟಿಸ್ಟ್ರಿ ಇಗರ್ಜಿಯ ಗಂಟೆ ಗೋಪುರವಾಗಿ ಅದನ್ನು ನಿರ್ಮಿಸಲಾಯಿತು. ಪ್ರಾರಂಭದಲ್ಲಿ ಅದನ್ನು ಹದಿಮೂರು ಅಂತಸ್ತಿನ ಗೋಪುರವಾಗಿ ನಿರ್ಮಿಸಲು ಯೋಜಿಸಲಾಗಿತ್ತು. ಆದರೆ ಎಂಟನೆಯ ಮಹಡಿಯ ಕೆಲಸ ಪೂರ್ಣವಾಗುವ ವೇಳೆಗೆ ಅದು ಕೇಂದ್ರ ಅಕ್ಷದಿಂದ ಸುಮಾರು ೨.೧ ಮೀ. ಅಷ್ಟು ವಾಲಿದುದರಿಂದ ನಿರ್ಮಾಣವನ್ನು ಅಲ್ಲಿಗೇ‌ ನಿಲ್ಲಿಸಲಾಯಿತು. ನಿರ್ಮಾಣ ಅರ್ಧದಲ್ಲೇ ನಿಂತರೂ ಅದರ ಬಗ್ಗೆ ಆಕರ್ಷಣೆ ಕಡಿಮೆಯಾಗಲಿಲ್ಲ. ಇದು ಪ್ರತಿ ವರ್ಷ ಸುಮಾರು ೨ಸೆ. ಮೀ. ಅಷ್ಟು ವಾಲುತ್ತ, ಈಗ 'ಪಿಸಾ ವಾಲು ಗೋಪುರ' ಎಂದು ಪ್ರಖ್ಯಾತವಾಗಿದೆ.




ಇದು ಸುಮಾರು ೫೫.೮೬ ಮೀ (೧೮೩ ಅಡಿ, ೩ ಅಂಗುಲ) ಎತ್ತರವಾಗಿದೆ. ಇದರ ಅಡಿಪಾಯ ಕೇವಲ ಮೂರು ಮೀ. ಆಳ ಇರುವುದೇ ಅದು ವಾಲುವುದಕ್ಕೆ ಕಾರಣ ಎಂದು ಕೆಲವರು ವಾದಿಸುತ್ತಾರೆ. ವಾಸ್ತವದಲ್ಲಿ, ಪಿಸಾ ಗೋಪುರ ನಿಂತಿರುವುದು ಗಟ್ಟಿ ಕಲ್ಲಿನ ನೆಲದ ಮೇಲಲ್ಲ, ಬದಲಾಗಿ ತೀರಾ ಜಾಳಾಗಿ ಸಂಚಯಗೊಂಡಿರುವ ಶಿಲಾಪದರದ ಮೇಲೆ. ಪಿಸಾ ಗೋಪುರ ವಾಲಲು ಇದೇ ಕಾರಣ ಎನ್ನುವವರೂ ಇದ್ದಾರೆ.

ಇಟಲಿಯ ಗಣಿತ ಶಾಸ್ತ್ರಜ್ಞ, ಖಗೋಳ ವಿಜ್ಞಾನಿ ಹಾಗು ಭೌತ ವಿಜ್ಞಾನಿ ಗೆಲಿಲಿಯೋ ಈ ಗೋಪುರದ ಮೇಲಿನಿಂದ ಬೇರೆ ಬೇರೆ ತೂಕದ ಎರಡು ಗುಂಡುಗಳನ್ನು ಕೆಳಕ್ಕೆ ಬೀಳಲು ಬಿಟ್ಟು, ಅವು ಏಕಕಾಲದಲ್ಲಿ ಭೂಮಿಯನ್ನು ತಲುಪಿದುದನ್ನು ತೋರಿಸಿದ ಎಂದು ಹೇಳಲಾಗಿದೆ.

ಈಗ ಅದು ಕೇಂದ್ರ ಅಕ್ಷದಿಂದ ೩.೯ ಮೀ. ಅಷ್ಟು ವಾಲಿರುವುದರಿಂದ, ಪಿಸಾ ಗೋಪುರ ಏರಿ ನಗರ ವೀಕ್ಷಿಸಲು ಯಾರಿಗೂ ಅನುಮತಿ ಇಲ್ಲ. ಆದರೂ ಅದು ವಾಲಿ ನಿಂತಿರುವ ದೃಶ್ಯವನ್ನು ಕಾಣಲು ಪ್ರವಾಸಿಗಳು ಬರುತ್ತಲೇ ಇದ್ದಾರೆ.

ಚಿತ್ರ ಕೃಪೆ: ವಿಕಿಪೀಡಿಯಾ

Monday, November 09, 2009

ಮತ್ತೆ ಮತ್ತೆ ನೆನಪಾಗುವ ಶಂಕರ್ ನಾಗ್

ಇಂದು ಶಂಕರ್ ನಾಗ್ ಅವರ ನೆನಪಾಯಿತು.

ಯಾಕೆ ಅಂದರೆ ನವೆಂಬರ್ ೯ ರಂದು ಅವರ ಜನ್ಮದಿನ. ೧೯೫೪ ನವೆಂಬರ್ ೯ ರಂದು ಹೊನ್ನಾವರ ತಾಲೂಕಿನ ಮಲ್ಲಾಪುರ ಎಂಬ ಪುಟ್ಟ ಹಳ್ಳಿಯಲ್ಲಿ ಶಂಕರ್ ನಾಗ್ ಅವರು ಹುಟ್ಟಿದರು.

ಅವರ ಬಗ್ಗೆ ಈಗಾಗಲೇ ಇಲ್ಲಿ ಬರೆದಿದ್ದೇನೆ.

ಏನಪ್ಪ ಇವನು ಶಂಕರ್ ನಾಗ್ ಹುಟ್ಟಿದ ದಿನ ಮತ್ತು ಅವರು ತೀರಿಹೋದ ದಿನ ಮಾತ್ರ ಇವರನ್ನು ನೆನಪಿಸಿಕೊಳ್ಳುತ್ತಾನೆ ಅಂತ ತಿಳಿಯಬೇಡಿ. ಆಗಾಗ ಶಂಕರ್ ನಾಗ್ ನೆನಪಾಗ್ತಾ ಇರ್ತಾರೆ.

ಶಂಕರ್ ನಾಗ್ ಒಬ್ಬ ಮಹಾನ್ ಕಲಾವಿದ, ಅದಕ್ಕಿಂತ ಹೆಚ್ಚಾಗಿ ಒಬ್ಬ ಒಳ್ಳೇ ಮನುಷ್ಯ.

ಶಂಕರ್ ನಾಗ್ ಇಳಯರಾಜ ಜೊತೆಗೂಡಿ ಹಲವಾರು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

ಅದರಲ್ಲಿ "ಗೀತ" ಎಂಬ ಚಲನಚಿತ್ರ ಕೂಡ ಒಂದು. ಈ ಚಿತ್ರದಲ್ಲಿರುವ ಎಲ್ಲಾ ಹಾಡುಗಳೂ ಸೊಗಸಾಗಿವೆ.

ಆ ಎಲ್ಲಾ ಹಾಡುಗಳಲ್ಲಿ "ಕೇಳದೆ ನಿಮಗೀಗ ದೂರದಲ್ಲಿ ಯಾರೋ" ಎಂಬ ಹಾಡು ತುಂಬಾ ಚೆನ್ನಾಗಿದೆ. ಈಗ ಈ ಹಾಡನ್ನು ನೋಡಿ, ಕೇಳಿ. ನನಗಂತೂ ಈ ಹಾಡು ತುಂಬಾ ಅಂದರೆ ತುಂಬಾನೇ ಇಷ್ಟ. ನಿಮಗೂ ಈ ಹಾಡು ಇಷ್ಟ ಆಗುತ್ತೆ ಅಂತ ಭಾವಿಸಿದ್ದೇನೆ.


Thursday, November 05, 2009

ಕನಕದಾಸರು

ಕನಕದಾಸರು (ಕ್ರಿ. ಶ. ೧೪೮೬-೧೫೮೦) 




ವ್ಯಾಸರಾಯರ ಶಿಷ್ಯರಾಗಿ, ಪುರಂದರದಾಸರ ಸಮಕಾಲೀನರಾಗಿದ್ದವರು ಶ್ರೀ ಕನಕದಾಸರು. ಆಧ್ಯಾತ್ಮಿಕ ತತ್ವಗಳನ್ನು, ಆಡುಭಾಷೆಯಲ್ಲಿ, ಒಗಟುಗಳ ರೂಪದಲ್ಲಿ,  ಸಾಮಾನ್ಯ ಜನರಿಗೆ ನಿಡಿದರು. ಭಗವಂತನ ಧ್ಯಾನವನ್ನು ಎಲ್ಲರೂ ಮಾಡಿ, ದೈವವನ್ನು ಒಲಿಕೊಳ್ಳಬಹುದೆಂಬ ವಿಷಯವನ್ನು ಮಾಡಿ ತೋರಿಸಿ, ಹಾಡಿ ಕೇಳಿಸಿದರು. ಹೀಗೆ ಸಮಾಜ ಸುಧಾರಕರಾಗಿ, ಮೇಲು ಕೀಳೆಂಬ ಭಾವವನ್ನು ಮೆಟ್ಟಿ, ಭಾವಕ್ಯತೆಯನ್ನು ಐನೂರು ವರುಷಗಳ ಹಿಂದೆಯೇ ಸಾಧಿಸಿದವರು ಕನಕದಾಸರು.

ಕನಕದಾಸರು ಬೀರೇಗೌಡ ಮತ್ತು ಬಚ್ಚಮ್ಮ ದಂಪತಿಗಳಿಗೆ ಜನಿಸಿದರು. ಇವರ ಸ್ಥಳ ಧಾರವಾಡ ಜಿಲ್ಲೆಯ 'ಬಾಡ' ಎಂಬ ಗ್ರಾಮ. ಇವರು ತಿರುಪತಿಯ ತಿಮ್ಮಪ್ಪನ ಒಕ್ಕಲಿನವರಾದ್ದರಿಂದ ತಿಮ್ಮಪ್ಪನೆಂದೇ ಇವರಿಗೆ ನಾಮಕರಣವಾಯಿತು. ತಂದೆಯಂತೆಯೇ ಆ ಗ್ರಾಮದ ನಾಯಕರಾದರು. ಒಮ್ಮೆ ಕಾಗಿನೆಲೆಯಲ್ಲಿದ್ದಾಗ ಇವರಿಗೆ ಅಪಾರವಾದ ಚಿನ್ನದ ನಾಣ್ಯಗಳು ದೊರಕಿದವು. ಆ ಹಣವನ್ನು ಆ ಗ್ರಾಮದ ಕೇಶವನ ದೇವಾಲಯದ ಜೀರ್ಣೋದ್ಧಾರಕ್ಕೆ ವಿನಿಯೋಗಿಸಿದರು. ಹೀಗೆ ದ್ರವ್ಯವು ದೊರಕಿದ್ದರಿಂದ ತಿಮ್ಮಪ್ಪನನ್ನು ಕನಕನೆಂದು ಕರೆದರು. ಈತನೇ ಕನಕನಾಯಕನಾಗಿ ಮುಂದೆ ಕನಕದಾಸರಾದರು. ವ್ಯಾಸರಾಯ ಸ್ವಾಮಿಗಳಿಂದ ದೀಕ್ಷೆಯನ್ನು ಪಡೆದರು.

ವಾಗ್ಗೇಯಕಾರರಾಗಿ ಆದಿಕೇಶವ, ಬಾಡವಾದಿ ಕೇಶವ, ಕಾಗಿನೆಲೆಯಾದಿ ಕೇಶವನೆಂಬ ಅಂಕಿತದೊಡನೆ ಅನೇಕ ಕೀರ್ತನೆಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. ಮುಂಡಿಗೆಗಳನ್ನು ರಚಿಸಿದ್ದಾರೆ. ಮುಂಡಿಗೆಗಳು ದ್ವಂದ್ವಾರ್ಥವನ್ನುಳ್ಳ ಕನ್ನಡ ಕೀರ್ತನೆಗಳು. ಉತ್ತಮ ಕಾವ್ಯಗಳನ್ನು ರಚಿಸಿದ್ದಾರೆ. ಹರಿಭಕ್ತಿಸಾರ, ಮೋಹನ ತರಂಗಿಣಿ, ರಾಮಧ್ಯಾನಚರಿತೆ, ನಳ ಚರಿತ್ರೆ ಮುಂತಾದ ಕಾವ್ಯಗಳನ್ನು ಷಟ್ಪದಿಯಲ್ಲಿ ರಚಿಸಿದ್ದಾರೆ.

ಸಮಾಜೋದ್ಧಾರಕರಾಗಿ ಜನ ಸಾಮಾನ್ಯರಲ್ಲಿ ಸೌಹಾರ್ದವನ್ನು ಬೆಳೆಸಿ, ಸಮಾನತೆಯನ್ನು ಹೊಂದಲು ಶ್ರಮಿಸಿದ್ದಾರೆ. ತಮ್ಮ ಕೀರ್ತನೆಗಳ ಮೂಲಕ ತತ್ವ ಪ್ರಚಾರ ಮಾಡಿ, ಎಲ್ಲರನ್ನೂ ಭಗವದ್ಭಕ್ತರಾಗುವಂತೆ ಮಾಡಿ, ಲೋಕಕಲ್ಯಾಣವೆಸಗಿದ್ದಾರೆ. ಇವರ ಕೀರ್ತನೆಗಳು ಇಂದಿಗೂ ಜನಮನದಲ್ಲಿ ಮೊಳಗುತ್ತಿವೆ.

ಚಿತ್ರ ಕೃಪೆ: ವಿಕಿಪೀಡಿಯಾ

Wednesday, October 28, 2009

ಸ್ವಾತಂತ್ರ್ಯ ಸ್ಮಾರಕ - ಲಿಬರ್ಟಿ

ಸ್ವಾತಂತ್ರ್ಯ ಸ್ಮಾರಕ - ಲಿಬರ್ಟಿ

ಸ್ವಾತಂತ್ರ್ಯದೇವಿಯ ಪ್ರತಿಮೆ ನ್ಯೂಯಾರ್ಕ್ ಬಂದರಿನ ಮೂಲಕ ಅಮೆರಿಕಕ್ಕೆ ಪ್ರವೇಶಿಸುವ ಹಡಗುಗಳಿಗೆ ಬೆಳಕು ತೋರಿಸಿ ಮಾರ್ಗದರ್ಶನ ಮಾಡುವ ರೀತಿಯಲ್ಲಿ ಗಂಭೀರವಾಗಿ ನಿಂತಿದೆ. ಉತ್ತಮ ಬದುಕನ್ನು ಅರಸುತ್ತ ಜಗತ್ತಿನ ನಾನಾ ದೇಶಗಳಿಂದ ನ್ಯೂಯಾರ್ಕಿಗೆ ಬರುವ ವಲಸೆಗಾರರ ಪಾಲಿಗೆ ಈ ಸ್ವಾತಂತ್ರ್ಯ ದೇವಿ ಆಶಾದೀಪವಾಗಿದೆ.

ಕ್ರಿ. ಶ. ೧೮೬೫ ಇಂದ ೧೯೦೦ ವರೆಗೆ ಸುಮಾರು ಒಂದೂವರೆ ಕೋಟಿ ವಲಸೆಗಾರರು ಬಹುಮಟ್ಟಿಗೆ ನ್ಯೂಯಾರ್ಕ್ ಮೂಲಕವೇ ಅಮೆರಿಕ ಪ್ರವೇಶಿಸಿದರು. ಅವರು ಸ್ವಾತಂತ್ರ್ಯ ದೇವಿಯ ಪ್ರತಿಮೆಯನ್ನು ನೋಡಿದ ಕೂಡಲೇ ಹೊಸ ಚೈತನ್ಯ ಹೊಂದುತ್ತಿದ್ದರು. ತಮ್ಮ ಕಷ್ಟಗಳೆಲ್ಲ ಪರಿಹಾರವಾದವು ಎಂದು ಭಾವಿಸುತ್ತಿದ್ದರು.

ಕಳೆದ ಶತಮಾನದಲ್ಲಿ, ಬ್ರಿಟೀಷ್ ವಸಾಹತಾಗಿದ್ದ ಅಮೆರಿಕದ ರಾಜ್ಯಗಳು ಸಶಸ್ತ್ರ ಹೋರಾಟ ನಡೆಸಿ ಬ್ರಿಟನ್ನಿನಿಂದ ಸ್ವಾತಂತ್ರ್ಯಗಳಿಸಿ, ಸ್ವತಂತ್ರ ರಾಜ್ಯಗಳ ಒಕ್ಕೂಟ ರಚಿಸಿಕೊಂಡವು. ಸ್ವಾತಂತ್ರ್ಯ ಸೇವಿಯ ಪ್ರತಿಮೆ ಈ ಗೆಲುವಿನ ಪ್ರತೀಕವಾಗಿದೆ.




ಅಕ್ಟೋಬರ್ ೨೮, ೧೮೭೬ರಂ ಸ್ವಾತಂತ್ರ್ಯ ಸಮಾರಂಭದಲ್ಲಿ ಸ್ವಾತಂತ್ರ್ಯ ದೇವಿಯ ಪ್ರತಿಮೆಯನ್ನು ಸ್ಥಾಪಿಸಲಾಯಿತು. ೪೬ಮೀ. ಎತ್ತರವಿರುವ ಈ ಪ್ರತಿಮೆಯನ್ನು ಫ್ರೆಡೆರಿಕ್ ಅಗಸ್ಟೆ ಬಾರ್ಥೋಲ್ದಿ ಎಂಬಾತ ವಿನ್ಯಾಸಗೊಳಿಸಿದ. ಸುಮಾರು ಅಷ್ಟೇ ಎತ್ತರದ ಪೀಠದ ಮೇಲೆ ಭವ್ಯವಾಗಿ ನಿಂತಿರುವ ಈ ಪ್ರತಿಮೆಯನ್ನು ಕಬ್ಬಿಣದ ಹಾಳೆಗಳ ಮೇಲೆ ತಾಮ್ರದ ರೇಕು ಹೊದಿಸಿ ತಯಾರಿಸಲಾಗಿದೆ.

ಸ್ವಾತಂತ್ರ್ಯ ದೇವಿಯ ಪ್ರತಿಮೆಯ ನಿರ್ಮಾನ ಕಾರ್ಯವನ್ನು ಫ್ರೆಂಚ್ ಇಂಜಿನಿಯರ್ ಗುಸ್ತಾವ್ ಐಫೆಲ್ ವಹಿಸಿದನು. ಆ ವೇಳೆಗಾಗಲೇ ಆತ ಅನೇಕ ಹೊಸ ಕಟ್ಟಡಗಳನ್ನು ನಿರ್ಮಿಸಿ ಖ್ಯಾತನಾಗಿದ್ದ. ಈ ಪ್ರತಿಮೆ ಅಮೆರಿಕದ ಜನರಿಗೆ ಫ್ರಾನ್ಸ್ ನೀಡಿದ ಕೊಡುಗೆ. ಪ್ರತಿಮೆಯನ್ನು ಪ್ಯಾರಿಸಿನಲ್ಲಿ ಪ್ರಮಾಣಕ್ಕೆ ತಕ್ಕಂತೆ ಒಂದೊಂದೇ ಭಾಗವಾಗಿ ತಯಾರಿಸಲಾಯಿತು. ಈ ಭಾಗಗಳನ್ನು ಹಡಗಿನಲ್ಲಿ ನ್ಯೂಯಾರ್ಕಿಗೆ ಸಾಗಿಸಿ, ಒಂದೊಂದೇ ಭಾಗವನ್ನು ಜೋಡಿಸಲಾಯಿತು.

೧೯೭೬ರಲ್ಲಿ ಈ ಪ್ರತಿಮೆಯ ಶತಮಾನೋತ್ಸವ ನೆರವೇರಿತು.

ಚಿತ್ರ ಕೃಪೆ: ವಿಕಿಪೀಡಿಯಾ

Thursday, October 15, 2009

ಐಫೆಲ್ ಗೋಪುರ

ಐಫೆಲ್ ಗೋಪುರ

ಕಳೆದ ನೂರಕ್ಕೂ ಹೆಚ್ಚು ವರ್ಷಗಳಿಂದ ಐಫೆಲ್ ಗೋಪುರ ಪ್ಯಾರಿಸಿನ ಹೆಗ್ಗುರುತಾಗಿದೆ. ನಗರದ ಮಧ್ಯೆ, ಸೀನ್ ನದಿಯ ದಡದ ಮೇಲೆ, ಆಕಾಶಕ್ಕೆ ಚಾಚಿಕೊಂಡಂತಿರುವ ಈ ಗೋಪುರ ನಗರದ ಹೊರಗೆ ಹಲವಾರು ಕಿ.ಮೀ ದೂರದಿಂದಲೇ ಕಾಣಿಸುತ್ತದೆ.

ಫ್ರಾನ್ಸಿನ ಮಹಾಕ್ರಾಂತಿಯ ಶತಮಾನೋತ್ಸವ ಸಂದರ್ಭಕ್ಕಾಗಿ ನಡೆದ ವಾಸ್ತು ವಿನ್ಯಾಸ ಸ್ಪರ್ಧೆಯಲ್ಲಿ ಅಲೆಕ್ಸಾಂಡರ್ ಗುಸ್ತಾವ್ ಐಫೆಲ್ ಅವರ ಈ ವಿನ್ಯಾಸ ಬಹುಮಾನ ಗಳಿಸಿತು. ೧೮೮೯ರಲ್ಲಿ ಪ್ಯಾರಿಸಿನಲ್ಲಿ ನಡೆದ ಜಾಗತಿಕ ಮೇಳಕ್ಕಾಗಿ ಇದನ್ನು ನಿರ್ಮಿಸಲಾಯಿತು. ಇದು ಯೂರೋಪಿನ ಕೈಗಾರಿಕಾ ಕ್ರಾಂತಿಯ ಸಂಕೇತವೂ ಆಗಿದೆ. ಇದರ ವಿನ್ಯಾಸಕರ್ತ ಗುಸ್ತಾವ್ ಐಫೆಲ್ ಅವರ ಗೌರವಾರ್ಥ ಇದನ್ನು ಐಫೆಲ್ ಗೋಪುರ ಎಂದು ಹೆಸರಿಸಲಾಯಿತು.

ಈ ಐಫೆಲ್ ಮಹಾಶಯ ಸಣ್ಣ ಪುಟ್ಟ ರಚನೆಗಳನ್ನು ವಿನ್ಯಾಸಗೊಳಿಸುವ ಜಾಯಮಾನದವನಲ್ಲ. ಈತನ ವಿನ್ಯಾಸಗಳಿಗೆ ಈತನದೇ ವಿಶಿಷ್ಟವಾದ ಮುದ್ರೆ ಇದೆ. ಈತ ವಿನ್ಯಾಸಗೊಳಿಸಿದ ಹಾಗೂ ನಿರ್ಮಿಸಿದ ಎರಡು ರಚನೆಗಳು ಇಂದಿಗೂ ಈತನ ಕೀರ್ತಿಯನ್ನು ಜಗತ್ತಿಗೆ ಸಾರುತ್ತಿವೆ. ಐಫೆಲ್ ಗೋಪುರ ಮತ್ತು ನ್ಯೂಯಾರ್ಕ್ ಅಲ್ಲಿರುವ ಸ್ಟ್ಯಾಚ್ಯೂ ಆಫ್ ಲಿಬರ್ಟಿ - ಈ ಎರಡೂ ಕಳೆದ ಶತಮಾನಗಳಲ್ಲಿ ಜರುಗಿದ ಎರಡು ಮಹತ್ವದ ಘಟನೆಗಳ ನೆನಪಿಗಾಗಿ ನಿರ್ಮಿಸಲಾದ ರಚನೆಗಳು. ಇವೆರಡೂ ಶತಮಾನೋತ್ಸವ ಆಚರಿಸಿಕೊಂಡಿವೆ!





ಐಫೆಲ್ ಗೋಪುರ ಸುಮಾರು ೩೦೦ಮೀ. ಎತ್ತರವಿದೆ. ಮೇಲಿನ ತುದಿಯಲ್ಲಿ ಮತ್ತೆ ೨೦.೭೫ಮೀ. ಎತ್ತರದ ಟಿ.ವಿ. ಟ್ರಾನ್ಸ್ ಮಿಟರ್ ಇದೆ. ಹಾಗಾಗಿ ಗೋಪುರದ ಒಟ್ಟು ಎತ್ತರ ೩೨೦.೭೫ಮೀ. ಆಗುತ್ತದೆ. ತೂಕ ಸುಮಾರು ೭೩೦೦ ಟನ್ನುಗಳು. ನಾಲ್ಕು ಕಡೆ ಭಾರಿ ಕಮಾನಿನಾಕಾರದ ಭದ್ರ ಅಸ್ತಿಭಾರದ ಮೇಲೆ ಈ ಗೋಪುರ ನಿಂತಿದೆ. ನಾಲ್ಕು ಕಡೆ ಜನರು ನಿಂತು, ಪ್ಯಾರಿಸ್ ನಗರದ ಸೌಂದರ್ಯವನ್ನು ನೋಡಲು ಸಹಾಯವಾಗುವಂತೆ, ಭೂಮಿಯಿಂದ ೫೭ಮೀ. ಎತ್ತರದಲ್ಲಿ ಮೊದಲ ಅಟ್ಟಣೆ, ೧೧೫ಮೀ. ಎತ್ತರದಲ್ಲಿ ಎರಡನೆಯ ಅಟ್ಟಣೆ ಮತ್ತು ೨೪೭ಮೀ. ಎತ್ತರದಲ್ಲಿ ಮೂರನೆಯ ವೀಕ್ಷಣಾ ಅಟ್ಟಣೆಯನ್ನು ನಿರ್ಮಿಸಲಾಗಿದೆ. ಮೇಲೇರುತ್ತ ಹೊದಂತೆ ಚೌಕಟ್ಟು ಕಿರಿದಾಗುತ್ತಾ ಹೋಗುತ್ತದೆ. ಮೇಲೇರಲು ಒಮ್ಮೆಗೆ ೬೩ ಜನರನ್ನು ಒಯ್ಯ ಬಲ್ಲ ಮೂರು ಲಿಫ್ಟುಗಳಿವೆ. ೧೭೯೨ ಮೆಟ್ಟಿಲುಗಳಿವೆ. ಎರಕ ಹೊಯ್ದ ಕಬ್ಬಿಣದ ತೊಲೆಗಳಿಂದ ಈ ರಚನೆಯನ್ನು ನಿರ್ಮಿಸಲಾಗಿದೆ. ಪ್ರತಿ ೩ ಮೀ. ಎತ್ತರಕ್ಕೆ ಒಂದು ಮಹಡಿಯಂತೆ ಲೆಕ್ಕ ಹಾಕಿದರೆ, ೧೦೦ ಮಹಡಿ ಕಟ್ಟಡ! ಅದನ್ನು ಕಟ್ಟಿ ಮುಗಿಸಲು ೨ ವರ್ಷ, ೨ ತಿಂಗಳು, ೨ ದಿನ ಬೇಕಾಯಿತು. ಅನೇಕ ವರ್ಷಗಳವರೆಗೆ ಇದು ಜಗತ್ತಿನ ಅತ್ಯಂತ ಎತ್ತರದ ಗೋಪುರವಾಗಿತ್ತು.

ನಿರ್ಮಾಣ ಸಮಯದಲ್ಲಿ, ಇಪ್ಪತ್ತು ವರ್ಷಗಳ ನಂತರ, ಅದನ್ನು ಕಳಚಿ ಹಾಕಲು ಉದ್ದೇಶಿಸಲಾಗಿತ್ತು. ಈ ಮಧ್ಯೆ, ಮೊದಲನೆಯ ಮಹಾಯುದ್ಧ ಆರಂಭವಾಯಿತು. ಆಗ ಐಫೆಲ್ ಗೋಪುರ, ಮಿಲಿಟರಿ ಸಂಪರ್ಕ ಕೇಂದ್ರವಾಗಿ, ಫ್ರೆಂಚ್ ಸೈನ್ಯ ಕಮಾಂಡಿನ ಕಣ್ಣು ಮತ್ತು ಕಿವಿಯಾಗಿ, ಬಹಳ ಸಹಾಯಕವಾಯಿತು. ಹಾಗಾಗಿ ಅದನ್ನು ಕಳಚಿ ಹಾಕುವ ಪ್ರಶ್ನೆಯೇ ಬರಲಿಲ್ಲ. ಮುಂದೆ ನೂರು ವರ್ಷಕ್ಕೂ ಹೆಚ್ಚು ಕಾಲ ತಲೆಯೆತ್ತಿ ನಿಂತ ಹೆಗ್ಗಳಿಕೆಗೆ ಪಾತ್ರವಾಯಿತು.

೧೯೬೭ರಲ್ಲಿ ಐಫೆಲ್ ಗೋಪುರವನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಲಾಯಿತು. ವರ್ಷಗಳು ಕಳೆದಂತೆ, ಪ್ಯಾರಿಸಿನ ಮುಖ್ಯ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಯಿತು.

ಫ್ರೆಂಚರಿಗೆ ತಮ್ಮ ಐಫೆಲ್ ಗೋಪುರದ ಬಗ್ಗೆ ಅಪಾರ ಅಭಿಮಾನ. ಪ್ಯಾರಿಸ್ ಅಲ್ಲಿ ನಡೆಯುವ ಬೇರೆ ಬೇರೆ ಉತ್ಸವಗಳ ಸಮಯದಲ್ಲಿ ಐಫೆಲ್ ಗೋಪುರಕ್ಕೆ ತಳಿರು ತೋರಣ ಮತ್ತು ದೀಪಾಲಂಕಾರ ಮಾಡಲೇಬೇಕು. ದೀಪಾಲಂಕಾರಗೊಂಡ ರಾತ್ರಿ, ಸುಮಾರು ೪೦ಕಿ.ಮೀ ಆಚೆಗೆ , ಅದು ಆಗಸಕ್ಕೆ ಪಂಜು ಹಿಡಿದಂತೆ ಕಾಣುತ್ತದೆ.

ಈಗ ಐಫೆಲ್ ಗೋಪುರವನ್ನು ಪರಿಸರ ಮಾಲಿನ್ಯದಿಂದ ರಕ್ಷಿಸುವ ಪ್ರಯತ್ನ ನಡೆಯುತ್ತಿದೆ. ಇದಕ್ಕಾಗಿ ಸುಮಾರು ನಾನೂರು ಮಂದಿ ಸದಾ ಕಾರ್ಯನಿರತರಾಗಿದ್ದಾರೆ. ಗೋಪುರದಲ್ಲಿ ಪ್ರತಿ ತಿಂಗಳು ಸುಮಾರು ಏಳು ಟನ್ನುಗಳಷ್ಟು ರದ್ದಿ ಶೇಖರಣೆ ಆಗುತ್ತದೆ. ತುಕ್ಕು ಹಿಡಿಯಬಹುದಾದ ಭಾಗಗಳನ್ನು ಕಣ್ಗಾಣಿಸಲು ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಐಫೆಲ್ ಮಿನಿಯೇಚರ್ ಗೋಪುರಗಳು ಅಸಂಖ್ಯಾತ ಪ್ರವಾಸಿಗರ ಆರಾಮ ಕೋಣೆಗಳನ್ನು ಅಲಂಕರಿಸಿವೆ.

ಚಿತ್ರ ಕೃಪೆ:
ವಿಕಿಪೀಡಿಯಾ

Friday, October 09, 2009

ಮೌಂಟ್ ರಷ್ಮೋರ್

ಮೌಂಟ್ ರಷ್ಮೋರ್ 

ಈ ಶತಮಾನದಲ್ಲಿ ನಿರ್ಮಿತವಾದ, ಮೌಂಟ್ ರಷ್ಮೋರ್ ರಾಷ್ಟ್ರೀಯ ಸ್ಮಾರಕವು ಮಾನವ ನಿರ್ಮಿತ ಅದ್ಭುತಗಳಲ್ಲಿ ಒಮ್ದೆಂದು ಹೇಳಬಹುದು. 

ಅಮೆರಿಕದ ದಕ್ಷಿಣ ಡಕೋಟಾ ರಾಜ್ಯದ ಬ್ಲಾಕ್ ಹಿಲ್ಸ್ ಸಾಲಿನಲ್ಲಿ ಮೌಂಟ್ ರಷ್ಮೋರ್ ಎಂಬ ಅತ್ಯಂತ ಕಡಿದಾದ ಬೆಟ್ಟದ ತುದಿಯಲ್ಲಿ ಈ ಸ್ಮಾರಕವನ್ನು ಕೆತ್ತಲಾಗಿದೆ. ಅಮೆರಿಕದ ನಾಲ್ಕು ಅಧ್ಯಕ್ಷರ ಮುಖಗಳಿರುವ ಅದನ್ನು ರಾಷ್ಟ್ರೀಯ ಸ್ಮಾರಕವೆಂದು ಪರಿಗಣಿಸಲಾಗಿದೆ.

ನಾಲ್ಕು ಮಂದಿ ಅಮೆರಿಕದ ಅಧ್ಯಕ್ಷರು - ೧. ಜಾರ್ಜ್ ವಾಷಿಂಗ್ಟನ್, ೨. ಥಾಮಸ್ ಜೆಫರ್ಸನ್, ೩. ಥಿಯೋಡರ್ ರೂಸ್ವೆಲ್ಟ್, ೪. ಅಬ್ರಹಾಂ ಲಿಂಕನ್.





ಅಷ್ಟು ಕಡಿದಾದ ಆ ಹೆಬ್ಬಂಡೆಯ ಪಾರ್ಶ್ವದಲ್ಲಿ ಆ ನಾಲ್ಕು ಮಂದಿ ಮಹಾನ್ ವ್ಯಕ್ತಿಗಳ ತದ್ರೂಪಗಳನ್ನ್ ಮೂಡಿಸಲು ಶಿಲ್ಪಿಗಳು ಯಾವ ಉಪಾಯ ಅನುಸರಿಸಿರಬಹುದು, ಎಂಥ ದುಸ್ಸಹ ಪರಿಸ್ಥಿತಿಯಲ್ಲಿ ಅವರು ಕೆಲಸ ಮಾಡಿರಬಹುದು ಎಂಬ ಕಲ್ಪನೆಯೇ ರೋಚಕವಾಗಿದೆ. ಜಾರ್ಜ್ ವಾಷಿಂಗ್ಟನ್ ಅವರ ಮುಖ ೧೮ ಮೀ. ಎತ್ತರವಾಗಿದೆ. ಅಂದರೆ, ಸುಮಾರು ಐದು ಮಹಡಿ ಕಟ್ಟಡದಷ್ಟು ಎತ್ತರ! ಇದೇ ಪ್ರಮಾಣದಲ್ಲಿ ವಾಷಿಂಗ್ಟನ್ ಅವರ ಪೂರ್ಣರೂಪವನ್ನು ಕೆತ್ತಿದರೆ, ಆಗ ಅದು ೧೪೨ಮೀ. ಎತ್ತರವಾಗುತ್ತದೆ. ಈ ನಾಲ್ಕು ಪ್ರತಿಮೆಗಳ ಮುಖಗಳೂ ಸರಿಸುಮಾರು ಒಂದೇ ಪ್ರಮಾಣದವು.

ಗುಟ್ಜನ್ ಬೋರ್ಗ್ಲಾಮ್ ಎಂಬಾತ ಈ ಸ್ಮಾರಕವನ್ನು ವಿನ್ಯಾಸಗೊಳಿಸಿದ ಮತ್ತು ಕೆಲಸದ ಮೇಲ್ವಿಚಾರಣೆಯ ಹೆಚ್ಚು ಪಾಲು ನೋಡಿಕೊಂಡ. ಪ್ರತಿಮೆಗಳನ್ನು ಕೆತ್ತುವ ಕೆಲಸ ೧೯೨೭ರಲ್ಲಿ ಪ್ರಾರಂಭವಾಗಿ ಕುಂಟುತ್ತಾ, ಎಡವುತ್ತಾ, ೧೪ ವರ್ಷಗಳ ಕಾಲ ನಡೆಯಿತು. ೧೯೪೧ರಲ್ಲಿ ಸ್ಮಾರಕದ ಕೆಲಸ ಪೂರ್ಣವಾಗುವ ಮೊದಲೇ ಬೋರ್ಗ್ಲಾಮ್ ತೀರಿಕೊಂಡ. ಮುಂದೆ ಆತನ ಮಗ ಅಬ್ರಹಾಂ ಲಿಂಕನ್ ಅವರ ಪ್ರತಿಮೆ ಪೂರ್ಣಮಾಡಿದ. ಎರಡನೆಯ ಮಹಾಯುದ್ಧದ ಸಮಯದಲ್ಲಿ ಅದರ ಉದ್ಘಾಟನೆ ತೀರಾ ಸಾಧಾರಣ ರೀತಿಯಲ್ಲಿ ನೆರವೇರಿತು.

ಮೌಂಟ್ ರಷ್ಮೋರ್ ಸಮುದ್ರ ಮಟ್ಟಕ್ಕಿಂತ ೧೭೪೫ಮೀ. ಎತ್ತರದಲ್ಲಿದೆ, ಹಾಗೂ, ಆ ಕಣಿವೆಯ ಇನ್ನಿತರ ಶಿಖರಗಳಿಗಿಂತ ಸುಮಾರು ೧೫೦ಮೀ. ಅಷ್ಟು ಎತ್ತರದಲ್ಲಿದೆ.

ಇಡೀ ಹಗಲು ಸೂರ್ಯನ ಬೆಳಕು ಬೀಳುವಂಥ ಪಾರ್ಶ್ವದಲ್ಲಿರುವ ಈ ರಾಷ್ಟ್ರೀಯ ಸ್ಮಾರಕವನ್ನು ತೀರಾ ಸಮೀಪದಿಂದ ನೋಡಿದರೆ ಅದರ ನಿಜವಾದ ಗಾಂಭೀರ್ಯ ತಿಳಿಯುವುದಿಲ್ಲ. ಹಾಗೆ ನೋಡಲು ಪ್ರಯತ್ನಿಸಿದರೆ, ನಾಲ್ಕು ಮುಖಗಳ ಪೈಕಿ ಒಂದೆರಡನ್ನು ನೋಡಬಹುದು. ಆದುದರಿಂದ ಸ್ಮಾರಕದ ಎದುರು ಬೆಟ್ಟದಲ್ಲಿ ಹಾದು ಹೋಗುವ ದಾರಿಯಲ್ಲಿ ಜನರು ತಮ್ಮ ವಾಹನಗಳನ್ನು ನಿಲ್ಲಿಸಿ, ಈ ಭವ್ಯ ಸ್ಮಾರಕವನ್ನು ದೂರದಿಂದ ನೋಡಿ ಸಂತೋಷಪಡುತ್ತಾರೆ.

ಚಿತ್ರಕೃಪೆ: ವಿಕಿಪೀಡಿಯಾ

Thursday, October 08, 2009

ಬೃಹತ್ ಏಕಶಿಲಾ ಶಿಲ್ಪಗಳು

ಬೃಹತ್ ಏಕಶಿಲಾ ಶಿಲ್ಪಗಳು 




ಕಲ್ಲಿನಲ್ಲಿ ಅತ್ಯಂತ ಸೂಕ್ಷ್ಮ ಕುಸುರಿ ಕೆಲಸದಿಂದ ಹಿಡಿದು ಬೃಹತ್ ಏಕಶಿಲಾ ಶಿಲ್ಪಗಳ ಕೆತ್ತನೆಯವರೆಗೆ ಭಾರತೀಯರು ಹಿಂದಿನಿಂದಲೂ ಶಿಲ್ಪಶಾಸ್ತ್ರದಲ್ಲಿ ಪರಿಣತರಾಗಿದ್ದರು.

ಭಾರತದ, ಮಧ್ಯಪ್ರದೇಶದ ಪಶ್ಚಿಮಭಾಗದಲ್ಲಿರುವ ಬಾರ್ವಾನಿಯ ಸಮೀಪದಲ್ಲಿ, ಸಾತ್ಪುರ ಬೆಟ್ಟ ಶ್ರೇಣಿಯ ಚುಲಗಿರಿ ಶಿಖರದ ಮೇಲೆ ಒಂದು ಬೃಹತ್ ಪ್ರತಿಮೆ ಇದೆ. ಸಾವಿರದಿಂದ ಸಾವಿರದ ಐನೂರು ವರ್ಷಗಳಷ್ಟು ಪ್ರಾಚೀನವಾದ ಈ ಏಕಶಿಲೆಯ ಉಬ್ಬು ಪ್ರತಿಮೆ ಜೈನ ಪರಂಪರೆಯ ಮೊದಲನೆಯ ತೀರ್ಥಂಕರನಾದ ಋಷಭದೇವನದು. ಅನೇಕ ವರ್ಷಗಳ ಕಾಲ ದಟ್ಟ ಕಾಡಿನ ಮಧ್ಯೆ ಮರೆಯಾಗಿದ್ದ ಅದು ಅಲ್ಲಿನ ಆದಿವಾಸಿಗಳಿಗೆ ಮಾತ್ರವೇ ಪರಿಚಿತವಾಗಿತ್ತು. ೧೯೭೯ರಲ್ಲಿ ಅಕಸ್ಮಾತ್ ಬೆಳಕಿಗೆ ಬಂದ ಅದನ್ನು ಅನೇಕ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಪುನರುಜ್ಜೀವನಗೊಳಿಸಲಾಯಿತು.

ಋಷಭದೇವನ ಆ ಪ್ರತಿಮೆ ೨೫.೬ಮೀ. ಎತ್ತರವಾಗಿದೆ. ಒಂದು ಭುಜದಿಂದ ಮತ್ತೊಮ್ದು ಭುಜದ ನಡುವಣ ಅಂತರ ೮ ಮೀ. ತೋಳಿನ ಉದ್ದ ೧೪ಮೀ. ಪಾದದಿಂದ ಟೊಂಕದವರೆಗೆ ೧೧ಮೀ ಎತ್ತರವಿದೆ.

ಪ್ರತಿಮೆಗಳ ಕೆತ್ತನೆಯಲ್ಲಿ ಪ್ರಾಚೀನ ಕರ್ನಾಟಕವೇನೂ ಹಿಂದೆ ಬಿದ್ದಿರಲಿಲ್ಲ. ನಮ್ಮ ಹಲವು ದೇವಾಲಯಗಳು ಪ್ರಾಚೀನ ಶಿಲ್ಪ ವೈಭವದ ದೃಷ್ಟಾಂತಗಳಾಗಿ ನಮ್ಮ ಮುಂದಿವೆ.

ದೊಡ್ಡ ಪ್ರಮಾಣದ ಪ್ರತಿಮೆಗಳ ಪೈಕಿ ಹಾಸನ ಜಿಲ್ಲೆಯ ಶ್ರವಣಬೆಳಗೊಳದ ವಿಂಧ್ಯಗಿರಿ ಬೆಟ್ಟದ ಮೇಲಿರುವ ಗೊಮ್ಮಟೇಶ್ವರ ಅತ್ಯಂತ ಪ್ರಮುಖವಾದದ್ದು. ಬೆಟ್ಟದ ಮೇಲೆ ಶ್ರವಣಬೆಳಗೊಳದತ್ತ ಮುಖ ಮಾಡಿ ನಿಂತಿರುವ ಗೊಮ್ಮಟನ ವಿಗ್ರಹ ೧೭.೩೭ಮೀ ಎತ್ತರವಾಗಿದೆ. (ಇತ್ತೀಚೆಗೆ ಇದನ್ನು ೧೭.೮೩ಮೀ. ಎಂದು ಗುರುತಿಸಲಾಗಿದೆ). ಗಂಗ ದೊರೆ ರಾಚಮಲ್ಲನ ಬಳಿ ಸೇನಾಧಿಪತಿಯಾಗಿದ್ದ ಚಾವುಂಡರಾಯನು ಗೊಮ್ಮಟ ಪ್ರತಿಮೆಯ ನಿರ್ಮಾಣಕ್ಕೆ ಕಾರಣನಾಗಿದ್ದ. ಅಂದಿನ ಹೆಸರಾಂತ ಶಿಲ್ಪಿ ಅರಿಷ್ಟನೇಮಿ ಇದನ್ನು ನಿರ್ಮಿಸಿದನು. ಕ್ರಿ. ಶ. ೯೬೮ರಲ್ಲಿ ನಿರ್ಮಾಣ ಕಾರ್ಯ ಪೂರ್ತಿಗೊಂಡು ಮಹಾಮಸ್ತಕಾಭಿಷೇಕ ನೆರವೇರಿತು.

ಕರ್ನಾಟಕದ ಕಾರ್ಕಳದಲ್ಲಿ ೧೨.೫ಮೀ., ವೇಣೂರಿನಲ್ಲಿ ೧೦.೫ಮೀ., ಧರ್ಮಸ್ಥಳದಲ್ಲಿ ೧೨ಮೀ. ಎತ್ತರದ ಗೊಮ್ಮಟ ವಿಗ್ರಹಗಳಿವೆ.

Friday, September 18, 2009

ತಂತಿಯ ಕಣ್ಣೀರು..



ಪ್ರೀತಿ ಹನಿ

ಪ್ರೀತಿ ಹನಿಯೇ...ಇನ್ನೇನು
ಜಾರಿ ಬಿಡಬೇಕೆಂದಿರುವೆಯಾ
ನನಗಾಗಿ ನಿಲ್ಲು ಅಲ್ಲೇ ಒಂದಿಷ್ಟು ಹೊತ್ತು

ನಿನ್ನ ಕಣ್ಣೀರಿನೊಳು ತುಳುಕಲಿ
ನನ್ನ ಪ್ರೀತಿಯ ನೆನಪು
ಹರಿದು ಸೋಕಲಿ ನಿನ್ನ ಭಾವನೆಯನು...

ದೂರವಾಗುವೆ ನೀನೀಗ ಇನ್ನೇನು
ನನ್ ಕಣ್ಣು ಮಿಟುಕುವ ವೇಳೆಯಲಿ
ಈ ವಿರಹವನು ನಾ ಹೇಗೆ ಸಹಿಸಲಿ?

ಆದರೂ ಉಕ್ಕಿ ಹರಿದ ನಿನ್ನ ಕಣ್ಣೀರಲಿ
ಕಾಣುತಿದೆ ನನ್ನ ಪ್ರೀತಿಯ ಪ್ರತಿಬಿಂಬ
ಈ ಕ್ಷಣದ ಸ್ಪರ್ಶವನು ಮರೆಯಲೆಂತು?

ಕವನ ಕೃಪೆ: ರಶ್ಮಿ ಪೈ

Friday, September 11, 2009

ಮಮಯೇವ್ ಸ್ಮಾರಕ

ಮಮಯೇವ್ ಸ್ಮಾರಕ

ಈ ಶತಮಾನದಲ್ಲಿ ನಡೆದ ಎರಡು ಘೋರ ಮಹಾಯುದ್ಧಗಳಲ್ಲಿ ರಷ್ಯಾ ಭಾಗವಹಿಸಬೇಕಾದ ನಿರ್ಬಂಧಕ್ಕೊಳಗಾಯಿತು.

ಎರಡನೆಯ ಮಹಾಯುದ್ಧದ ವೇಳೆಗೆ ಹೊಸ ಹೊಸ ಅಸ್ತ್ರಗಳು (ಟ್ಯಾಂಕರುಗಳು, ಬಾಂಬರು ವಿಮಾನಗಳು. ಇತ್ಯಾದಿ) ಬಳಕೆಗೆ ಬಂದು ಯುದ್ಧದ ವಿನಾಶಕಾರಿ ಶಕ್ತಿ ನೂರಾರು ಪಟ್ಟು ಹೆಚ್ಚಿತು. ಯುದ್ಧದಲ್ಲಿ ತೊಡಗಿಕೊಂಡಿದ್ದ ದೇಶಗಳ ಪೈಕಿ ಸೋವಿಯತ್ ಒಕ್ಕೂಟ ಅಪಾರ ಹಾನಿಗೊಳಗಾಯಿತು. ಯುದ್ಧದ ಸಾವಿನ ಜೊತೆ ಹಸಿವು, ರೋಗ ರುಜಿನಗಳೂ ಸೇರಿಕೊಂಡವು.

ಯುದ್ಧದ ಕಾರಣ ರಷ್ಯಾದ ಸುಮಾರು ಇಪ್ಪತ್ತು ಮಿಲಿಯನ್ ಮಂದಿ ಪ್ರಾಣನೀಗಿದರು. ಲೆನಿನ್ ಗ್ರಾಡ್ ನಗರದ ಜನರು ಸತತ ಒಂಬೈನೂರು ದಿನಗಳ ಕಾಲ ಹಿಟ್ಲರನ ಸೈನ್ಯವನ್ನು ಎದುರಿಸಿ ನಿಂತದ್ದು ಯುದ್ಧದ ದಾಖಲೆಗಳಲ್ಲಿ ಅತ್ಯಂತ ಮುಖ್ಯವಾದ ಘಟನೆಯಾಗಿದೆ.

ಈ ಎರಡೂ ಯುದ್ಧಗಳಿಗೆ ಸಂಬಂಧಿಸಿದ ಹಲವಾರು ಯುದ್ಧ ಸ್ಮಾರಕಗಳು ರಷ್ಯಾದಲ್ಲಿವೆ. ಬ್ರೆಸ್ಟ್ ಕೋಟೆಯ ಗೋಡೆಯನ್ನೇ ಯುದ್ಧಸ್ಮಾರಕವಾಗಿ ಉಳಿಸಿಡಲಾಗಿದೆ.

ಯುದ್ಧ ಸ್ಮಾರಕಗಳಲ್ಲಿ ಅತಿ ದೊಡ್ಡದು ಸ್ಟ್ಯಾಲಿನ್ ಗ್ರಾಡ್ (ಈಗಿನ ವೋಲ್ಗೊಗ್ರಾಡ್) ಅಲ್ಲಿರುವ ಮಮಯೇವ್ ಬೆಟ್ಟದ ಸ್ಮಾರಕ. ಇಲ್ಲಿ ಅನೇಕಾನೇಕ ಅದ್ಭುತ ಶಿಲ್ಪವಿನ್ಯಾಸಗಳನ್ನು ನಿರ್ಮಿಸಿ ಇಡೀ ಬೆಟ್ಟವನ್ನು ಒಂದು ಸ್ಮಾರಕವಾಗಿ ಮಾಡಲಾಗಿದೆ. ಹಿಟ್ಲರನಿಗೆ ಮಾಸ್ಕೋ ಬಳಿ ಮೊದಲ ಪರಾಭವವಾದರೆ, ಸ್ಟ್ಯಾಲಿನ್ ಗ್ರಾಡ್ ಬಳಿ ನಿರ್ಧಾರಕ ಪರಾಭವಾಯಿತು. ಅಲ್ಲಿಂದಾಚೆಗೆ ಹಿಟ್ಲರ್ ಸತತವಾಗಿ ಸೋಲುತ್ತಾ ಹೋದ. ಈ ಘಟನೆಯನ್ನು ಚಿರಸ್ಥಾಯಿಯಾಗಿ ಮಾಡಲೆಂದೇ ಮಮಯೇವ್ ಸ್ಮಾರಕ ನಿರ್ಮಾಣವಾಯಿತು.

ನಗರದಾಚೆಗೆ ಬಹು ದೂರದಿಂದಲೇ ಗೋಚರಿಸುವ ಈ ಪ್ರತಿಮೆ ಅದ್ಭುತವೂ ಭವ್ಯವೂ ಆಗಿದೆ. ಬುಡದಿಂದ ತುದಿಯವರೆಗೆ ಸುಮಾರು ೬೦ ಮೀಟರ್ ಎತ್ತರವಿರುವ ಇದನ್ನು ಯವ್ಗೆನಿ ವುಚೆತಿಚ್ ಎಂಬ ಶಿಲ್ಪಿ ವಿನ್ಯಾಸಗೊಳಿಸಿದರು. ಕತ್ತಿ ಹಿಡಿದು ನಿಂತಿರುವ ರಷ್ಯಾ ಮಾತೆಯ ಪ್ರತಿಮೆ, ದುರಾಕ್ರಮಣಕಾರರಿಗೆ ಎಚ್ಚರಿಕೆ ನೀಡುವಂತಿದೆ. ವಿಶೇಷ ದಿನಗಳಲ್ಲಿ ಸಾವಿರಾರು ಜನರನ್ನು ಆಕರ್ಷಿಸುವ ಈ ಪ್ರತಿಮೆಯ ಬಳಿಗೆ ಸಾಗುವ ದಾರಿಯಲ್ಲಿ ಸ್ಮಾರಕಗಳ ಸಮುಚ್ಚಯವೇ ಇದೆ.

ಚಿತ್ರ ಕೃಪೆ: ಇಲ್ಲಿಂದ

Thursday, August 27, 2009

ಕಲೋಸಸ್ ಪ್ರತಿಮೆ


ಕಲೋಸಸ್ ಪ್ರತಿಮೆ


ಯುದ್ಧದಲ್ಲಿ ಶತ್ರುವನ್ನು ಸೋಲಿಸಸಿದ ನೆನಪಿಗಾಗಿ ಗೆದ್ದ ರಾಜರು ವಿಜಯಸ್ತಂಭ ಸ್ಥಾಪಿಸುವುದು ಹಿಂದಿನ ಕಾಲದಿಂದಲೂ ಅನುಸರಿಸುತ್ತ ಬಂದಿರುವ ರೂಢಿ. ಇವು ಶಾಸನಗಳ ರೂಪದಲ್ಲಿಯೂ ಇವೆ. ಕರ್ನಾಟಕದ ವೀರಗಲ್ಲುಗಳು ನಮಗೆ ಪರಿಚಿತವಾಗಿವೆ.

ಹೀಗೊಂದು ವಿಜಯಸ್ತಂಭ ಅಪೂರ್ವವೂ, ಅದ್ಭುತವೂ ಆಗಿದ್ದು. ತಮ್ಮ ಕೀರ್ತಿಯನ್ನು ಶಾಶ್ವತಗೊಳಿಸುವಂತಿರಬೇಕು ಎಂಬ ಆಕಾಂಕ್ಷೆಯಿಂದ ಪುರಾತನ ರೋಡ್ಸ್ ದ್ವೀಪವಾಸಿಗಳು ವಿಜಯದ ಸ್ಮಾರಕವಾಗಿ ಬೃಹತ್ ಪ್ರತಿಮೆಯೊಂದನ್ನು ಸ್ಥಾಪಿಸಿದರು. ಅದು ಪ್ರಾಚೀನ ಜಗತ್ತಿನ ಏಳು ಅದ್ಭುತಗಳಲ್ಲೊಂದಾದ ಪ್ರಖ್ಯಾತವಾದ ಕಲೋಸಸ್ ಪ್ರತಿಮೆ.

ಈಗ ಗ್ರೀಸ್ ದೇಶಕ್ಕೆ ಸೇರಿರುವ ರೋಡ್ಸ್, ಮೆಡಿಟರೇನಿಯನ್ ದ್ವೀಪಗಳ ಪೈಕಿ ಒಂದಾಗಿದ್ದು, ಆಯಕಟ್ಟಿನ ಬಂದರಾಗಿತ್ತು. ಹಾಗಾಗಿ, ದ್ವೀಪದ ಮುಖ್ಯ ನಗರ ರೋಮನರ, ಪರ್ಶಿಯನರ, ಅರಬರ, ವೆನಿಷಿಯನರ, ತುರ್ಕರ (ಟರ್ಕಿ ದೇಶದವರು), ಹಾಗೆಯೇ, ಸೇಂಟ್ ಜಾನ್ಸ್ ಕ್ರೂಸೇಡಿಂಗ್ ನೈಟರ ಆಳ್ವಿಕೆಗೆ ಒಳಪಟ್ಟಿತ್ತು.

ಕ್ರಿ.ಪೂ. ಮೂರನೇ ಶತಮಾನದ ಅಂತ್ಯದ ವೇಳೆಗೆ ಮ್ಯಾಸಿಡೋನಿಯನ್ನರ ಭಾರಿ ಸೈನ್ಯ ರೋಡ್ಸ್ ದ್ವೀಪದ ಮೇಲೆ ದಾಳಿ ಮಾಡಿತು. ರೋಡ್ಸ್ ಜನರು, ಸಂಖ್ಯೆಯಲ್ಲಿ ಮ್ಯಾಸಿಡೋನಿಯನ್ನರಿಗಿಂತ ಕಡಿಮೆಯಾಗಿದ್ದರೂ, ಶೌರ್ಯದಿಂದ ಹೋರಾಡಿದರು. ಶತ್ರು ಸೈನ್ಯ ನಗರದ ಮೇಲೆ ಬಲವಾದ ಮುತ್ತಿಗೆ ಹಾಕಿತು. ರೋಡ್ಸ್ ಜನರು ಧೈರ್ಯಗುಂದಲಿಲ್ಲ. ಇಡೀ ಒಂದು ವರ್ಷ ನಡೆದ ಮುತ್ತಿಗೆ ಹಾಗೂ ಕದನದಲ್ಲಿ ಮ್ಯಾಸಿಡೋನಿಯನ್ನರ ಸೈನ್ಯ ಸೋತು ಹಿಮ್ಮೆಟ್ಟಿತು.

ಈ ವಿಜಯಕ್ಕೆ ಯೋಗ್ಯವಾದ ಸ್ಮಾರಕ ನಿರ್ಮಿಸುವ ಅಪೇಕ್ಷೆ ರೋಡ್ಸ್ ವಾಸಿಗಳದು. ದ್ವೀಪ ರಕ್ಷಣೆಗಾಗಿ ಹೋರಾಡಿದವರ ಪೈಕಿ ಚಾರೆಸ್ ಎಂಬ ಶಿಲ್ಪಿಯೂ ಇದ್ದ. ವಿಜಯ ಸ್ಮಾರಕ ನಿರ್ಮಾಣವನ್ನು ಆತನಿಗೆ ವಹಿಸಲಾಯಿತು. ಕಂಚಿನಲ್ಲಿ ತಯಾರಾದ ಆ ಪ್ರತಿಮೆಗಾಗಿ ಚಾರೆಸ್ ಮ್ಯಾಸಿಡೋನಿಯನ್ನರು ಬಿಟ್ಟು ಹೋಗಿದ್ದ ಯುದ್ಧ ಸಲಕರಣೆಗಳ ಲೋಹವನ್ನೇ ಬಳಸಿಕೊಂಡನು. ೩೨ ಮೀಟರ್ ಎತ್ತರದ, ಸುಮಾರು ೩೦೦ ಟನ್ ಭಾರದ ಕಲೋಸಸ ಪ್ರತಿಮೆಯ ನಿರ್ಮಾಣ ಪೂರ್ಣಗೊಳ್ಳಲು (ಕ್ರಿ. ಪೂ. ೨೯೨ ಇಂದ ಕ್ರಿ. ಪೂ. ೨೮೦ ವರೆಗೆ) ಹನ್ನೆರಡು ವರ್ಷಗಳು ಬೇಕಾಯಿತು. ಅದರ ಕೈಬೆರಳುಗಳು ಮನುಷ್ಯನಷ್ಟು ಉದ್ದವಿದ್ದವು.

ಪ್ರತಿಮೆ ನಿರ್ಮಾಣಗೊಂಡ ನಂತರ ಶಿಲ್ಪಿ ಚಾರೆಸನಿಗೆ ಅದು ಪ್ರಮಾಣಬದ್ಧವಾಗಿಲ್ಲ ಎನಿಸಿತು. ಅದರಿಂದಾಗಿ, ಸೂಕ್ಷ್ಮ ಪ್ರವೃತ್ತಿಯ ಚಾರೆಸ್ ಆತ್ಮಹತ್ಯೆ ಮಾಡಿಕೊಂಡನು. ಆದರೂ ಅಂದಿನ ಶಿಲ್ಪಿಗಳು ಪ್ರತಿಮೆ ಯಾವುದೇ ರೀತಿಯಿಂದಲೂ ಅತ್ಯಂತ ಪ್ರಮಾಣಬದ್ಧವಾಗಿದೆ ಎಂದು ಶ್ಲಾಘಿಸಿದರಲ್ಲದೇ, ಅದನ್ನು ಜಗತ್ತಿನ ಅದ್ಭುತಗಳಲ್ಲೊಂದೆಂದು ಸಾರಿದರು.

ಅದನ್ನು ನಿರ್ಮಿಸಿದ ಶಿಲ್ಪಿಯಂತೆಯೇ, ಪ್ರತಿಮೆಯದೂ ಅಲ್ಪಾಯುಷ್ಯವಾಗಿತ್ತು. ಅದರ ಸ್ಥಾಪನೆಯ ಐವತ್ತಾರು ವರ್ಷಗಳ ಬಳಿಕ ಸಂಭವಿಸಿದ ಭೂಕಂಪದಲ್ಲಿ ಕಲೋಸಸ್ ಪ್ರತಿಮೆ ಮುರಿದು ಚೂರುಚೂರಾಯಿತು. ಅದು ಮುರಿದು ಬಿದ್ದದ್ದನ್ನು ಕ್ರಿ. ಶ. ಒಂದನೆಯ ಶತಮಾನದಲ್ಲಿ ರೋಮನ್ ಇತಿಹಾಸಕಾರ ಪ್ಲಿನಿ ದಾಖಲುಗೊಳಿಸಿದ. ಮುಂದೆ ಏಳನೆಯ ಶತಮಾನದಲ್ಲಿ ಆ ದ್ವೀಪವನ್ನು ವಶಪಡಿಸಿಕೊಂದ ಅರಬರು ಕಲೋಸಸ್ ಪ್ರತಿಮೆಯ ಲೋಹದ ಚೂರುಗಳನ್ನು ಯಹೂದಿ ವರ್ತಕನೊಬ್ಬನಿಗೆ ಮಾರಿದರು.

ಆ ಪ್ರತಿಮೆಯ ಕಾಲಿನ ಕೆಳಗೆ ಹಡಗುಗಳು ತೂರಿಹೋಗುವಂತೆ ನಿರ್ಮಿಸಲಾಗಿತ್ತೆಂಬ ಪ್ರತೀತಿ ಇದೆ. ತರುವಾಯದ ಚಿತ್ರಕಾರರು ಆ ಪ್ರತಿಮೆ ಒಂದು ಎತ್ತರವಾದ ವೇದಿಕೆಯ ಮೇಲೆ ನಿಂತಿದ್ದಿರಬಹುದೆಂಬ ಊಹೆಯ ಮೇಲೆ ಅದರ ಚಿತ್ರ ರಚಿಸಿದರು.

ಆ ಕಾಲದಲ್ಲಿ ಪ್ರತಿಮೆಯ ಒಂದೊಂದು ಭಾಗವನ್ನು ಕಂಚಿನ ತಗಡುಗಳ ರೂಪದಲ್ಲಿ ತಯಾರಿಸಿ, ಅವುಗಳನ್ನು ಬೆಸೆಯಲು ಪ್ರತಿಯೊಂದು ಹಂತದ ಎತ್ತರಕ್ಕೆ ಅಟ್ಟ ಕಟ್ಟಿ ಕುಲುಮೆಗಳನ್ನು ಸ್ಥಾಪಿಸಿದ್ದ ಆ ಶಿಲ್ಪಿಯ ಕಾರ್ಯಕೌಶಲ್ಯ ಬೆರಗುಗೊಳಿಸುವುದಂತೂ ನಿಜ.

ಚಿತ್ರ ಕೃಪೆ: ಇಲ್ಲಿಂದ

Thursday, August 06, 2009

ಕಲೋಸಿಯಮ್

ಕಲೋಸಿಯಮ್

ಕಲೋಸಿಯಮ್

ಗ್ರೀಕರು ಬಳಕೆಗೆ ತಂದ ಆಂಫಿಥಿಯೇಟರುಗಳು ರೋಮನ್ನರ ಕಾಲದಲ್ಲಿಯೂ ಮುಂದುವರೆದವು. ಆದರೆ ರೋಮನ್ನರ ನಾಗರಿಕತೆಯ ಉಚ್ಛ್ರಾಯ ಕಾಲದಲ್ಲಿ ಅವು ಕಲೋಸಿಯಮ್ ಎಂಬ ಹೆಸರಿನಲ್ಲಿ ಪ್ರಸಿದ್ಧಿ ಪಡೆದವು. ಆಗ ಪ್ರತಿಯೊಂದು ದೊಡ್ಡ ನಗರದಲ್ಲಿಯೂ ಕಲೋಸಿಯಮ್ ಇದ್ದಿರಬಹುದಾದರೂ, ರಾಜಧಾನಿಯಲ್ಲಿ ಕಲೋಸಿಯಮ್ ಸಹಜವಾಗಿಯೇ ಚಕ್ರವರ್ತಿಯ ಅಂತಸ್ತನ್ನು ಸಾರುವಂತೆ ಭವ್ಯವಾಗಿ ಇರಬೇಕಾಗುತ್ತಿತ್ತು. ಗ್ರೀಕರ ಕಾಲದಲ್ಲಿ ಸಂಗೀತ, ನಾಟಕ ಸ್ಪರ್ಧೆಗಳಿಗೆ ಕ್ರೀಡೆ, ಮನೊರಂಜಗಳಿಗೆ, ವಸಂತೋತ್ಸವಗಳಿಗೆ ಬಳಕೆಯಾದ ಆಂಫಿಥಿಯೇಟರುಗಳು, ರೋಮನ್ನರ ಕಾಲಕ್ಕೆ ಕಲೋಸಿಯಮ್ಮುಗಳಾಗಿ ಗುಲಾಮರನ್ನೂ, ಖಡ್ಗ ಮಲ್ಲರುಗಳನ್ನೂ, ಸ್ಪರ್ಧೆ, ಕ್ರೌರ್ಯ, ಹಿಂಸೆ, ಪೀಡನೆ, ದೌರ್ಜನ್ಯಗಳಿಗೆ ಗುರಿಪಡಿಸುವುದಕ್ಕೆ ಕುಖ್ಯಾತಿಯೆನಿಸಿದವು.

ರೋಮ್ ನಗರದಲ್ಲಿ ಎಸ್ಕೈಲಿನ್ ಮತ್ತು ಸೇಲಿಯನ್ ಬೆಟ್ಟಗಳ ಮಧ್ಯೆ ಪುರಾತನ ರೋಮನ್ ಕಲೋಸಿಯಮ್ಮಿನ ಅವಶೇಷವಿದೆ. ಪ್ರತಿದಿನ ಬಹುಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುವ ಇದು ಇಂದಿನ ಅಧುನಿಕ ಮಾನಕಗಳ ದೃಷ್ಟಿಯಿಂದ ಸಹ ಬೆರಗುಗೊಳಿಸುವಂತಿದೆ. ಅಂಡಾಕಾರದಲ್ಲಿರುವ ಇದು ೧೮೮ ಮೀ. ಉದ್ದ, ೧೫೬ ಮೀ. ಅಗಲ ಹಾಗೂ ೫೨೭ ಮೀ. ಸುತ್ತಳತೆಯದ್ದಾಗಿದೆ. ಕೇಂದ್ರ ರಂಗ ಸಹ ಅಂಡಾಕಾರವಾಗಿದ್ದು, ೮೭ ಮೀ. ಉದ್ದ, ಮತ್ತು ೭೪ ಮೀ. ಅಗಲವಾಗಿದೆ. ಹೊರಭಾಗದ ರಚನೆ ಒಂದು ಕಡೆ ಮಾತ್ರ ಉಳಿದಿದ್ದು ೫೭ ಮೀ. ಎತ್ತರವಾಗಿದೆ. ಅದು ನಾಲ್ಕು ಮಹಡಿಗಳನ್ನೊಳಗೊಂಡಿದ್ದು, ಮೂರನೆಯ ಮಹಡಿಯವರೆಗೆ ಕಮಾನು ಬಾಗಿಲುಗಳಿವೆ.

ಈಗ ಉಳಿದಿರುವ ಕಲೋಸಿಯಮ್ಮಿನ ನಿರ್ಮಾಣ ಕಾರ್ಯ ಬಹುಶಃ ಕ್ರಿ. ಶ ೭೦ರಲ್ಲಿ ಪ್ರಾರಂಭವಾಯಿತು. ಅದಕ್ಕೆ ಮುಂಚೆ ಇದ್ದ ಕಲೋಸಿಯಮ್ಮನ್ನು ಮರದಿಂದ ನಿರ್ಮಿಸಲಾಗಿದ್ದು ಕ್ರಿ. ಶ. ೬೪ರಲ್ಲಿ ಬೆಂಕಿಯಿಂದ ಸಂಪೂರ್ಣ ನಾಶವಾದುದರಿಂದ ಹೊಸ ಕಲೋಸಿಯಮ್ ನಿರ್ಮಾಣ ಅಗತ್ಯವಾಗಿತ್ತು. ಹತ್ತು ವರ್ಷಗಳ ಕಾಲ ನಡೆದ ಅದರ ನಿರ್ಮಾಣಕಾರ್ಯದಲ್ಲಿ ರೋಮನ್ ಸಾಮ್ರಾಜ್ಯದ ಪ್ರಖ್ಯಾತ ವಾಸ್ತು ಶಿಲ್ಪಿಗಳು, ರೋಮಿನ ಕಾರ್ಮಿಕರ ಜೊತೆಗೆ ಸಾವಿರಾರು ಮಂದಿ ಗುಲಾಮರು ಭಾಗವಹಿಸಿದ್ದರು. ಚಕ್ರವರ್ತಿ ಟಾಇಟಸ್ ಅದನ್ನು ಉದ್ಘಾಟಿಸಿದ.

ಚಕ್ರವರ್ತಿಯ ಪರಿವಾರಕ್ಕೆ ತೀರಾ ಹತ್ತಿರದಿಂದ ಕ್ರೀಡೆಗಳನ್ನು ನೋಡಿ ಆನಂದಿಸಲು ವಿಶೇಷ ಆಸನಗಳು, ವಿದೇಶಿ ಅತಿಥಿಗಳಿಗೆ, ಸೈನ್ಯಾಧಿಕಾರಿಗಳಿಗೆ, ಗಣ್ಯ ನಾಗರಿಕರಿಗೆ, ಅವರವರ ಅಂತಸ್ತಿಗೆ ತಕ್ಕಂತೆ ಆಸನಗಳು ಇದರಲ್ಲಿತ್ತು. ಒಂದೇ ಬಾರಿಗೆ ನಲವತ್ತೈದು ಸಾವಿರ ಮಂದಿ ಕುಳಿತು, ಐದು ಸಾವಿರ ಬಡ ನಾಗರಿಕರು ನಿಂತು ನೋಡುವ ಸೌಕರ್ಯವಿತ್ತು. ಇದಲ್ಲದೆ, ಕ್ರೀಡೆಗಳಲ್ಲಿ ಭಾಗವಹಿಸುವವರು ರಂಗ ಪ್ರವೇಶಿಸಲು, ಪಂದ್ಯಾಟಗಳಲ್ಲಿ ಪ್ರಾಣ ತೆತ್ತವರ ಕಳೇಬರವನ್ನು ಕೂಡಲೇ‌ ಸಾಗಿಸುವ ಏರ್ಪಾಟುಗಳೂ ಇದ್ದವು. ಮತ್ತೊಂದು ಕಾರ್ಯಕ್ರಮ ಪ್ರಾರಂಭವಾಗುವ ಮೊದಲು ಪ್ರೇಕ್ಷಕರ ಮನರಂಜಿಸಲು ಕೋಡಂಗಿಗಳಿಗೆ ಅವಕಾಶ, ನೆಲಮಾಳಿಗೆಗಳಲ್ಲಿ ಕ್ರೂರ ಮೃಗಗಳಿಗಾಗಿ ಪಂಜರಗಳು, ಪಂಜರಗಳ ಬಾಗಿಲು ತೆರೆಯಲು ಒಂದು ನಿಯಂತ್ರಣ ಕೇಂಡ್ರ, ಇತ್ಯಾದಿ ವ್ಯವಸ್ಥೆಗಳೂ ಇದ್ದವು.

ಆಗ ಪರಿಚಿತವಾಗಿದ್ದ ಕ್ರೀಡೆಗಳ ಪೈಕಿ ಖಡ್ಗಮಲ್ಲರುಗಳ ಕದನ ಬಹಳ ಜನಪ್ರಿಯವಾಗಿತ್ತು. ಇಂಥ ಜನಪ್ರಿಯ ಖಡ್ಗಮಲ್ಲರುಗಳಲ್ಲಿ ಗುಲಾಮನಾಗಿದ್ದ ಸ್ಪಾರ್ಟಕಸ್ ಕೂಡ ಒಬ್ಬ. ವೈಯಕ್ತಿಕ ಸಾಹಸದ ಕ್ರೀಡೆಯನ್ನು ರೋಮನರು ಕ್ರೂರ ಕ್ರೀಡೆಯಾಗಿ ಮಾರ್ಪಡಿಸಿದ್ದರು. ಅಂದಿನ ಜನರೂ ಇದನ್ನು ನೋಡುವುದಕ್ಕೆ ಒಗ್ಗಿ ಹೋಗಿದ್ದರು!

ಕಲೋಸಿಯಮ್ಮಿನ ಉದ್ಘಾಟನೆಗೆ ಮೊದಲು ನೂರು ದಿನಗಳ ಕಾಲ ನಡೆದ ಮೋಜಿನ ಕ್ರೀಡೆಗಳ ಸಂದರ್ಭದಲ್ಲಿ ಸಾವಿರಾರು ಗುಲಾಮರ, ಮೃಗಗಳ ಹತ್ಯೆ ನಡೆಯಿತು. ಗುಲಾಮರನ್ನು ಮಾತ್ರವಲ್ಲದೇ ಅಪರಾಧಿಗಳನ್ನೂ, ಸೈನ್ಯ ಸೇವೆ ತೊರೆದವರನ್ನೂ, ಮತ್ತು ಇನ್ನೂ ಹಲವು ಖೈದಿಗಳನ್ನೂಶಿಕ್ಷಿಸುವ ಉಪಾಯವಾಗಿ ಸಹ ಖಡ್ಗಮಲ್ಲರ ಕ್ರೀಡೆಯನ್ನು ಬಳಸಲಾಗುತ್ತಿತ್ತು. ಕೆಲವೊಮ್ಮೆ ಖೈದಿಗಳು ತಮ್ಮ ತಮ್ಮಲ್ಲಿಯೇ ಹೋರಾಡುತ್ತ ಮಿತ್ರರನ್ನು ಕೊಲ್ಲಬೇಕಾದ ಪರಿಸ್ತಿಥಿಯೂ ಉಂಟಾಗುತ್ತಿತ್ತು. ಮುಂದೆ ಕ್ರಿ. ಶ. ೪೦೪ರಲ್ಲಿ ಈ ಕ್ರೂರ ಕ್ರೀಡೆಯನ್ನು ಅಧಿಕೃತವಾಗಿ ರದ್ದುಪಡಿಸಲಾಯಿತು.

ಚಿತ್ರ ಕೃಪೆ: ಇಲ್ಲಿಂದ

Friday, July 31, 2009

ಶ್ರೀ ವರಮಹಾಲಕ್ಷ್ಮೀ ವ್ರತ

Vara Lakshmi

Lakshmi, the goddess of wealth, is more sought after than Saraswati, the goddess of learning. As the power and consort of Vishnu, the preserver. According to the Puranas, she was the incarnated daughter of the sage Bhrigu and his wife Khyati. She was later born out of Ksheera Sagara (ocean of milk) while being churned. Hence, her appellation, Ksheera Samudra Raja Tanaya. As consort of Vishnu, she is born as his spouse whenever he incarnates. When Vishnu appeared as Vamana, Parasurama, Rama, Krishna, she appeared as Padma or Kamala, Dharani, Sita and Rukmini. She is as inseparable from Vishnu as speech from meaning, or knowledge from intellect, or good deeds from righteousness.

Vara Lakshmi Vrata
The day begins with rangoli and sacred head baths just as any other festival and is marked by the performance of "Vara Lakshmi Vrata" by the women folk of the house. Worshipping Vara Lakshmi is rendered equivalent to Ashta Lakshmi pooja. It is thus held that the Goddess of wealth would bless those who perform the Vrata on this particular day of the year with Dhana (Money), Dhanya (food), Aayu (long life), Aarogya (health), Aishwarya (wealth), Satsantana (good off springs) and Soubhagya (long life of husband).

Festival
The preparation for the festival begins the prior evening, when a stage for the pooja is set after having cleaned the entire area. On the day, A bronze or silver kalasa, with water, akshatas and a couple of coins, is taken and five betel leaves are placed on to it. The kalasa is smeared with sandal paste and kum-kum is applied at five places. On this is placed a round coconut smeared with turmeric to which kum-kum is applied. A new cloth or saree is tied to the Kalasa and is worshipped as Vara Lakshmi. Some people even adore this with the face of the Vara Lakshmi decked with jewels.

Women folk of the house traditionally worship this Vara Lakshmi the next day, with Ashtottaram and Sahsranamavali, along with some new gold bought each year. The legend of the vrata is once again memorized in devotion and a "toram" of Nine threads and nine knots is tied to the Goddess first and then to the right wrist of the worshippers. Prasadams are offered in the numbers of either three or five or nine to the Goddess. And the pooja is concluded with the distribution of this prasadam and Tamboola to the married women in neighborhood. It also is customary for these women folk to visit the temples of the Goddess towards the evening.

Legend
Legend has it that Goddess Parvati has once asked Lord Siva about a vrata, performing which would render the women on the earth blessed with all kinds of wealth. Then did Lord Siva preach of "Vara Lakshmi Vrata" to be performed on a Friday that comes just before the full moon day in the month of Shravana. Illustrating the sanctity of the vrata, Lord Siva narrated the story of Charumati of Maratha desha, which runs like this -

Once upon a time, there lived a gracious and wise Brahmin lady called Charumati in the Maratha Desha, a town that had golden houses and golden walls. Charumathi was a Maha Pativrata, indulged in a whole-hearted worship of her husband and looked after her in laws with utmost respect. Pleased with her good nature, Goddess Lakshmi happens to appear in her dream and advises her to perform the Varalakshmi vrata on Shravana shukla shukravara preceding the full moon day. Charumathi prostrates in devotion to the Goddess in the dream itself and the next morning illustrates the dream to her husband and in-laws. With their consent, she tells the same to a few more women folk of the town and they together wait the day.

The much-awaited day finally comes and they set stage to worship the Goddess Vara Lakshmi at one corner of the house, which is cleaned up with cow dung. All of them perform the pooja to the Kalasa with all devotion and piety, tie the toram to their wrists and offer prasadam to the Goddess. Then does the miracle start as they go about to take the Pradakshinas after the pooja. They see themselves bedecked with various ornaments one at a time as - anklets on feet for the first, bracelets for the second and various other ornaments for the final pradakshina. Excited about the blessing of Vara Lakshmi, they once again prostrate to the Goddess and honour the Pundit with due Dakshina and conclude the vrata by taking the prasadam.

As the women folk stepped out of the house do they see their houses decked with all riches and golden chariots awaiting them outside Charumati’s house. Extremely happy about what all had happened, the women thank Charumati for having shared her luck with them. Ever since then is the Vara Lakshmi Vrata performed in every household on this auspicious day.

Legend also say that the vrata was later also preached by sage Suta to Sounaka and other sages. Another legend is that Chitranemi who was one cursed by Parvati for having made a partial judgement in favour of Shiva when asked to play the referee for their game, got relieved from the curse by having watched this vrata performed by some pious women. Such is the sanctity of the Vrata.

Shloka to be said on Vara Mahalakshmi

*Ganeshaya namah
Mahalakshmi Ashtakam

Namastestu Mahaamaaye Shreepeete Surapoojite
Shankha Chakra Gadaa Haste Mahaalakshmi Namostu Te.*

Meaning: O Mahaamaaya, abode of fortune, worshipped by the Gods, I salute Thee.
O Mahaalakshmi, one who has conch, disc and mace in Her hands, obeisance to Thee.

*Namaste Garudaroode Koalaasura Bhayankari
Sarva Paapa Hare Devi, Mahaalakshmi Namostu Te. *

Meaning: My salutations to Thee, who rides Garuda and are a terror to demon Kola;
O Devi Mahaalakshmi, remover of all miseries, my obeisance to Thee.

*Sarvajne Sarva Varade Sarva Dushta Bhayankari
Sarva Duhkha Hare Devi Mahaalakshmi Namostu Te. *

Meaning: O Devi Mahaalaksmi, who is the embodiment of knowledge, giver of all boons,
a terror to all the wicked, remover of all sorrows, obeisance to Thee.

*Siddhi Buddhi Prade Devi Bhukti Mukti Pradaayini
Mantra Moorthe Sadaa Devi Mahaa Lakshmi Namostu Te. *

Meaning: O Devi, You give success and intelligence and worldly enjoyment and liberation (as well).
Thou hast always the mystic symbols (Mantra) as Thy form, O Mahaalakshmi, obeisance to Thee.

*Aadyantarahite Devi Aadya Shakte Maheshvari
Yogaje Yogasambhoote Mahaalakshmi Namostu Te. *

Meaning: O Devi, Maheshwari, You are without a beginning or an end ,
You are the Primeval energy, You are the greatest ruler, You are born of Yoga.
O Mahaalakshmi, obeisance to Thee.

*Sthoola Sookshmah Mahaa Raudre Mahaa Sakthe Mahodaye
Mahaa Paapa Harey Devi Mahaalakshmi Namostu Te. *

Meaning: O Mahaalakshmi, You are both gross and subtle, most terrible (for the wicked),
You are the embodiment of great power and prosperity and You are remover of all sins, obeisance to Thee.

*Padmaasanasthite Devi Parabrahma Svaroopini
Paramesi Jaganmaata, Mahalakshmi Namostu Te. *

Meaning: O Devi, You are seated on the lotus, You are the Supreme Brahman,
You are the great Lord and Mother of the universe, O Mahaalakshmi, obeisance to Thee.

*Svetaambaradhare Devi Naanaalankaara Bhooshite
Jagatsthite Jaganmaatah, Mahaalakshmi Namostu Te
*
Meaning: O Devi, You are dressed in white garments and decked with various kinds of ornaments,
Thou art the mother of the universe and its support, O Mahalakshmi, obeisance to Thee.

*Mahaalakshmyaastaka Stottram Yad Pated Bhaktiman Naraha.
Sarva Siddhimavaapnoti Mahalakshmi Prasaadataha.
*
Meaning: Whoever with devotion reads this hymn to Mahalakshmi composed in eight stanzas attains all success through the Grace of Mahalakshmi.

*Ekakaale Patennityam Mahaapaapa Vinaashanam
Dvikaalam Yah Patennityam Dhana Dhaanya Samanvitaha
*
Meaning: Whoever reads this hymn at least once a day will have all their sins destroyed;
those who recite it twice will be blessed with wealth and prosperity.

*Trikaalam Yah Patennityam Mahaa Shatru Vinaashanam
Mahaalakshmir Bhavennityam Prasannaa Varadaa Shubhaa
*
Meaning: Those who recite this three times in a day will have all their enemies destroyed.
They will be always be blessed by the Goddess Mahalakshmi.

Sunday, July 26, 2009

ನಾಗರ ಪಂಚಮಿ.

On the fifth day of the bright half of Shravana month of Hindu calendar, people worship the snake or /nag/. The day is known as /Nag Panchami/. Nag Panchami has a special significance and is celebrated by the devotees with lot of faith, fear and devotion. It is firmly believed that the serpent lord associated with Lord Subrmanya who will be pleased by this worship will mitigate their sufferings and bring happiness. On this day, people visit temples specially dedicated to snakes and worship them.

In South India, the serpent is given a pride of place and you will find Naga idols installed in almost all temples and even on roadside platforms. It is believed that any harm done to snakes create miseries and sufferings. Serpent worship is very widely followed. The major Hindu gods, Lord Shiva has serpent as an ornament round his neck and Lord Vishnu has serpent Adhisesha as his bed and he is called Seshashayana (person sleeping on snake)

The day preceding Nag Panchami i.e. the fourth day of the bright half of Shravan month is called 'Naga Chauthi'. On this day women take head bath and wearing wet clothes which marks sanctity and divinity, visit the snake banas in the morning. Raw milk and ghee are offered followed by /haladi/ (turmeric powder), /kumkum, chandan/ (sandalwood paste), rice and flowers. Prayers are offered for the well being of the families. Those who offer such worship on this day normally undertake fasting on the day.

On Nag Panchami, people also make images of snakes using cow dung and place them on either side of the entrance to the house to welcome the snake god. In some families it is also a tradition to keep a silver idol of Serpent in the pooja room and worship by pouring raw milk and ghee, and decorate the idol with haladi, kumkum and flowers. Some people have the tradition of making an idol of serpent by mixing 'chandan' (sandal wood paste), 'haladi' (turmeric powder), and 'kumkum'' (sindhoor), and 'kesari' (saffron) and placed on a metal plate and worshiped. In some families, figures of snakes are drawn with red sandalwood paste on wooden boards, or purchase clay images of snakes coloured yellow or black. These are then worshiped and offered milk, ghee and flowers.

Nag Panchami is also connected with the following legend of Lord Krishna. Young Krishna was playing ball with the other cowboy friends, when suddenly the ball got entangled in the high branch of a tree. Krishna volunteered to climb the tree and fetch the ball. But below the tree the river Yamuna was flowing in full glory, in which the terrible poisonous snake Kalinga was living. Nobody dared to go near that place. Lord Krishna ignoring the warnings of his friends jumps into the water. The dangerous "Kalinga" serpent comes up. But Krishna was ready and jumping on the snake’s head, starts dancing on its head. Kalinga realizes the strength of Lord Krishna and pleads with Krishna: "Please, do not kill me." Krishna takes sympathy on Kalinga and after taking a promise that henceforth he would not harm anybody, he let the snake go free into the river again. Hence, Nag Panchami is also commemorated as a day of victory of Lord Krishna over Kalinga the legendary snake.

It is widely believed that snakes like milk. As this is the day of the serpents, devotees pour raw milk into snake banas around the house or near the temples to propitiate them. Sometimes, a small pot of milk with some flowers is placed near the holes of snake banas so that the snakes may drink it. It is firmly believed that if a snake actually drinks the milk, it is considered to be extremely auspicious and the devotees are blessed.

Temples devoted to Lord Subramanya (Lord Muruga-Kartikeya) conduct special poojas and prayers on this day and large number of devotees visits such temples to offer prayers.

A unique feature in South India is that Nag Panchami is also celebrated as Brother-Sisters Day. On this occasion, brothers visit the houses of their married sisters. Sisters apply milk and ghee on the back of the body of their brothers by using a flower followed by turmeric powder and kumkum. Food and eatables are offered and gifts are given with prayers to serpent Lord to bless their brothers with health, wealth and happiness. This has a very unique social significance which binds the two families.

The difference between Nag Panchami and other Hindu festivals like Holi, Diwali, and Navaratri is that Nag Panchami is not associated with pomp and splendor associated with other festivals but celebrated with lots of faith, sanctity and devotion.

Thursday, July 16, 2009

ಇದು ಯಾವ ಮರದ ಎಲೆ?

ಯಾವ ಎಲೆ,

ಈ ಚಿತ್ರ ಸೆರೆಹಿಡಿದದ್ದು ಚಿತ್ರದುರ್ಗಕ್ಕೆ ಹೋಗುವಾಗ.

ಸ್ಥಳ: ಕಾಮತ್ ಉಪಹಾರ್, ರಾಹೆ - ೪

ಈ ಎಲೆ ಯಾವ ಮರದ್ದು?


ವಾರಾಂತ್ಯದ ಕೆಲವು ಚಿತ್ರಗಳು

ಕಳೆದ ಶನಿವಾರ ಬೆಂಗಳೂರಿನ ಬನಶಂಕರಿ ೩ನೇ ಹಂತದಲ್ಲಿರುವ ಪ್ರವಚನ ಮಂದಿರದಲ್ಲಿ ವಿದ್ವಾನ್ ತೇಜಸ್ವಿ ರಘುನಾಥ್ ಅವರ ಕೊಳಲು ವಾದನ ಕಚೇರಿ ಇತ್ತು. ಅದು ಮುಗಿದ ಮೇಲೆ ಶ್ರೀಮತಿ ವಸಂತಲಕ್ಷ್ಮಿ ಅವರ ಕಾವ್ಯವಾಚನ ಕಾರ್ಯಕ್ರಮವೂ ಇತ್ತು.

ಅಲ್ಲಿ ಸೆರೆಹಿಡಿದ ಕೆಲವು ಚಿತ್ರಗಳು...

ಕೊಳಲು ವಾದನದಲ್ಲಿ ತಲ್ಲೀನ...

ವಿದ್ವಾನ್ ತೇಜಸ್ವಿ ರಘುನಾಥ್

ವಯೋಲಿನ್ ಸಹಕಾರ ಅಚ್ಯುತ ರಾವ್ ಅವರಿಂದ

ತಾಳ ಹಾಕುವುದರಲ್ಲಿ ಮಗ್ನ


ಶ್ರೀಮತಿ ವಸಂತಲಕ್ಷ್ಮಿ ಮತ್ತು ಶ್ರೀಮತಿ ಗಂಗಮ್ಮ ಕೇಶವಮೂರ್ತಿ(ಗಮಕ ವ್ಯಾಖ್ಯಾನ ಮಾಡಿದರು)



Wednesday, July 15, 2009

ಪವರ್ ಕಟ್ ಆದಾಗ...

ಇತ್ತೀಚೆಗೆ ಬೆಂಗಳೂರಿನಲ್ಲಿ ಲೋಡ್ ಶೆಡ್ಡಿಂಗ್ ಹಾವಳಿ.

ಪವರ್ ಕಟ್ ಆದಾಗ ಮನೆಯಲ್ಲಿ ಮೇಣದ ಬತ್ತಿಯನ್ನು ಅಂಟಿಸಿ ಕತ್ತಲನ್ನು ಹೋಗಲಾಡಿಸುತ್ತೇವೆ. ಕೆಲವರು ಟಾರ್ಚ್ ಬೆಳಕಿನಿಂದ ಕತ್ತಲನ್ನು ಹೋಗಲಾಡಿಸುತ್ತಾರೆ.

ನಿನ್ನೆ ಪವರ್ ಕಟ್ ಆದಾಗ ಕೆಲವು ಚಿತ್ರಗಳನ್ನು ಸೆರೆಹಿಡಿದೆ.

ಅವುಗಳಲ್ಲಿ ಈ ಎರಡು ಚಿತ್ರಗಳನ್ನು ಇಲ್ಲಿ ಹಂಚಿಕೊಳ್ಳಬೇಕೆಂದು ಅನ್ನಿಸಿತು.

ಪವರ್ ಕಟ್ ಆದಾಗ...

ಪವರ್ ಕಟ್ ಆದಾಗ...

ಚಿತ್ರಗಳನ್ನು ಸ್ಪಾಟ್ ಮೀಟರಿಂಗ್ ಮೋಡ್ ಅಲ್ಲಿ ಸೆರೆಹಿಡಿದಿರುವುದು.

Friday, July 10, 2009

ಆಂಫಿಥಿಯೇಟರ್

ಆಂಫಿಥಿಯೇಟರ್.

ಎಪಿಡೂರುಸ್ ಆಂಫಿಥಿಯೇಟರ್

ಪುರಾತನ ಕಾಲದಲ್ಲಿ ಗ್ರೀಕರು ನಾಟಕ, ಸಂಗೀತ ಕಲೆಗಳ ಪ್ರದರ್ಶನಕ್ಕಾಗಿ ಆಂಫಿಥಿಯೇಟರ್ ಎಂಬ ಬಯಲು ರಂಗಮಂದಿರವನ್ನು ಉಪಯೋಗಿಸುತ್ತಿದ್ದರು. ಪ್ರಾಚೀನ ಗ್ರೀಸಿನದು ಲೋಕ ಪ್ರಖ್ಯಾತವಾದ ನಾಗರಿಕತೆ. ಅನೇಕ ದಾರ್ಶನಿಕರು, ತರ್ಕ ಪಂಡಿತರು, ಖಗೋಳ ಶಾಸ್ತ್ರಜ್ಞರು, ಗಣಿತ ಶಾಸ್ತ್ರತಜ್ಞರುಗಳನ್ನು ಜಗತ್ತಿಗೆ ನೀಡಿದ ಸಂಸ್ಕೃತಿ. ಜಗತ್ತನ್ನು ಕುರಿತ ಕಾತರ, ಕುತೂಹಲ, ಪ್ರಜಾಪ್ರಭುತ್ವ, ತರ್ಕ, ಚಿಂತನೆ, ಜಿಜ್ಞಾಸೆ, ಕ್ರೀಡೆ - ಈ ಹಿನ್ನೆಲೆಯಲ್ಲಿ ಅಲ್ಲಿ ಕಲೆಗಳು ವಿಕಾಸಗೊಂಡವು. ಸಾಕ್ರಟಿಸ್, ಪ್ಲೇಟೋ, ಅರಿಸ್ಟಾಟಲ್, ಅರಿಸ್ಟೋಫೆನೀಸ್, ಡೆಮಾಸ್ತನೀಸ್, ಪೈಥಾಗರಸ್, ಮುಂತಾದ ಮಹನೀಯರು ಗ್ರೀಸಿನ ಮಣ್ಣಿನಲ್ಲಿ ಜನಿಸಿದರು.

ಪುರಾತನ ಅಥಿನಾಯ್(ಅಥೆನ್ಸ್)ಅಲ್ಲಿ ಗ್ರೀಕರ ಮಧು ಮತ್ತು ಹರ್ಷೋನ್ಮಾದ ದೇವತೆ ಡಯೋನಿಸಿಸ್ ಸ್ಮರಣಾರ್ಥ ನಿರ್ಮಿತವಾದ ಆಂಫಿ ಥಿಯೇಟರ್ ಪ್ರಾಚೀನ ಬಯಲು ರಂಗಮಂದಿರ. ಇದರ ನಿರ್ಮಾಣ ಕ್ರಿ. ಪೂ. ಸುಮಾರು ೭-೬ನೇ ಶತಮಾನ. ವೇದಿಕೆಯ ಬೆನ್ನು ಭಾಗವನ್ನು ಬಿಟ್ಟು ಮೂರು ಕಡೆ ಸೋಪಾನದಂತಹ ಆಸನ ಸಾಲುಗಳು, ರಂಗ ಮಂಚದಲ್ಲಿ ನಡೆಯುವ ದೃಶ್ಯ ಎಲ್ಲ ಕಡೆಗೂ ಕಾಣಿಸುವಂತೆ ದಿಬ್ಬದ ಸ್ಥಳಗಳಲ್ಲಿ ಆಸನಗಳು. ಸುಮಾರು ಎಂಬತ್ತು ಸಾವಿರ ಜನರು ಕುಳಿತು ನೋಡಲು ಅವಕಾಶವಾಗುವಂತೆ ಇದನ್ನು ನಿರ್ಮಿಸಲಾಗಿದೆ.

ಈ ರಂಗ ಮಂದಿರದಲ್ಲಿ ಪ್ರತಿವರ್ಷ ವಸಂತೋತ್ಸವ ನಡೆಯುತ್ತಿತ್ತು. ಅದಂತೂ ಭಾರೀ ಮೋಜಿನ ಉತ್ಸವ. ಪ್ರತಿವರ್ಷ ನಾಟಕ, ನಾಟ್ಯ, ಸಂಗೀತ ಮತ್ತು ಕ್ರೀಡಾ ಸ್ಪರ್ಧೆಗಳು ನಡೆಯುತ್ತಿದ್ದವು. ಕಲೆಗಾರರು, ಕ್ರೀಡಾ ಪಟುಗಳು ತಮ್ಮ ಸಾಮರ್ಥ್ಯ ತೋರಿಸಲು ವಸಂತೋತ್ಸವ ಒಳ್ಳೆಯ ಅವಕಾಶ ಒದಗಿಸುತ್ತಿದ್ದವು.
ಪ್ರಾಯಶಃ ದುರಂತ ನಾಟಕ ಸಹ ಗ್ರೀಸಿನದೇಕೊಡುಗೆ. ಎಸ್ಕಿಲಸ್, ಸೋಫೋಕ್ಲೀಸ್, ಯೂರಿಪಿಡೀಸ್ ಮುಂತಾದವರು ಪ್ರಸಿದ್ಧ ನಾಟಕಕಾರರು. ಒಲಿಂಪಿಕ್ ಪಂದ್ಯಾಟಗಳು ಸಹ ಗ್ರೀಕರು ಜಗತ್ತಿಗೆ ನೀಡಿದ ಅಮೂಲ್ಯ ಕೊಡುಗೆ.

ಗ್ರೀಕ ದುರಂತ ನಾಟಕಗಳನ್ನು ಪ್ರದರ್ಶಿಸುತ್ತ ಬಂದಿದ್ದ ಎಪಿಡೂರುಸ್ ಆಂಫಿಥಿಯೇಟರಿನಲ್ಲಿ ಈಗಲೂ ಪ್ರತಿವರ್ಷ ನಾಟಕ ಪ್ರದರ್ಶನಗಳನ್ನು ಏರ್ಪಡಿಸಲಾಗುತ್ತದೆ. ಇದು ಭವ್ಯವಾದ ತೆರೆದ ರಂಗ ಮಂದಿರ. ಮೊದಲು ಮರದಲ್ಲಿ ನಿರ್ಮಿಸಲಾಗಿದ್ದ ಇದರ ಆಸನಗಳನ್ನು ಬದಲಾಯಿಸಿ, ಕಲ್ಲಿನಿಂದ ನಿರ್ಮಿಸಿದ ಆಸನಗಳನ್ನು ಜೋಡಿಸಲಾಗಿದೆ.

ಚಿತ್ರ ಕೃಪೆ:ಇಲ್ಲಿಂದ

Tuesday, June 30, 2009

ತುತ್ತೂರಿ ಹೂವು.


ಜೂನ್ ೨೬ರ ಬೆಳಿಗ್ಗೆ ಮನೆಯ ಬಳಿ ಈ ಹೂವು ಕಾಣಿಸ್ತು. ಈ ಹೂವು ರಾತ್ರಿ ಅರಳುತ್ತದೆ. ಬೆಳಿಗ್ಗೆ ಬಾಡುತ್ತದೆ. ಈ ಹೂವು ದತುರ ಅಥವಾ ತುತ್ತೂರಿ ಹೂವು.
ಇದಕ್ಕೆ ಉಮ್ಮತ್ತಿ ಹೂವು ಎಂದೂ ಕರೆಯಲಾಗುತ್ತದೆ. ಎಲೆ ಸ್ವಲ್ಪ ಬಿಳಿ ಮಿಶ್ರಿತ ಹಸಿರಿದ್ದರೆ ಬಿಳಿ ಉಮ್ಮತ್ತಿ,ಗಾಡ ಹಸಿರಿದ್ದರೆ ಕರಿ ಉಮ್ಮತ್ತಿ. ಇದರ ಎಲೆಗಳನ್ನು ಗಾಯವಾದಾಗ ಹೊಸಗಿ ಗಾಯದ ಮೇಲೆ ಹಿಂಡುತ್ತಾರೆ. ತಿಪ್ಪೆಗಳ ಮೇಲೆ ಜಾಸ್ತಿ ಬೆಳೆಯುತ್ತದೆ. ದನಕರುಗಳು ಮೇಯುವುದಿಲ್ಲ. ಇದರ ಕಾಯಿ ಮುಳ್ಳುಹೊದಿಕೆಯಿಂದ ಕೂಡಿದ್ದು,ಬಲಿತ ಕಾಯಿಯ ಒಳಗೆ ಕಪ್ಪನೆಯ ಬೀಜಗಳಿರುತ್ತವೆ. ಮುಳ್ಳುಚೆಂಡಿನಂತೆ ಹಸಿರು ಬಣ್ಣದಲ್ಲಿರುತ್ತದೆ. ಇದನ್ನು ಬ್ಯಾಟರಿ ಹೂವು ಎಂದೂ ಕರೀತಾರೆ.
ಹಿಂದಿನ ಕಾಲದಲ್ಲಿ ಇದರ ಬೀಜವನ್ನು ಅರೆದು ರೊಟ್ಟಿ ಹಿಟ್ಟಿನಲ್ಲಿ ಕಲಸಿ ರೊಟ್ಟಿ ಮಾಡಿ ಉಂಡೊ, ಉಣಿಸಿಯೊ ಸಾವನ್ನು ಆಹ್ವಾನಿಸುತ್ತಿದ್ದರಂತೆ.

ಪುರಾತನ ಜಗತ್ತಿನ ಏಳು ಅದ್ಭುತಗಳು.

ಪುರಾತನ ಜಗತ್ತಿನ ಏಳು ಅದ್ಭುತಗಳು.

ಪ್ರಾಚೀನ ಜಗತಿನ ಅದ್ಭುತಗಳನ್ನು ಗುರುತಿಸಿದವರು ಗ್ರೀಕರು. ಅವು ಇದ್ದ ಸ್ಥಳಗಳು ಈಗ ಯೂರೋಪು ಮತ್ತು ಮಧ್ಯ ಪೂರ್ವ ರಾಷ್ಟ್ರಗಳಲ್ಲಿವೆ. ಈ ಅದ್ಭುತಗಳ ಪೈಕಿ ಪಿರಮಿಡ್ ಗಳು ಐದು ಸಾವಿರ ವರ್ಷಗಳ ನಂತರವೂ ತಲೆಯೆತ್ತಿ ನಿಂತಿವೆ. ಪ್ರತಿಯೊಂದು ಅದ್ಭುತ ನಿರ್ಮಾಣದ ಹಿಂದೆ ಮನುಷ್ಯನ ಬುದ್ಧಿಶಕ್ತಿ ಮತ್ತು ಅಪಾರ ಶ್ರಮ ಇದ್ದಿತೆಂಬುದನ್ನು ಮರೆಯಲಾಗದು. ಅವುಗಳ ಬಗ್ಗೆ ಲಭ್ಯವಿದ್ದ ಸಾಹಿತ್ಯ, ದಾಖಲೆಗಳ ಆಧಾರದ ಮೇಲೆ ಅವುಗಳ ಸಂಪೂರ್ಣ ಚಿತ್ರವನ್ನು ಕಲ್ಪಿಸಿಕೊಳ್ಳಲು, ಚಿತ್ರಗಳನ್ನು ರಚಿಸಲು ಪ್ರಯತ್ನಿಸಲಾಗಿದೆ. ಉದಾಹರಣೆಗೆ, ಬ್ಯಾಬಿಲೀನಿಯಾದದಲ್ಲಿ ನಡೆದ ಉತ್ಖನನದ ಸಂದರ್ಭದಲ್ಲಿ ದೊರೆತ ಅವಶೇಷಗಳ ಆಧಾರದ ಮೇಲೆ ಅಲ್ಲಿದ್ದ ಅದ್ಭುತ ಗೋಡೆಯ ಒಂದು ಭಾಗವನ್ನು ಯಥಾವತ್ ನಿರ್ಮಿಸಿ ಬರ್ಲಿನ್ನಿನ ವಸ್ತು ಸಂಗ್ರಹಾಲಯದಲ್ಲಿ ಇರಿಸಲಾಗಿದೆ. ಹಾಗೆಯೇ ಮುಸಲ್ಲೋನನ ಸಮಾಧಿಯ ಭಿತ್ತಿಯಲ್ಲಿದ್ದ ಉಬ್ಬು ಚಿತ್ರಗಳನ್ನು ಬ್ರಿಟಿಷ್ ವಸ್ತುಸಂಗ್ರಹಾಲಯದಲ್ಲಿ ಇರಿಸಲಾಗಿದೆ. ಅರ್ತೆಮಿಸ್ ಫಲದೇವತೆಯ ಪ್ರತಿಮೆ ಸಹ ವಸ್ತು ಸಂಗ್ರಹಾಲದಲ್ಲಿದೆ. ಅಲೆಕ್ಸಾಂಡ್ರಿಯಾದ ನಾವೆಗಳಿಗೆ ದಾರಿ ತೋರಿಸುವ ದೀಪಸ್ತಂಭ ಜಗತ್ತಿನಲ್ಲಿ ನಿರ್ಮಿಸಿದ ಮೊತ್ತ ಮೊದಲಿನ ದೀಪ ಸ್ತಂಭವೆಂದು ಹೇಳಲಾಗಿದೆ.

ಪ್ರಾಚೀನ ಕಾಲದಿಂದ ಇಂದಿನವರೆಗೆ ಮನುಷ್ಯ ಅದ್ಭುತವೆನಿಸುವಂಥ ಅನೇಕ ರಚನೆಗಳನ್ನು ನಿರ್ಮಿಸಿದ್ದಾನೆ. ಎಲ್ಲ ಕಾಲಗಳಲ್ಲಿಯೂ ಪ್ರತಿಭಾವಂತರಾದ, ಮಹತ್ವಾಕಾಂಕ್ಷೆಯ ಜನರು ಬದುಕಿದ್ದರು. ಐದು ಸಾವಿರ ವರ್ಷಗಳ್ ಹಿಂದೆ ತಂತ್ರಜ್ಞಾನ ಇಂದಿನಷ್ಟು ಮುಂದುವರೆದಿರಲಿಲ್ಲ. ಆದರೂ ಅಂದಿನ ಕೆಲವು ರಚನೆಗಳು ನಮ್ಮನು ಬೆರಗುಗೊಳಿಸುತ್ತವೆ. ಒಂದು ಶಿಲ್ಪವಾಗಿರಲಿ, ಭವನವಾಗಿರಲಿ, ದೇವಾಲಯವಾಗಿರಲಿ, ಹಲವು ಶತಮಾನಗಳ ನಂತರವೂ ನೋಡಿ ಅಚ್ಚರಿಗೊಳ್ಳುವಂಥದ್ದನ್ನು ಅವರು ರಚಿಸಿದ್ದರು.

ಪುರಾತನ ಜಗತ್ತಿನ ಏಳು ಅದ್ಭುತಗಳು.
೧. ಪಿರಮಿಡ್ ಗಳು - ಗಿಜಾ - ಕ್ರಿ. ಪೂ. ೨೭೦೦-೨೩೦೦.
೨. ಬ್ಯಾಬಿಲೋನಿಯಾದ ಗೋಡೆಗಳು ಮತ್ತು ತೂಗು ಉದ್ಯಾನಗಳು - ಬ್ಯಾಬಿಲೋನಿಯಾ - ಕ್ರಿ. ಪೂ. ಸುಮಾರು ೬೦೦.
೩. ಮುಸಲ್ಲೋನನ ಸಮಾಧಿ - ಹಲಿಕರ್ನಾಸೋಸ್ - ಕ್ರಿ.ಪೂ. ೩೫೧.
೪. ಜ್ಯೂಸ್ ದೇವತೆಯ ಪ್ರತಿಮೆ - ಒಲಿಂಪಿಯ - ಕ್ರಿ. ಪೂ. ಸುಮಾರು ೪೫೬.
೫. ಫಲದೇವತೆ ಅರ್ತೆಮಿಸ್ - ಎಫೆಸೋಸ್ - ಕ್ರಿ. ಪೂ. ಸುಮಾರು ೫೬೦.
೬. ಕಲೋಸಸ್ ಪ್ರತಿಮೆ - ರ್ ಹೋಡ್ಸ್ ದ್ವೀಪ - ಕ್ರಿ. ಪೂ. ಸುಮಾರು ೨೯೨ - ೨೮೦.
೭. ಅಲೆಕ್ಸಾಂಡ್ರಿಯಾದ ದೀಪಸ್ತಂಭ ಅಲೆಕ್ಸಾಂಡ್ರಿಯ - ಕ್ರಿ. ಪೂ. ಸುಮಾರು ೩೩೧.

ಚಿತ್ರ ಕೃಪೆ: ಇಲ್ಲಿಂದ.

(ಸಶೇಷ)


Saturday, June 27, 2009

ಮಾನವ ನಿರ್ಮಿತ ಅದ್ಭುತಗಳು - ೧

ಮಾನವ ನಿರ್ಮಿತ ಅದ್ಭುತಗಳು

ಸುಮಾರು ನೂರು ಮೈಲು ದೂರದ ಭೂಮಿ ಅಗೆದು ಸೂಯೆಜ್ ಕಾಲುವೆ ನಿರ್ಮಿಸುವ ಪ್ರಸ್ತಾಪ ಬಂದಾಗ, ಅದನ್ನು ಕೇಳಿದವರು "ಏನು? ಹಾರೆ ಗುದ್ದಲಿಗಳಿಂದ ನೂರು ಮೈಲು ಕಾಲುವೆ ಅಗೆಯಲು ಸಾಧ್ಯವೇ?" ಎಂದು ಪ್ರತಿಕ್ರಿಯೆ ಸೂಚಿಸಿದರಂತೆ. ಆದರೆ ಇಂದು ಸೂಯೆಜ್ ಕಾಲುವೆಯಲ್ಲಿ ಹಡಗುಗಳು ಸಂಚರಿಸುತ್ತಿವೆ ಎಂದರೆ ಮಾನವ ತನ್ನ ಶ್ರಮದಿಂದ ಕಷ್ಟಸಾಧ್ಯವೆನಿಸುವುದನ್ನೂ ಸಾಧಿಸಬಹುದು ಎಂದು ಸಾಬೀತು ಪಡಿಸಿದ್ದಾನೆ ಎಂದಾಗುತ್ತದೆ ಅಲ್ಲವೇ?

ಹಿಂದಿನದಕ್ಕಿಂತ ದೊಡ್ಡದಾದ ಮತ್ತೊಂದನ್ನು ತಮ್ಮ ಕಾಲದಲ್ಲಿ ನಿರ್ಮಿಸಬೇಕು ಎಂಬ ಮಹತ್ವಾಕಾಂಕ್ಷೆ ಪ್ರಾಯಶಃ ಎಲ್ಲ ಕಾಲದ ಜನರಲ್ಲೂ ಇತ್ತೆಂದು ಹೇಳಬಹುದು. ಹಲವು ಸಾವಿರ ವರ್ಷಗಳ ನಂತರವೂ ನಮ್ಮ ಮಧ್ಯೆ ಉಳಿದಿರುವ, ನಮ್ಮ ಕುತೂಹಲಕ್ಕೂ,, ಅಚ್ಚರಿಗೂ ಕಾರಣವಾಗಿರುವ ಹಲವು ಅದ್ಭುತ ರಚನೆಗಳು ಇದಕ್ಕೆ ಹೇಳಿ ಮಾಡಿಸಿದಂತಿವೆ.

ಇಂದಿನಷ್ಟು ಸೌಲಭ್ಯ, ಸಮಾಚಾರ ವಿನಿಮಯ ಹಾಗೂ ಅಧುನಿಕ ಉಪಕರಣಗಳಿಲ್ಲದಿದ್ದ ಕಾಲದಲ್ಲಿ, ಆಗ ಬಳಕೆಯಲ್ಲಿದ್ದ ಸಾಧಾರಣ ಉಪಕರಣಗಳ ಸಹಾಯದಿಂದಲೇ ಭವ್ಯ ರಚನೆಗಳನ್ನು ನಿರ್ಮಿಸಿದ ಅಂದಿನ ಜನರ ಬಗ್ಗೆ ನಮಗೆ ಮೆಚ್ಚುಗೆಯಾಗುತ್ತದೆ.

ಪಿರಮಿಡ್ ಅಂತಹ ರಚನೆಗಳಲ್ಲಾಗಲಿ, ಇತ್ತೀಚಿನ ಸೂಯೆಜ್ ಮತ್ತು ಪನಾಮ್ ಕಾಲುವೆಗಳಲ್ಲಾಗಿರಲಿ, ಇಂಗ್ಲೀಷ್ ಕಡಲ್ಗಾಲುವೆಯೊಳಗೆ ನಿರ್ಮಿಸಿದ ಚಾನೆಲ್ ಟನಲ್ಲುಗಳಲ್ಲಾಗಿರಲಿ, ಭವ್ಯ ಭವನಗಳಲ್ಲಾಗಿರಲಿ ಮನುಷ್ಯ ತನ್ನ ಶ್ರಮದ ಜೊತೆಗೆ ವೈಜ್ಞಾನಿಕ ಶಿಸ್ತನ್ನೂ ಅಳವಡಿಸಿಕೊಂಡಿದ್ದಾನೆ. ಇಂತಹ ಅದ್ಭುತಗಳನ್ನು ನಿರ್ಮಿಸಲು ಅದು ತಳಹದಿಯಾಗಿದೆ.

ಪುರಾತನ ಜನರಿಗೆ ಇಂದಿನವರಿಗಿರುವ ವೈಜ್ಞಾನಿಕ ಪರಿಕಲ್ಪನೆ ಇಲ್ಲದಿರಬಹುದು. ಆದರೂ ಅವರು ತಮ್ಮ ಅನುಭವಗಳಿಂದ ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳುತ್ತಿದ್ದರು. ಹಿಂದಿನ ಅದ್ಭುತಗಳಿಂದ ಇಂದಿನ ಗಗನ ಚುಂಬಿಗಳವರೆಗೆ ಮಾನವ ನಿರ್ಮಿತ ಅದ್ಭುತ ರಚನೆಗಳ ನಿರ್ಮಾಣ ಮುಂದುವರೆಯುತ್ತಲೇ ಇದೆ.

(ಸಶೇಷ)

Thursday, June 18, 2009

ತಲೆ ನವೆ...



ಮೊನ್ನೆ ಭಾನುವಾರ ರಾಮನಗರಕ್ಕೆ ಹೋಗಿದ್ದಾಗ ರಾಮದೇವರ ಬೆಟ್ಟದ ಬಳಿ ಕ್ಯಾಮೆರಾ ಕಣ್ಣಿಗೆ ಕಂಡದ್ದು ಹೀಗೆ.

ಇಬ್ಬನಿ...

<span title=

ಮೊನ್ನೆ ಭಾನುವಾರ ರಾಮನಗರಕ್ಕೆ ಹೋಗಿದ್ದಾಗ ರಾಮದೇವರ ಬೆಟ್ಟದ ಬಳಿ ಕ್ಯಾಮೆರಾ ಕಣ್ಣಿಗೆ ಕಂಡದ್ದು ಹೀಗೆ.

Thursday, June 11, 2009

ಅಂತರ್ಜಾಲವಿಲ್ಲದೆ...


ಮೇತಿಂಗಳ ಕೊನೆಯ ಶನಿವಾರ ನನ್ನ ಕಂಪ್ಯೂಟರಿನ ಅಂತರ್ಜಾಲ ಸಂಪರ್ಕ ಕಡಿದು ಹೋಯ್ತು. ನೆಟ್-ವರ್ಕ್ ಕಾರ್ಡ್ ಹಾಳಾಗಿತ್ತು.

ಜೂನ್ ಒಂದರಿಂದ ಆಫೀಸ್ ಅಲ್ಲಿ ಕೂಡ ಅಂತರ್ಜಾಲ ಸಂಪರ್ಕ ಕಡಿದು ಹೋಯ್ತು. ಅಂತರ್ಜಾಲ ಒಂದು Addiction.

ಅಂತರ್ಜಾಲ ಇಲ್ಲದಿದ್ದರೆ ಯಾವುದೋ ಬೇರೆ ಊರಿಗೆ ಬಂದ ಹಾಗೆ ಅನ್ಸತ್ತೆ.

ನನ್ನ ಕಂಪ್ಯೂಟರಿನಲ್ಲಿ ಉಬುಂಟು ೯.೦೪

ಇದೆಲ್ಲದರ ಮಧ್ಯೆ, ಕೆಲಸದ ಒತ್ತಡ. ಆದರೂ ಇಂದು ಬಿಡುವು ಮಾಡಿಕೊಂಡು ಕಾರನ್ನು ಸರ್ವೀಸ್ ಮಾಡಲು ಸರ್ವೀಸ್ ಸ್ಟೇಷನ್ ಗೆ ಕೊಟ್ಟೆ. ನಂತರ ಆಫೀಸಿನ ಬಳಿ ಇರುವ ಕಂಪ್ಯೂಟರ್ ಹಾರ್ಡ್-ವೇರ್ ಅಂಗಡಿಗೆ ಹೋಗಿ ನೆಟ್-ವರ್ಕ್ ಕಾರ್ಡ್, ಸಿಡಿ ಪೌಚ್, ೫ ಖಾಲಿ ಸಿಡಿ ಮತ್ತು ೫ ಖಾಲಿ ಡಿವಿಡಿಗಳನ್ನು ಕೊಂಡು ಕೊಂಡೆ.

ಮನೆಗೆ ಬಂದು ನೆಟ್-ವರ್ಕ್ ಕಾರ್ಡನ್ನು ಕಂಪ್ಯೂಟರಿಗೆ install ಮಾಡಿದೆ.

ಮನೆಯಲ್ಲಿ ಅಂತರ್ಜಾಲ ಈಗ ಸರಿ ಹೋಗಿದೆ.

-------------------------------------------------------------------------

ಉಬುಂಟು ೯.೦೪ install ಮಾಡಿ ಬರೆದ ಮೊದಲ ಬ್ಲಾಗ್ ಬರಹ.

Thursday, May 28, 2009

ಬೋಳು ಮರ ಮತ್ತು ನಾನು.

ಮೇ ೨ ರಂದು ಸಿದ್ಧರಬೆಟ್ಟಕ್ಕೆ ಹೋಗಿದ್ದಾಗ ನನ್ನ ಕ್ಯಾಮೆರಾದಲ್ಲಿ ಸ್ನೇಹಿತ ಸೆರೆಹಿಡಿದ ಚಿತ್ರ ಇದು. 
ಚಿತ್ರದಲ್ಲಿರುವ ವಿಷಯಕ್ಕೆ ಸಂಬಂಧಿಸಿದಂತೆ ನಿಮಗೆ ಹೊಳೆಯುವ ಕಥೆ/ಕವನ/ಚುಟುಕ ಏನಾದರೂ ಬರೆಯಿರಿ. 

Monday, May 25, 2009

ಸಿದ್ಧರ ಬೆಟ್ಟದಲ್ಲಿ ಒಂದು ದಿನ.

ಮೇ ೨ ೨೦೦೯ ರಂದು ಸಿದ್ಧರಬೆಟ್ಟಕ್ಕೆ ಹೋಗಿದ್ದೆವು.

ಅಲ್ಲಿ ಸೆರೆಹಿಡಿದ ಹಲವು ಚಿತ್ರಗಳಲ್ಲಿ ಕೆಲವನ್ನು ಇಲ್ಲಿ ಸೇರಿಸಿದ್ದೇನೆ.

ಸಿದ್ಧರ ಬೆಟ್ಟದಿಂದ ಕಾಣುವ ದೃಶ್ಯ ೧

ಸಿದ್ಧರ ಬೆಟ್ಟದಿಂದ ಕಾಣುವ ದೃಶ್ಯ ೨

ಹಸಿರು ತೋರಣ


Saturday, May 16, 2009

ಜಿಗಣೆ

ಜಿಗಣೆ...

ಸಾಮಾನ್ಯವಾಗಿ ಜಿಗಣೆಗಳು ರಕ್ತ ಹೀರಿ ಬದುಕುವ ಕೀಟಗಳು.

ಈ ಜಿಗಣೆಗಳು ಸಾಮಾನ್ಯವಾಗಿ ಪಾಚಿ ಇರುವ ಕಡೆ ಹೆಚ್ಚಾಗಿ ಕಾಣಿಸುತ್ತದೆ. ಜಲಪಾತದ ಹತ್ತಿರದ ಬಂಡೆಗಳ ಮೇಲೆ ಹೆಚ್ಚಾಗಿ ಇವು ಇರುತ್ತವೆ.

ಇವು ಮನುಷ್ಯರ ರಕ್ತ ಮತ್ತು ಪ್ರಾಣಿಗಳ ಹೀರಿ ಬದುಕುತ್ತವೆ.

ಇದು ಸಾಮಾನ್ಯವಾಗಿ ಕಾಲಿಗೆ ಅಂಟಿಕೊಳ್ಳುತ್ತವೆ. ಇವು ಕಡಿಯುವುದು ತಿಳಿಯುವುದೇ ಇಲ್ಲ. ಕಡಿದ ನಂತರವೇ ರಕ್ತ ಹೀರಲು ಶುರು ಮಾಡುತ್ತವೆ. ರಕ್ತ ಹೀರುವಾಗ ಇದರ ಮೈ ದೊಡ್ಡದಾಗುತ್ತದೆ. ಹಾಗೇ ಇವು ತಮ್ಮ ದೇಹದ ತೂಕವನ್ನು ತಡೆಯಲಾರದೇ ಕೆಳಗೆ ಬೀಳುತ್ತವೆ.

ಇವು ಕಡಿದ ಭಾಗದಲ್ಲಿ ತುರಿಕೆಯುಂಟಾಗುತ್ತದೆ. ಸ್ವಲ್ಪ ಸಮಯದ ಬಳಿಕ ಸರಿಹೋಗುತ್ತದೆ.

ಈ ಜಿಗಣೆಗಳನ್ನು ಸಕ್ಕರೆ ಖಾಯಿಲೆಯಿಂದ ಉಂಟಾದ ಗ್ಯಾಂಗ್ರೀನ್‌ಅನ್ನು ತಡೆಯಲು ಬಳಸಿರುವುದನ್ನು ಎಲ್ಲೋ ನೋಡಿದ ನೆನಪು.

ಜಿಗಣೆಗಳ ಬಗ್ಗೆ ಇನ್ನಷ್ಟು ಮಾಹಿತಿಯಿದ್ದರೆ ಹಂಚಿಕೊಳ್ಳಿರಿ.

Monday, May 04, 2009

ಸೂರ್ಯಮೂರ್ತೇ ನಮೋಸ್ತುತೇ!

ಸೂರ್ಯಮೂರ್ತೇ ನಮೋಸ್ತುತೇ!

ಶನಿವಾರ ಬೆಳಿಗ್ಗೆ ರವಿಯು ಉದಯಿಸುತ್ತಿರುವಾಗ ನಮ್ಮ ಮನೆಯ ಮಹಡಿಯಿಂದ ಹೀಗೆ ಕಾಣಿಸಿದ. ಆಗ ಸೆರೆಹಿಡಿದ ಚಿತ್ರ.

ಉದಯರವಿ


ರವಿಯನ್ನು ನೋಡಿದಾಗ ನೆನಪಾದದ್ದು, ಮುತ್ತುಸ್ವಾಮಿ ದೀಕ್ಷಿತರ ಕೃತಿ ’ಸೂರ್ಯಮೂರ್ತೇ ನಮೋಸ್ತುತೇ!’
ಇದು ಸೌರಾಷ್ಟ್ರ ರಾಗದಲ್ಲಿದ್ದು, ಧೃವತಾಳದಲ್ಲಿದೆ.

ಆ ಕೃತಿ ಇಲ್ಲಿದೆ. ಹಾಗೇ ಇದರ ತಾತ್ಪರ್ಯವನ್ನು ಬರೆದಿದ್ದೇನೆ.
ತಪ್ಪಿದ್ದರೆ ತಿದ್ದಿರಿ.

ಪಲ್ಲವಿ:
||ಸೂರ್ಯಮೂರ್ತೇ ನಮೋಸ್ತುತೇ, ಸುಂದರಚ್ಛಾಯಾಧಿಪತೇ|| (ಸೂರ್ಯ ಮೂರ್ತೇ)

ಅನುಪಲ್ಲವಿ:
||ಕಾರ್ಯಕಾರಣಾತ್ಮಕ ಜಗತ್ಪ್ರಕಾಶಕ, ಸಿಂಹರಾಶ್ಯಾಧಿಪತೇ||
||ಆರ್ಯವಿನುತ ತೇಜಸ್ಫೂರ್ತೇ, ಆರೋಗ್ಯಾದಿ ಫಲ ಕೀರ್ತೇ||

ಚರಣ:
||ಸಾರಸಮಿತ್ರ ಮಿತ್ರಭಾನೋ, ಸಹಸ್ರ ಕಿರಣ ಕರ್ಣಸೂನೋ||
||ಕ್ರೂರ ಪಾಪಹರ ಕೃಶಾನೋ, ಗುರುಗುಹ ಮೋದಿತ ಸ್ವಭಾನೋ||
||ಸೂರಿ ಜನೇಡಿತ ಸುದಿನಮಣೇ, ಸೋಮಾದಿಗ್ರಹ ಶಿಖಾಮಣೇ||
||ಧೀರಾರ್ಚಿತ ಕರ್ಮಸಾಕ್ಷಿಣೇ, ದಿವ್ಯತರ ಸಪ್ತಾಶ್ವರಥಿನೇ||
||ಸೌರಾಷ್ಟ್ರರ್ಣ ಮಂತ್ರಾತ್ಮನೇ, ಸ್ವರ್ಣ ಸ್ವರೂಪಾತ್ಮನೇ||
||ಭಾರತೀಶ ಹರಿಹರಾತ್ಮನೇ, ಭಕ್ತಿ ಮುಕ್ತಿ ವಿತರಣಾತ್ಮನೇ||

ತಾತ್ಪರ್ಯ:
ಸೌಂದರ್ಯ ಮೂರ್ತಿಯೂ ಛಾಯಾದೇವಿಯ ಪತಿಯೂ ಆದ ಸೂರ್ಯಸೇವ! ನಿನಗೆ ನಮಸ್ಕಾರ! ಕಾರ್ಯ ಕಾರಣ ಸ್ವರೂಪದ ಜಗತ್ತನ್ನು ಬೆಳಗುವವನು ನೀನೇ! ಸಿಂಹರಾಶಿಯ ಅಧಿಪತಿಯಾದ ನಿನ್ನನ್ನು ಪೂಜ್ಯರೂ, ಉತ್ತಮರೂ ಸ್ತುತಿಸುವರು. ಲೋಕಕ್ಕೆಲ್ಲಾ ಆರೋಗ್ಯ ಭಾಗ್ಯವನ್ನು ಕರುಣಿಸುವವನು ನೀನೇ! ನಿನಗೆ ಪ್ರಣಾಮ! ದಾನಶೂರ ಕರ್ಣನ ತಂದೆಯೂ, ಕಮಲ ಪುಷ್ಪದ ಮಿತ್ರನೂ, ಸಹಸ್ರ ಕಿರಣಗಳಿಂದ ಪ್ರಕಾಶಿಸುವವನೂ ಆದ ನೀನೇ ನಮ್ಮ ಪಾಪಗಳನ್ನೆಲ್ಲಾ ಹೋಗಲಾಡಿಸುವವನು. ಗುರುಗುಹನ ಸಂತೋಷಕ್ಕೆ ಸ್ವಭಾನುವೂ, ಪ್ರಾಜ್ಞರಿಂದ ಪೂಜಿಸಲ್ಪಡುವ ದಿನಮಣಿಯೂ ಆದ ನಿನಗೆ ನಮಸ್ಕಾರ! ಹೇ ದಿವಾಕರ! ಚಂದ್ರಾದಿಗ್ರಹಗಳಿಗೆಲ್ಲಾ ನೀನೇ ಅಧಿಪತಿ. ಶೂರಾಧಿಶೂರರಿಂದೆಲ್ಲ ಪೂಜಿಸಲ್ಪಡುವ ನೀನು ಲೋಕದ ಚರಾಚರ ವಸ್ತುಗಳಿಗೂ ಸಾಕ್ಷಿಭೂತನಾಗಿದ್ದೀಯೆ. ಸಪ್ತಾಶ್ವಗಳ ರಥದ ಮೇಲೆ ಚಲಿಸುವ ನೀನು ಸೌರಾಷ್ಟ್ರಾರ್ಣ ಮಂತ್ರ ಸ್ವರೂಪನಾಗಿರುವೆ. ದೀಪ್ಯಮಾನವಾಗಿ ಪ್ರಕಾಶಿಸುವ ಸ್ವರ್ಣ ಸ್ವರೂಪನೂ ನೀನೇ. ಬ್ರಹ್ಮ, ವಿಷ್ಣು, ಮಹೇಶ್ವರರ ಸ್ವರೂಪನೂ, ಯೋಗಮೋಕ್ಷದಾಯಕನೂ ಆದ ಸೂರ್ಯಮೂರ್ತಿ! ನಿನಗೆ ನಮಸ್ಕರಿಸುವೆ.

ಮಾನಸ ಸರೋವರ ಯಾತ್ರೆ

ಮಾನಸ ಸರೋವರ ಯಾತ್ರೆ

ಎಲ್ಲಿದೆ?
ಮಾನಸ ಸರೋವರ ಭಾರತ - ನೇಪಾಳ ಗಡಿಯಲ್ಲಿರುವ ಕೈಲಾಸ ಪರ್ವತದಲ್ಲಿದೆ. ಸಮುದ್ರಮಟ್ಟದಿಂದ ಸುಮಾರು ೧೪,೯೫೦ ಅಡಿಗಳಷ್ಟು ಎತ್ತರದಲ್ಲಿದೆ. ಇಲ್ಲಿಗೆ ಹೋಗುವುದು ಜೀವನದ ಅತಿ ಮುಖ್ಯ ಕರ್ತವ್ಯ ಎಂಬುದು ನಂಬಿಕೆ.

ಮಾನಸ ಸರೋವರ


ಮಾನಸ ಸರೋವರ ವಿಶೇಷ.
ಕೈಲಾಸ ಪರ್ವತ ಶಿಖರವು ಪ್ರಪಂಚದ ಅತಿ ಎತ್ತರದ ಶಿಖರಗಳಲ್ಲಿ (ಸುಮಾರು ೨೩,೦೦೦ ಅಡಿಗಳು) ಒಂದು. ಇದಕ್ಕೆ ಅನೇಕ ಹೆಸರುಗಳಿವೆ. ಮೇರು, ಸುಮೇರು, ಸುಷುದ್ನು, ಹೇಮಾದ್ರಿ, ದೇವಪರ್ವತ, ಗಾನಪರ್ವತ, ರಜತಾದ್ರಿ, ರತ್ನ ಸ್ತಂಭ ಎಂಬ ಹೆಸರುಗಳೂ ಇವೆ. ಇದಕ್ಕೆ ರಾವಣ ಪರ್ವತ, ಹನುಮಾನ್ ಪರ್ವತ, ಪದ್ಮ ಸಂಭವ, ಮಂಜುಶ್ರೀ, ವಜ್ರಧರ, ಅವಲೋಕಿತೇಶ್ವರ ಎಂದೂ ಕರೆಯುತ್ತಾರೆ. ಇದು ಪಾರ್ವತಿ-ಪರಮೇಶ್ವರರ ಆವಾಸಸ್ಥಾನ. ಶಿವಶಕ್ತಿಯರು ಒಂದುಗೂಡಿದ ಜಾಗ. ಪ್ರಕೃತಿ ಪುರುಷರ ಮಿಲನ ಸ್ಥಾನ. ಜೀವಾತ್ಮ ಪರಮಾತ್ಮರ ಐಕ್ಯ ಸ್ಥಾನ. ವಿಶ್ವದ ರಚನೆ, ಸ್ಥಿತಿ, ಲಯಗಳಿಗೆ ಕಾರಣೀಭೂತವಾದ ಕೇಂದ್ರಬಿಂದು (Pillar of the Universe) ಮುಂತಾದವು. ಇದು ವರ್ಷದ ಎಲ್ಲಾ ಕಾಲವೂ ಹಿಮಾಚ್ಛಾದಿತವಾಗಿರುವುದು. ಈ ಸ್ಥಳವನ್ನು ದೂರದಿಂದ ದರ್ಶನ ಮಾಡಬಹುದೇ ಹೊರತು ಹತ್ತಲಾಗುವುದಿಲ್ಲ. ಇಚ್ಛೆಪಟ್ಟರೆ ಅದರ ಪರಿಕ್ರಮ ಮಾಡಬಹುದು. ಅದರ ಮಾರ್ಗ ೫೦ ಕಿ. ಮೀ. ಅದರಲ್ಲಿ ನಂದಿ ಗೊಂಫ್, ದಿರಾಚಕ್, ಗೌರಿಕುಂಡ, ಜಾನುಲಾ ಪಾರ್ಕ್ ಎಂಬ ಸ್ಥಳಗಳು ಬರುವುವು.

ಹೇಗೆ ಹೋಗಬೇಕು? ಯಾವಾಗ?
ಪ್ರತಿ ವರ್ಷದ ಜೂನ್ ತಿಂಗಳಿಂದ ಸೆಪ್ಟೆಂಬರ್ ಕೊನೆಯ ವಾರದವರೆಗೆ (ಹಿಮ ಕಡಿಮೆ ಇರುವ ತಿಂಗಳುಗಳನ್ನು ಪರಿಗಣಿಸಿ) ಮಾನಸ ಸರೋವರ ಯಾತ್ರೆ ಕೈಗೊಳ್ಳಬಹುದು. ಇದು ನಾವಿ ಇಚ್ಛಿಸಿದಂತೆ ಕೈಗೊಳ್ಳುವ ಯಾತ್ರೆಯಲ್ಲ. ಭಾರತದ ವಿದೇಶಾಂಗ ಮಂತ್ರಾಲಯ "ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್" (ಐ. ಟಿ. ಬಿ. ಪಿ) ನೇತೃತ್ವದಲ್ಲಿ ಈ ಯಾತ್ರೆಯನ್ನು ನೆರವೇರಿಸುತ್ತದೆ. ಹೋಗಲು ಬಯಸುವವರು ಈ ಐ. ಟಿ. ಬಿ. ಪಿ ಪರೀಕ್ಷೆ ಎದುರಿಸಬೇಕು. ಇದು ಯಾತ್ರಾಕಾಂಕ್ಷಿಗಳ ದೈಹಿಕ, ಮಾನಸಿಕ ದೃಢತೆ ಹಾಗೂ ಸಾಮರ್ಥ್ಯ ಪರಿಶೀಲಿಸಿ ಯಾತ್ರೆಯ ಸಮಯ ನಿಗದಿ ಪಡಿಸುತ್ತಾರೆ. ಯಾತ್ರೆಯ ಅವಧಿ ೨೮ ದಿನಗಳು. ಇದಕ್ಕಾಗಿ ೪೦ ಸದಸ್ಯರ ವಿವಿಧ ತಂಡಗಳನ್ನು ರಚಿಸಲಾಗುತ್ತದೆ. ಈ ತಂಡದಲ್ಲಿ ಯಾತ್ರಾರ್ಥಿಗಳಲ್ಲದೆ ಭದ್ರತಾ ಸಿಬ್ಬಂದಿ, ನುರಿತ ವೈದ್ಯರೂ ಇರುತ್ತಾರೆ. ಯಾವ ತಂಡದಲ್ಲಿ ಹೋಗಬೇಕು ಎಂಬ ವಿವರವನ್ನು ಯಾತ್ರಾರ್ಥಿಗಳಿಗೆ ಕನಿಷ್ಠ ಆರು ತಿಂಗಳು ಮೊದಲೇ ತಿಳಿಸಲಾಗುತ್ತದೆ.

ಯಾತ್ರೆಯ ಸಿದ್ಧತೆ.
ಮಾನಸ ಸರೋವರದ ಯಾತ್ರೆ ಉಳಿದ ತೀರ್ಥಯಾತ್ರೆಗಳಷ್ಟು ಸುಲಭವಾದದ್ದಲ್ಲ. ಇದಕ್ಕೆ ದಿನಕ್ಕೆ ಕನಿಷ್ಠ ೧೦ ಕಿ. ಮೀ ನಡೆಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಮಂಕಿಕ್ಯಾಪ್, ಸ್ವೆಟರ‍್, ಉಣ್ಣೆಯ ಕೈಕವಚ, ಥರ್ಮಲ್ ಬಟ್ಟೆಗಳು, ರೈನ್ ಕೋಟ್, ಹಿಮಪಾತ ತಡೆಯಬಲ್ಲ ಕೊಡೆ, ಸಣ್ಣ ಕತ್ತರಿ, ಚಾಕು, ಚಾರಣಕ್ಕೆ ಹೊಂದುವಂಥ ಬೂಟುಗಳು, ಹಿಮಪಾತವಾದರೆ ತಡೆಯಬಲ್ಲ ವಾಟರ್ ಪ್ರೂಫ್ ಬೂಟುಗಳು, ಮಂಜಿನ ಹೊಡೆತ ತಡೆಯಬಲ್ಲ ಕನ್ನಡಕ, ಧೂಳಿನಿಂದ ರಕ್ಷಿಸಬಲ್ಲ ಮುಖವಾಡ ಇವೆಲ್ಲ ಬೇಕೇಬೇಕು. ಅದು ನುರಿತರಿಂದ ಪರಿಶೀಲಿಸಲ್ಪಡುವುದು ಅನಿವಾರ್ಯ. ಇದರ ಜೊತೆಗೆ ಗ್ಲೂಕೋಸ್, ಚಾಕೊಲೇಟ್, ನೀರಿನ ಬಾಟಲಿಗಳು, ಪೋರ‍್ಟಬಲ್ ಆಕ್ಸಿಜೆನ್ ಸಿಲಿಂಡರ‍್ಗಳು, ಆಮ್ಲಜನಕ ಪರಿಮಾಣ ಹಾಗೂ ನಾಡಿ ಮಿಡಿತವನ್ನು ಏಕಕಾಲದಲ್ಲಿ ನೋಡಬಲ್ಲ ಪಲ್ಸ್ ಆಕ್ಸಿಮೀಟರ್ ಅವಶ್ಯವಾಗಿ ಬೇಕು.

ಯಾತ್ರೆಯ ವಿಧಾನ.
ವಿಮಾನ, ರೈಲು, ಬಸ್ ಹೀಗೆ ಯಾವ ಮಾರ್ಗದಿಂದಲಾದರೂ ನೇಪಾಳದ ರಾಜಧಾನಿಯಾದ ಕಠ್ಮಂಡು ತಲುಪಬಹುದು. ಅಲ್ಲಿಂದಲೇ ಯಾತ್ರೆ ಆರಂಭ. ಅಲ್ಲಿಂದ ಅಧಿಕೃತ ಬಸ್ ಮೂಲಕ ಕಡೋರಿಗೆ ಪ್ರಯಾಣ. ಇದು ಚೀನಾದ ಗಡಿ. ಇಲ್ಲಿ ಪಾಸ್‌ಪೋರ್ಟ್ ಪರಿಶೀಲನೆ ನಂತರ ಮಾನಸ ಸರೋವರ ಯಾತ್ರೆಗೆ ಅನುಮತಿ ಇದೆ. ಇಲ್ಲಿಂದ ಸಿಂಕೋಲಾ ಎಂಬ ಹಳ್ಳಿಯವರೆಗೆ ಮಾತ್ರ ವಾಹನ ಸೌಲಭ್ಯವಿದೆ. ಚಾರಣ ಇಲ್ಲಿಂದಲೇ ಆರಂಭ. ೬ ಕಿ. ಮೀ. ಕ್ಲಿಷ್ಟಕರ ಹಾದಿಯಲ್ಲಿ ನಡೆದರೆ ’ಗಾಲಾ’ ಸಿಗುತ್ತದೆ. ಇದು ಬಹಳ ಸುಂದರವಾದ ಹಿಮನಗರಿ. ಕಾಳಿದಾಸನ ’ಮೇಘದೂತ’ದ ಕಾವ್ಯ ಕ್ಷೇತ್ರ ಇದೇ ಎಂದು ನಂಬಿಕೆ. ಇಲ್ಲಿಒಂದ ೪೦೦೦ ಅಡಿ ಇಳಿಯಬೇಕು. ಇದು ಅತಿ ದುರ್ಗಮವಾದ ಹಾದಿ. ಭೂಕುಸಿತ, ಹಿಮಪಾತ ಇಲ್ಲಿ ಸರ್ವೇಸಾಮಾನ್ಯ. ಯಾತ್ರಿಗಳು ಈ ಸವಾಲನ್ನು ಎದುರಿಸಿಕೊಂಡೇ ಸಾಗಬೇಕು. ಹೀಗೆ ಸಾಗಿದರೆ ’ಮಲ್ಪಾ’ ಸಿಗುತ್ತದೆ. ಅಲ್ಲಿಂದ ಕಿರಿದಾದ ಹಾದಿ ಮೂಲಕ ’ಬುಧಿ’ ಸೇರಬೇಕು. ನಂತರ ಎರಡು ಸಾವಿರ ಅಡಿ ಹತ್ತಿದರೆ ’ಅನ್ನಪೂರ್ಣೇಶ್ವರಿ’ ಪರ್ವತದ ಸಾಲು ಸಿಗುತ್ತದೆ. ಇಲ್ಲಿಂದ ಮುಂದೆ ಚಾರಣಕ್ಕೆ ’ಯಾಕ್’ ಪ್ರಾಣಿಗಳ ಅಥವಾ ಟಿಬೆಟಿಯನ್ ಗೈಡುಗಳ ಸಹಾಯ ಬೇಕೇಬೇಕು. ಸುಮಾರು ನಾಲ್ಕು ಕಿ.ಮೀ. ನಡೆದರೆ ’ಗುಂಜಿ’ ಸಿಗುತ್ತದೆ. ಇಲ್ಲಿ ಕಿರುಕೈಲಾಸ ಪರ್ವತ ಕಾಣಿಸುವುದು. ಈ ಸ್ಥಳದಲ್ಲಿ ಐ. ಟಿ. ಬಿ. ಪಿ ವೈದ್ಯರ ತಪಾಸಣೆ ಕಡ್ಡಾಯ. ಇದರಲ್ಲಿ ತೇರ್ಗಡೆಯಾದರೆ ಮಾತ್ರ ಮುಂದಿನ ಯಾತ್ರೆ, ಇಲ್ಲದಿದ್ದರೆ ಮಾನಸ ಸರೋವರ ಯಾತ್ರೆ ಇಲ್ಲಿಯೇ ಮೊಟಕುಗೊಳ್ಳುತ್ತದೆ.

ಮಾನಸ ಸರೋವರ

ಗುಂಜಿಯಿಂದ ’ಕಾಲಾಪಾನಿ’ವರೆಗೆ ೧೦ ಕಿ.ಮೀ. ಹಿಮಪರ್ವತದ ಹಾದಿ. ಮಂಜು ಮುಸುಕಿದ ಪರ್ವತದ ನಡುವಿನ ಈ ಪ್ರಯಾಣಕ್ಕೆ ಆಮ್ಲಜನಕದ ಸಿಲಿಂಡರುಗಳು ಅವಶ್ಯವಾಗಿ ಬೇಕು. ಮಧ್ಯದಲ್ಲಿ ವೈದ್ಯರ ಚಿಕಿತ್ಸೆ ಅವಶ್ಯವಾಗಬಹುದು. ಅದಕ್ಕೆ ವ್ಯವಸ್ಥೆ ಇರುತ್ತದೆ. ಉತ್ತರಾಂಚಲದ ಮಂಡಲ್ ವಿಕಾಸ್ ನಿಗಮ್ ಇಲ್ಲಿ ಅನೇಕ ಚಿಕಿತ್ಸಾ ಶಿಬಿರಗಳನ್ನು, ಆಹಾರ ವ್ಯವಸ್ಥೆ ನಿರ್ವಹಣಾ ತಾಣಗಳನ್ನು ನಿರ್ಮಿಸಿದೆ.

ದಾರಿಯಲ್ಲಿನ ಕೆಲವು ಗುಹೆಗಳಿಗೆ ’ವ್ಯಾಸಗುಹೆ’ ಎಂಬ ಹೆಸರಿದೆ. ಪುರಾಣದ ವ್ಯಾಸರು ಇಲ್ಲಿದ್ದರು ಎಂಬ ನಂಬಿಕೆ ಇದೆ. ಇಲ್ಲಿ ಕಾಳಿ ದೇವಾಲಯವೂ ಇದೆ. ಹೀಗೆ ೧೨,೦೦೦ ಅಡಿ ಹತ್ತಿದಾಗ ನಾಭಿದಂಗ್ ಪರ್ವತ ಶ್ರೇಣಿಗೆ ಯಾತ್ರಿಗಳು ತಲುಪುವರು. ಇಲ್ಲಿ ಮಂಜುಗಡ್ಡೆಗಳಿಂದ ಉಂಟಾದ ’ಓಂ’ ಎಂಬ ಸ್ವರೂಪ ಸ್ಪಷ್ಟವಾಗಿ ಕಾಣುತ್ತದೆ. ಈ ಪರ್ವತ ಶ್ರೇಣಿಯಲ್ಲಿ ಗಣಪತಿ-ಆಂಜನೇಯ ಮತ್ತು ಸಾಕ್ಷಾತ್ ಪರಶಿವನನ್ನೇ ಮಂಜುಗಡ್ಡೆಯ ಆಕೃತಿ ಮೂಲಕ ದರ್ಶನ ಮಾಡಿದ ಭಕ್ತಾದಿಗಳಿದ್ದಾರೆ. ನಾಭಿದಂಗಿನ ’ಹೋರೆ’ ಎಂಬ ಶಿಬಿರದಲ್ಲಿ ಯಾತ್ರಿಗಳು ತಂಗಬೇಕು. ಮಂದಾರ ಪರ್ವತ ಮತ್ತು ಕೈಲಾಸ ಪರ್ವತದ ನಡುವಿನ ಈ ಜಾಗದಲ್ಲಿ ಮಾನಸ ಸರೋವರದ ದಾರಿ ಸಿಗುತ್ತದೆ. ಮೊದಲು ರಾವಣ ಶಿವನನ್ನು ಕುರಿತು ತಪಸ್ಸು ಮಾಡಿದನೆಂದು ನಂಬಲಾದ ’ರಾಕ್ಷಸ ಸರೋವರ’ ಸಿಗುವುದು. ಇದನ್ನು ದಾಟಿದ ನಂತರ ಜದಿ ಶಿಬಿರ ಸಿಗುತ್ತದೆ.

ಮಾನಸ ಸರೋವರ ಪ್ರವೇಶ.
ಇಲ್ಲಿ ಅಧಿಕಾರಿಗಳು ಮಾನಸ ಸರೋವರ ಪ್ರವೇಶಕ್ಕೆ ಪ್ರಾಕೃತಿಕ ಅನುಕೂಲ ಹೇಗಿದೆ ಎಂಬುದನ್ನು ಪರಿಶೀಲಿಸಿ ಯಾತ್ರಿಗಳನ್ನು ಬಿಡುತ್ತಾರೆ. ಕೆಲವೊಮ್ಮೆ ೩-೪ ದಿನಗಳ ಕಾಲ ಯಾತ್ರಿಗಳು ಇಲ್ಲಿ ತಂಗಬೇಕಾಗುತ್ತದೆ. ಇಷ್ಟೆಲ್ಲಾ ಸಾಹಸದ ನಂತರ ಮಾನಸ ಸರೋವರದ ದರ್ಶನ. ಅದರ ದರ್ಶನ ಈ ಎಲ್ಲಾ ಶ್ರಮವನ್ನು ಮರೆಸಬಲ್ಲಷ್ಟು ರಮ್ಯವಾಗಿದೆ. ’ಬ್ರಹ್ಮನ ಮನಸ್ಸು’ ಎಂಬ ಕಲ್ಪನೆ ಇರುವ ಮಾನಸ ಸರೋವರದಲ್ಲಿ ಸೂರ್ಯ ರಶ್ಮಿ ಚಿನ್ನದ ರೇಖೆಯಂತೆ ಕಂಗೊಳಿಸುತ್ತದೆ. ಹಿಂಬದಿಯ ಕೈಲಾಸ ಪರ್ವತ ಭಕ್ತಿಭಾವ ಮೂಡಿಸುತ್ತದೆ. ರುದ್ರಾಭಿಷೇಕ, ರುದ್ರಯಾಗ ಸೇರಿದಂತೆ ಹಲವು ಧಾರ್ಮಿಕ ವಿಧಿಗಳನ್ನು ಇಲ್ಲಿ ನಡೆಸಲು ಅವಕಾಶವಿದೆ. ಅಪರ ವಿಧಿಗಳನ್ನು ಮಾಡುವವರೂ ಇದ್ದಾರೆ.

ಇಲ್ಲಿಂದ ಮುಂದೆ ’ತಾಲ್ಜೆನ್’ ಎಂಬ ಜಾಗದಲ್ಲಿ ರಾತ್ರಿ ವಿರಮಿಸಿದ ನಂತರ ’ಕೈಲಾಸ ಪ್ರದಕ್ಷಿಣೆ’ ಆರಂಭವಾಗುತ್ತದೆ. ದಕ್ಷಿಣಾಮೂರ್ತಿ ಇಂದ ಆರಂಭವಾಗುವ ಇದು ಪಶ್ಚಿಮಕ್ಕೆ, ಉತ್ತರಕ್ಕೆ ತಿರುಗಿ ಕೊನೆಗೆ ’ತಾಲ್ಜೆನ್’ ಅಲ್ಲೇ ಕೊನೆಯಾಗುತ್ತದೆ. ಇದರಲ್ಲಿ ೨೦,೦೦೦ ಅಡಿಯವರೆಗೂ ಹತ್ತಬೇಕು. ಗಟ್ಟಿಗರೇ ಇದನ್ನು ಸಾಧಿಸಬಲ್ಲರು. ಜೀವಹಾನಿಯ ಸಂಭವವೂ ಇರುವುದರಿಂದ ದೃಢ ನಿರ್ಧಾರ ಪರಿಶೀಲಿಸಿದ ನಂತರವೇ ಈ ಪರಿಕ್ರಮಕ್ಕೆ ಅವಕಾಶ. ನಂತರ, ಮಾನಸ ಸರೋವರವನ್ನು ಇದೇ ಮಾರ್ಗದಲ್ಲೇ ಇಳಿಯಬೇಕು. ಇಳಿಯುವಾಗ ’ಗೌರಿಕುಂಡ’ದ ದರ್ಶನ ಮಾಡುತ್ತಾರೆ.

ಮಾನಸ ಸರೋವರ


ಸದಾ ನೀರು ಹೆಪ್ಪುಗಟ್ಟಿರುವ ಇಲ್ಲಿನ ಪೂರ್ವದಲ್ಲಿ ’ಶಕ್ತಿ’ತತ್ವವನ್ನು ಪ್ರತಿನಿಧಿಸುವ ಕೈಲಾಸ ಪರ್ವತವೂ, ದಕ್ಷಿಣದಲ್ಲಿ ’ಧ್ಯಾನ’ತತ್ವ ಹೇಳುವ ಭೈರವನೂ, ಪಶ್ಚಿಮದಲ್ಲಿ ’ಅಹಂ’ತತ್ವ ಹೇಳುವ ನಂದಿಯೂ, ಉತ್ತರದಲ್ಲಿ ’ಕ್ರಿಯಾ’ತತ್ವವನ್ನು ಹೇಳುವ ಪಾರ್ವತಿ ಪರ್ವತವು ಗೋಚರಿಸುತ್ತದೆ. ಇದೇ ಮಾನಸ ಸರೋವರ ಯಾತ್ರೆಯ ಸಾರ್ಥಕ ಘಟ್ಟ.

ಸಹಾಯ.
ಭಾರತ ಸರ್ಕಾರದ ವೆದೇಶಾಂಗ ಸಚಿವಾಲಯ, ಕುಮಾನ್ ಮಂಡಲ್ ವಿಕಾಸ್ ನಿಗಮ್, ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಯಾತ್ರೆಗೆ ನೆರವಾಗುತ್ತದೆ. ಸಹಾಯ ವೆಚ್ಚ ರೂ. ೪೫,೦೦೦/- ಇಂದ ರೂ. ೫೦,೦೦೦/-. ಇದಲ್ಲದೆ ಕುದುರೆ, ಸೇವಕ, ಯಾಕ್, ಕಟ್ಟುನಿಟ್ಟಾದ ವೈದ್ಯಕೀಯ ತಪಾಸಣೆ ಒದಗಿಸುತ್ತದೆ.

ಚಿತ್ರ ಕೃಪೆ: ಮೊದಲ ಚಿತ್ರ ಇಲ್ಲಿಂದ
ಎರಡನೆಯ ಮತ್ತು ಮೂರನೆಯ ಚಿತ್ರ ಇಲ್ಲಿಂದ

Wednesday, April 29, 2009

ಮರಗಳ ಮಧ್ಯದಿಂದ ಇಣುಕುತ್ತಿರುವ ರವಿ.

ರವಿ.

ಈ ಚಿತ್ರವನ್ನು ಸೆರೆಹಿಡಿದದ್ದು ಬಂಡಿಪುರದ ಬಳಿ.

ಈ ಚಿತ್ರಕ್ಕೆ ಹೊಂದುವಂತಹ ಕವನ/ ಕತೆ(ಥೆ)/ ಚುಟುಕ ಏನಾದರೂ ಬರೆಯಿರಿ.


Thursday, April 23, 2009

ಪ್ಯಾನಿಂಗ್ - ನನ್ನ ಪ್ರಯತ್ನ

ಪಾಲಚಂದ್ರ ಬರೆದ ಪ್ಯಾನಿಂಗ್ ಮಾಹಿತಿ ಉಪಯುಕ್ತವಾಗಿತ್ತು.

ಅದನ್ನು ಪ್ರಯತ್ನಿಸಲು ಇಂದು ಅವಕಾಶ ಸಿಕ್ಕಿತು.

ಪ್ಯಾನಿಂಗ್ ಮಾಹಿತಿಯನ್ನು ಓದಿ ಪ್ರಾಕ್ಟಿಕಲ್ ಆಗಿ ಪ್ರಯತ್ನ ಪಟ್ಟಿರುವೆ.

ಪ್ಯಾನಿಂಗ್ ೧

ಮೇಲಿನ ಚಿತ್ರ ಸೆರೆಹಿಡಿದದ್ದು ಮ್ಯಾನುಅಲ್ ಮೋಡ್ ಅಲ್ಲಿ

ISO 80

Exposure 1/200

F 8.0

ಪ್ಯಾನಿಂಗ್ ೨

ಇದನ್ನು ಕೂಡ ಮ್ಯಾನುಅಲ್ ಮೋಡ್ ಬಳಸಿ ಸೆರೆಹಿಡಿದಿದ್ದೇನೆ.

ISO 80

Exposure 1/100

F 8.0

Tuesday, April 21, 2009

ಹನ್ನೆರಡು ಜ್ಯೋತಿರ್ಲಿಂಗಗಳು - ೧೨ [ದಾರುಕಾವನದ ನಾಗನಾಥ].

ದಾರುಕಾವನದ ನಾಗನಾಥ


ಎಲ್ಲಿದೆ?
ಇದು ಮಹಾರಾಷ್ಟ್ರದ ಪರಭಣಿ ಜಿಲ್ಲಿಯಲ್ಲಿದೆ. ದಾರುಕಾವನಕ್ಕೆ ಈಗ ಔಂದ್ ಎಂಬ ಹೆಸರಿದೆ.

ದೇವಸ್ಥಾನದ ಸ್ವರೂಪ.
ದಾರುಕಾವನದ ನಾಗೇಶ ಅಥವಾ ನಾಗನಾಥ ದೇವಾಲಯವು ಅಪರೂಪದ ವಾಸ್ತುಶಿಲ್ಪವಾಗಿದೆ. ಸಂಪೂರ್ಣ ಶಿಲಿಯಲ್ಲೇ ನಿರ್ಮಾಣವಾಗಿರುವ ಈ ದೇವಸ್ಥಾನಕ್ಕೆ ಬೃಹದಾಕಾರದ ಬಾಗಿಲುಗಳು, ವಿಶಾಲವಾದ ಸಭಾಂಗಣವೂ ಇದೆ. ಎಂಟು ಶಿಲ ಕಂಬಗಳ ಆಧಾರದ ಮೇಲೆ ಇಡೀ ದೇವಾಲಯ ನಿಲ್ಲುವಂತೆ ರೂಪಿಸಲಾಗಿದೆ. ನಾಗನಾಥ ಲಿಂಗವು ಒಳಭಾಗದ ಚಿಕ್ಕ ಗರ್ಭಗುಡಿಯಲ್ಲಿದೆ. ಈ ದೇವಸ್ಥಾನದ ವಿಶೇಷವೆಂದರೆ ಇಲ್ಲಿ ಶಿವಲಿಂದ ಎದುರು ನಂದಿಯ ವಿಗ್ರಹವಿಲ್ಲ. ದೇವಸ್ಥಾನದ ಹಿಂಭಾಗದಲ್ಲಿ ನಂದಿಕೇಷ್ವರನ ಪ್ರತ್ಯೇಕ ದೇವಾಲಯವಿದೆ. ದೇವಾಲಯಕ್ಕೆ ಹೊಂದಿಕೊಂಡಂತೆ ೧೨ ಜ್ಯೊತಿರ್ಲಿಂಗ ದೇವಸ್ಥಾನಗಳಿವೆ. ಸುಂದರವಾದ ಗಣಪತಿ, ದತ್ತಾತ್ರೇಯ, ಮುರಳಿ ಮನೋಹರ, ದಶಾವತಾರ ದೇವಾಲಯಗಳಿವೆ. ಔಂದ್ ಅಲ್ಲಿ ೧೦೮ ಶಿವ ದೇವಸ್ಥಾನಗಳು ಮತ್ತು ೬೮ ಇತರ ದೇವಾಲಯಗಳು ಇವೆ. ಹಾಗಾಗಿ ಔಂದ್ ದೇವಾಲಯಗಳ ನಗರಿ. ನಾಗನಾಥ ದೇವಸ್ಥಾನಕ್ಕೆ ಎರಡು ಕಳಸ ಗೋಪುರಗಳು ಇವೆ. ಇದನ್ನು ಅತ್ತೆ-ಸೊಸೆ ಕಳಸ ಗೋಪುರ ಎಂದು ಕರೆಯಲಾಗುತ್ತದೆ.

ಸ್ಥಳ ಪುರಾಣ.
ದಕ್ಷಬ್ರಹ್ಮ ತಾನು ನಡೆಸಿದ ಮಹಾಯಾಗಕ್ಕೆ ಶಿವನನ್ನು ಕರೆಯಲಿಲ್ಲ. ಪಾರ್ವತಿ ಅಪಮಾನದಿಂದ ಕುಂಡಕ್ಕೆ ಹಾರಿ ಪ್ರಾಣ ಕಳೆದುಕೊಂಡಾಗ ಶಿವ ಬೇಸತ್ತು ಅಲೆಯುತ್ತಾ ಅಮರದತ್ ಸರೋವರದ ಬಳಿ ತಪಸ್ಸು ಮಾಡಿದನೆಂಬುದು ನಂಬಿಕೆ. ಮುಂದೆ ಪಾಂಡವರು ವನವಾಸದಲ್ಲಿ ಇಲ್ಲಿಗೆ ಬಂದಾಗ, ಹಸುಗಳು ತಾವಾಗಿಯೇ ಈ ಸ್ಥಳದಲ್ಲಿ ಹಾಲು ಸುರಿಸುವುದನ್ನು ಕಂದು, ಇದರ ಇತಿಹಾಸ ತಿಳಿದು ಶಿವಲಿಂಗ ಸ್ಥಾಪಿಸಿದರಂತೆ. ಇನ್ನೊಂದು ಕತೆ(ಥೆ)ಯಂತೆ ಇಲ್ಲಿ ದಾರುಕಾಸುರನೆಂಬ ಅಸುರನಿದ್ದ. ಅವನು ಪಾರ್ವತಿಯಿಂದ ವರಪಡೆದು ಅಜೇಯನಾಗಿ ಮೆರೆಯುತ್ತಿದ್ದ. ಶಿವನು ಕೊನೆಗೆ ತನ್ನ ಭಕ್ತನಾದ ಸುಪ್ರಿಯನೆಂಬ ಅರಸನ ಮೂಲಕ ದಾರುಕಾಸುರನ ಉಪಟಳವನ್ನು ಕೊನೆಗೊಳಿಸೆ ಇಲ್ಲಿ ನೆಲೆ ನಿಂತನು. ಹಾಗಾಗಿ ಈ ಕ್ಷೇತ್ರಕ್ಕೆ ದಾರುಕಾವನ ಎಂಬ ಹೆಸರು ಬಂದಿದೆ ಎಂದು ನಂಬಿಕೆ. ನಾಗನಾಥ ದೇವಸ್ಥಾನದ ಹೊರಭಾಗದಲ್ಲಿ ಪಾರ್ವತಿ ದೇವಾಲಯವಿದೆ. ಇದಕ್ಕೊಂದು ಕತೆ(ಥೆ)ಯಿದೆ. ಔರಂಗಜೇಬ್ ಈ ದೇವಾಲಯವನ್ನು ನಾಶ ಮಾಡುವ ಸಲುವಾಗಿ ದಾಳಿ ಮಾಡಿ ಪಾರ್ವತಿ ವಿಗ್ರಹ ಕಿತ್ತು ಎಸೆದಾಗ ಸಾವಿರಾರು ಹಾವುಗಳು ಅವನ ಸೈನ್ಯದ ಮೇಲೆ ದಾಳಿ ಮಾಡಿದವೆಂದೂ, ಅವರು ಪಲಾಯನ ಮಾಡಿದ ನಂತರ ಭಕ್ತಾದಿಗಳು ಅಲ್ಲೇ ಪಾರ್ವತಿ ದೇವಾಲಯ ನಿರ್ಮಿಸಿದರೆಂದೂ ನಂಬಿಕೆಯಿದೆ. ಇಂದಿಗೂ ಹಾವುಗಳು ಇಲ್ಲಿ ನಿರ್ಭಯವಾಗಿ ಸಂಚರಿಸುತ್ತವೆ. ನಾಗಪಂಚಮಿಯಂದು ಜೀವಂತ ಹಾವುಗಳಿಗೆ ತನಿ ಎರೆಯುವ ಪದ್ಧತಿ ಇಲ್ಲಿದೆ.

ಭೇಟಿ ನೀಡುವ ಸಮಯ.
ಪ್ರತಿ ೧೨ ವರ್ಷಗಳಿಗೊಮ್ಮೆ ಕಪಿಲಷಷ್ಠಿ ಮುಹೂರ್ತದಲ್ಲಿ ಕಾಶಿಯಿಂದಲೇ ಇಲ್ಲಿಗೆ ಗಂಗೆಯನ್ನು ತಂದು ಅಭಿಷೇಕ ನೆರವೇರಿಸಲಾಗುತ್ತದೆ. ಶಿವರಾತ್ರಿ, ಯುಗಾದಿಗಳಂದು ವಿಶೇಷ ಪೂಜೆ ನೆರವೇರುತ್ತದೆ.

ಸೇರುವ ಬಗೆ.
ಹತ್ತಿರದ ರೈಲು ನಿಲ್ದಾಣ ಪರಭಣಿ. ಪರಭಣಿಗೆ ಔರಂಗಾಬಾದ್ ಇಂದ ಸಾಕಷ್ಟು ರೈಲು ಸೌಕರ್ಯಗಳಿವೆ.
ನಂದೇಡ್ ಇಂದ (೬೦ ಕಿ. ಮೀ. ದೂರ), ಔರಂಗಾಬಾದ್ ಇಂದ (೨೧೮ ಕಿ. ಮೀ. ದೂರ) ಸಾಕಷ್ಟು ಬಸ್ ಸೌಕರ್ಯಗಳಿವೆ.

ವಸತಿ.
ಔಂದ್ ಅಲ್ಲಿ ದೇಗುಲದ ಯಾತ್ರಿ ನಿವಾಸ ಮಾತ್ರ ತಂಗಲು ಇರುವ ತಾಣ. ಆದರೆ ಪರಭಣಿ ಇಂದ ಸಾಕಷ್ಟು ವಾಹನ ವ್ಯವಸ್ಥೆ ಇರುವುದರಿಂದ ಅಲ್ಲಿಯೇ ತಂಗುವುದು ಉತ್ತಮ.

----------------------------------------------
ಚಿತ್ರ ಕೃಪೆ: ಇಲ್ಲಿಂದ ಪಡೆದದ್ದು

Thursday, April 16, 2009

ಹನ್ನೆರಡು ಜ್ಯೋತಿರ್ಲಿಂಗಗಳು - ೧೧ [ವೆರುಳಿನ ಘುಶ್ಮೇಶ್ವರ].

ವೆರುಳಿನ ಘುಶ್ಮೇಶ್ವರ.

ವೆರುಳಿನ ಘುಶ್ಮೇಶ್ವರ.

ಎಲ್ಲಿದೆ?
ಔರಂಗಾಬಾದ್ ಇಂದ ಎಲ್ಲೋರ ಗುಹೆಗಳ ಕಡೆ ಹೋಗುವ ರಸ್ತೆಯಲ್ಲಿ ವೆರುಳ್ ಸಿಗುತ್ತದೆ. ಜ್ಯೋತಿರ್ಲಿಂಗ ಗ್ರೀಷ್ಮೇಶ್ವರ ಅಥವಾ ಘುಶ್ಮೇಶ್ವರ ಇಲ್ಲಿದೆ. ಇದು ಮೂಲತಃ ನಾಗ್ ಬುಡಕಟ್ಟು ಜನಾಂಗದವರ ದೇವಸ್ಥಾನ.

ದೇವಸ್ಥಾನದ ಸ್ವರೂಪ.
ದಶಾವತಾರದ ಕೆತ್ತನೆಗಳಿಂದ ಶೋಭಿತವಾದ ಇದು ೨೪೦ * ೧೮೫ ಅಡಿ ವಿಸ್ತಾರವಾಗಿದೆ. ಅಂಗಳದಲ್ಲಿ ೨೪ ಕಂಬಗಳ ಮೇಲೂ ನಂದಿಕೇಶ್ವರನ ಮೂರ್ತಿ ಇದೆ. ದೇವರು ಪೂರ್ವಾಭಿಮುಖವಾಗಿದ್ದು ದೇವಾಲಯದಿಂದ ಪವಿತ್ರ ಜಲ ಪ್ರವಹಿಸುವುದು.

ಸ್ಥಳ ಪುರಾಣ.
ಈ ಸ್ಥಳದ ಕುರಿತು ಅನೇಕ ಕತೆ(ಥೆ)ಗಳಿವೆ. ಪಾರ್ವತಿ ಕುಂಕುಮ ಇಟ್ಟುಕೊಳ್ಳುವಾಗ ಅದು ಶಿವಲಿಂಗವಾಗಿ ಕೆಳಗೆ ಬಿದ್ದಿತಂತೆ. ಇದಕ್ಕೆ ಕುಂಕುಮೇಶ್ವರ ಎಂಬ ಹೆಸರು ಕೂಡ ಇದೆ. ಇನ್ನೊಂದು ಕತೆ(ಥೆ)ಯಂತೆ, ದೇವಗಿರಿ ಪರ್ವತದಲ್ಲಿ ಸುಧರ್ಮ-ಸುದೇಹಿ ದಂಪತಿಗಳು ಧರ್ಮಪರರಾಗಿದ್ದರು. ಇವರಿಗೆ ಮಕ್ಕಳಾಗದಿರಲು ತಂಗಿ ಘುಶ್ಮಾದೇವಿಗೆ ಮಗುವಾಯಿತು. ಅಕ್ಕ ಸುದೇಹಿ ಆ ಮಗುವನ್ನು ಮೋಸದಿಂದ ಕೊಂದಳು. ಆಗ ತಂಗಿಯು ಶಿವನನ್ನು ಪ್ರಾರ್ಥಿಸಿದಳು. ಶಿವನು ಮಗುವನ್ನು ಬದುಕಿಸಿದ ಮತ್ತು ಅವಳ ಕೋರಿಕೆಯ ಮೇರೆಗೆ ಘುಷ್ಮೇಶ್ವರನಾಗಿ ಇಲ್ಲಿ ನಿಂತನು ಎಂದು ನಂಬಿಕೆ. ಇದನ್ನು ವೆರುಳಿನ ಅರಸನಾದ ಭೋಂಸ್ಲೆ ಸ್ಥಾಪಿಸಿದನೆಂದೂ, ಅಹಲ್ಯಾಬಾಯಿ ಹೋಳ್ಕರ‍್ ಅಭಿವೃದ್ಧಿ ಪಡಿಸಿದಳೆಂದೂ ಚಾರಿತ್ರಿಕ ದಾಖಲೆಗಳು ಹೇಳುತ್ತವೆ.

ಭೇಟಿ ನೀಡುವ ಸಮಯ.
ಮಹಾಶಿವರಾತ್ರಿಯಂದು ವಿಶೇಷ ರಥೋತ್ಸವ ನೆರವೇರುತ್ತದೆ. ವರ್ಷದ ಎಲ್ಲಾ ದಿನಗಳಲ್ಲೂ ಪೂಜೆ ನೆರವೇರುತ್ತದೆ.

ಸೇರುವ ಬಗೆ.
ಔರಂಗಾಬಾದ್ ಅತಿ ಹತ್ತಿರವಿರುವ ರೈಲು ನಿಲ್ದಾಣ (೩೧ ಕಿ.ಮೀ). ದೌಲತಾಬಾದ್ ಇಂದ ಸಾಕಷ್ಟು ಬಸ್ಸುಗಳಿವೆ.

ವಸತಿ.
ದೇವಸ್ಹಾನದ ಅತಿಥಿಗೃಹ ಮಾತ್ರ ಉಳಿದುಕೊಳ್ಳಲು ಇರುವ ತಾಣ. ಔರಂಗಾಬಾದ್ ಅಲ್ಲಿ ಸಾಕಷ್ಟು ಸುಸಜ್ಜಿತ ಹೋಟೆಲ್ಗಳಿವೆ.

----------------------------------------------
ಚಿತ್ರ ಕೃಪೆ: ಇಲ್ಲಿಂದ ಪಡೆದದ್ದು

Wednesday, April 15, 2009

ಹನ್ನೆರಡು ಜ್ಯೋತಿರ್ಲಿಂಗಗಳು - ೧೦ [ವಾರಣಾಸಿ (ಕಾಶಿ) ವಿಶ್ವೇಶ್ವರ].

ವಾರಣಾಸಿ (ಕಾಶಿ) ವಿಶ್ವೇಶ್ವರ.

ಕಾಶಿ ವಿಶ್ವನಾಥ.

ಎಲ್ಲಿದೆ?
ಕಾಶಿ ಅಥವಾ ವಾರಣಾಸಿಯು ಉತ್ತರಪ್ರದೇಶದಲ್ಲಿದೆ. ವಿಶ್ವನಾಥ ಮಂದಿರ ಇಲ್ಲಿನ ಪ್ರಧಾನ ದೇವಾಲಯ. ೧೭೭೬ರಲ್ಲಿ ಈ ದೇವಸ್ಥಾನವು ಪುನರ್ ನಿರ್ಮಾಣಗೊಂಡಿತು.

ದೇವಸ್ಥಾನದ ಸ್ವರೂಪ.
ಇಲ್ಲಿನ ಚೌಕಾಕಾರದ ಕುಂಡದಲ್ಲಿ ಲಿಂಗವು ಒಂದು ಅಡಿ ಎತ್ತರವಾಗಿದೆ. ಗಂಗಾಸ್ನಾನ ಮಾಡಿ, ಸ್ವತಃ ಭಕ್ತಾದಿಗಳೇ ಗಂಗಾಜಲದಿಂದ ಅಭಿಷೇಕ ಮಾಡಬಹುದು.

ಸ್ಥಳ ಪುರಾಣ.
ಈ ಕ್ಷೇತ್ರದ ಕುರಿತು ನೂರಾರು ಪುರಾಣ ಕತೆ(ಥೆ)ಗಳು ಕೇಳಿ ಬರುತ್ತವೆ. ಪ್ರಳಯಕಾಲದಲ್ಲಿ ಮಹಾವಿಷ್ಣು ಇಲ್ಲಿ ತಪಸ್ಸನ್ನು ಆಚರಿಸಿದನೆಂದೂ, ಬ್ರಹ್ಮನು ಆಗ ಈತನ ನಾಭಿ ಕಮಲದಿಂದ ಜನಿಸಿದಾಗ, ಲಕ್ಷ್ಮಿಯು ಆತನ ಕಣ್ಣುಮುಚ್ಚಲು ಜಗವೆಲ್ಲ ಕತ್ತಲಾಯಿತೆಂದೂ, ಆಗ ಭಕ್ತರ ಸ್ತೋತ್ರದಿಂದ ಸುಪ್ರೀತನಾದ ಶಿವನು ಜ್ಯೋತಿರ್ಲಿಂಗ ಸ್ವರೂಪನಾಗಿ ಇಲ್ಲಿ ನೆಲೆಸಿ ಜಗವನ್ನು ಬೆಳಗಿದನೆಂಬುದು ನಂಬಿಕೆ. ಸ್ವರ್ಗದಿಂದ ಧುಮುಕಿದ ಗಂಗೆಯನ್ನು ಶಿವ ತನ್ನ ಜಟೆಯಲ್ಲಿ ಹಿಡಿದದ್ದುಉ ಇಲ್ಲೇ ಎಂಬ ನಂಬಿಕೆಯೂ ಇದೆ. ಕಾಶಿಯನ್ನು ೩ ಭಾಗ ಮಾಡಿಲಾಗಿವೆ. ಕೇದಾರ ಖಂಡ, ಪ್ರಣವ ಖಂಡ, ವಿಶ್ವೇಶ್ವರ ಖಂಡ ಎಂದು ಈ ಭಾಗಗಳಿಗೆ ಹೆಸರು. ಜ್ಯೋತಿರ್ಲಿಂಗ ವಿಶ್ವೇಶ್ವರ ಖಂಡದಲ್ಲಿ ಇದೆ.

ಭೇಟಿ ನೀಡುವ ಸಮಯ.
ಪ್ರತಿ ಸೋಮವಾರ ಇಲ್ಲಿ ವಿಶೇಷ ಪೂಜೆ ನೆರವೇರುತ್ತದೆ. ವರ್ಷವಿಡೀ ಇಲ್ಲಿ ದರ್ಶನಕ್ಕೆ ಅವಕಾಶವಿದೆ.

ಸೇರುವ ಬಗೆ.
ಬೆಂಗಳೂರಿನಿಂದ ನೇರವಾಗಿ ಮೊಘಲ್ ಸರಾಯ್ ವರೆಗೆ ರೈಲು ಮಾರ್ಗವಿದೆ. ನಾಗಪುರ, ಅಲಹಾಬಾದ್ ಮೂಲಕವೂ ತಲುಪಬಹುದು.

ವಸತಿ.
ಶ್ರೀಕೃಷ್ಣ ಮಾಧ್ವ ಮಂದಿರ, ಮಾಧವಾಶ್ರಮ ಪ್ರಮುಖ ವಸತಿ ತಾಣಗಳು. ಇದಲ್ಲದೇ ಉತ್ತರಪ್ರದೇಶದ ಅಧಿಕೃತ ವಸತಿ ಗೃಹ ಸೇರಿದಂತೆ ಸಾಕಷ್ಟು ವಸತಿ ಗೃಹಗಳಿವೆ.

----------------------------------------------
ಚಿತ್ರ ಕೃಪೆ: ಸ್ನೇಹಿತ ನಾಗರಾಜ್

Monday, April 13, 2009

ನನ್ನ ಮುದ್ದಿನ ಸೊಸೆ.

ಈ ಮುದ್ದು ಪುಟಾಣಿಯ ಚಿತ್ರಗಳನ್ನು ಸೆರೆಹಿಡಿದದ್ದು ಕಳೆದ ತಿಂಗಳು ಅಜ್ಜಿಯ ಮನೆಗೆ ಹೋದಾಗ. ಅಜ್ಜಿಯ ಮನೆಗೆ ಬೆಳಿಗ್ಗೆ ಹೋದಾಗ ಮಲಗಿದ್ದಳು.

ಸ್ವಲ್ಪ ಸಮಯದ ನಂತರ ಹಸಿವಾದ ಕಾರಣ ಅಳುತ್ತಾ ಎದ್ದಳು.

ಅಮ್ಮಾ!

ನಂತರ ಹಾಲು ಕುಡಿದು ಸ್ವಲ್ಪ ಹೊತ್ತು ಅಲ್ಲಿ ಇಲ್ಲಿ ನೋಡುತ್ತಿದ್ದಳು. ಆಗ ಸೆರೆಹಿಡಿದ ಚಿತ್ರ ಇದು.

ಹಾಸಿಗೆಯ ಮೇಲೆ ಮಲಗಿ ಬೇಜಾರಾಯ್ತೇನೋ?
ಅಮ್ಮನ ಮಡಿಲಲ್ಲಿ ಕುಳಿತಳು.

ಯಾರಿದು? ನನ್ನನ್ನೇಕೆ ದುರುಗುಟ್ಟಿಕೊಂಡು ನೋಡುತ್ತಿದ್ದಾರೆ?

ನೀ ಹಿಂಗ ನೋಡಬ್ಯಾಡ ನನ್ನ. ನಾಚಿಕೆಯಾಗುವುದು.

ನನಗೆ ನಿದ್ದೆ ಬರ್ತಿದೆ. Disturb ಮಾಡ್ಬೇಡಿ. ಆಯ್ತಾ?

ಅಂದಹಾಗೆ, ಇವಳಿಗೆ ಈಗ ನಾಲ್ಕು ತಿಂಗಳು. ಇದೇ ತಿಂಗಳ ೨೩ರಂದು ಇವಳಿಗೆ "ನಾಮಕರಣ".

ಏನು ಹೆಸರಿಟ್ಟೆವು ಎಂದು ಆಮೇಲೆ ಹೇಳುವೆ.

Thursday, April 09, 2009

ಹನ್ನೆರಡು ಜ್ಯೋತಿರ್ಲಿಂಗಗಳು - ೯ [ರಾಮೇಶ್ವರಂನ ರಾಮೇಶ್ವರ].

ರಾಮೇಶ್ವರಂನ ರಾಮೇಶ್ವರ.

ಎಲ್ಲಿದೆ?

ತಮಿಳುನಾಡಿನ ರಾಮೇಶ್ವರಂ ಅಲ್ಲಿದೆ. ಇದು ೪ ಕಿ. ಮೀ (೩೪ ಚ. ಮೈ) ಅಗಲದ ದ್ವೀಪ. ಇಲ್ಲಿನ ದೇವಸ್ಥಾನ ದ್ರಾವಿಡ ಶಿಲ್ಪ ಕಲೆಯ ಪ್ರತಿರೂಪ.

ದೇವಸ್ಥಾನದ ಸ್ವರೂಪ.
೮೬೫ ಅಡಿ ಉದ್ದ, ೬೫೭ ಅಡಿ ಅಗಲ ಮತ್ತು ೪೯ ಅಡಿ ಎತ್ತರವಾಗಿದೆ. ಸಹಸ್ರಾರು ಕಂಬಗಳು, ಹತ್ತು ಅಂತಸ್ತುಗಳ ಮಹಾದ್ವಾರ, ಹೀಗೆ ದೇಗುಲದ ನೋಟವೇ ಭವ್ಯವಾಗಿದೆ. ಇದರ ಗೋಪುರ ಕೂಡ ೧೨೬ ಅಡಿ ಎತ್ತರವಿದೆ. ಇಲ್ಲಿ ೨೪ ತೀರ್ಥಗಳಿವೆ. ರಾಮತೀರ್ಥ, ಸೀತಾಕುಂಡ, ಲಕ್ಷ್ಮಣ ತೀರ್ಥ, ಕಪಿಲತೀರ್ಥ, ಬ್ರಹ್ಮಕುಂಡ, ಮಂಗಳತೀರ್ಥ ಮುಂತಾದ ಹೆಸರಿನ ಇವುಗಳಲ್ಲಿ ಪ್ರತಿಯೊಂದಕ್ಕೂ ಕತೆಗಳಿವೆ. ಅವೆಲ್ಲವೂ ರೋಗನಿವಾರಕ ಎಂಬುದು ವೈಜ್ಞಾನಿಕವಾಗಿಯೂ ರುಜುವಾತಾಗಿದೆ. ರಾಮೇಶ್ವರ ದೇವಸ್ಥಾನದ ಹತ್ತಿರದಲ್ಲೇ ಪಾರ್ವತಿ ದೇವಸ್ಥಾನವಿದೆ. ಅಲ್ಲದೇ, ಸಂತಾನ ಗಣಪತಿ, ವೀರಭದ್ರ, ಹನುಮಾನ್, ನವಗ್ರಹ ಮುಂತಾದ ದೇವಸ್ಥಾನಗಳಿವೆ.

ಸ್ಥಳ ಪುರಾಣ.
ಶ್ರೀರಾಮ, ರಾವಣನನ್ನು ಸಂಹರಿಸಿದ ನಂತರ ಆತನಿಗೆ ಕಣ್ಣು ಕಾಣದಂತಾಯಿತಂತೆ. ಇದು ಬ್ರಹ್ಮಹತ್ಯಾ ದೋಷದ ಪರಿಣಾಮ ಎಂದು ತಿಳಿದು ರಾಮೇಶ್ವರದಲ್ಲಿ ಲಿಂಗವನ್ನು ಅರ್ಚಿಸಿ ಪಾಪಮುಕ್ತನಾದನೆಂಬುದು ನಂಬಿಕೆ. ಹಾಗೆಯೇ, ಇದು ಶ್ರೀರಾಮನು ರಾವಣನ ಜೊತೆಗಿನ ಯುದ್ಧಕ್ಕೆ ಮೊದಲು ಶಿವನನ್ನು ಅರ್ಚಿಸಿದ ತಾಣ ಎಂಬ ನಂಬಿಕೆ ಕೂಡ ಇದೆ. ಪವಿತ್ರವಾದ ಕಾಶಿಯಾತ್ರೆ ಮಡುವವರು ಮೊದಲು ಇಲ್ಲಿ ದರ್ಶನ ಪಡೆದು, ಇಲ್ಲಿನ ಮರಳನ್ನು ಕಾಶಿಯ ಗಂಗೆಗೆ ಅರ್ಪಿಸಿ, ಕಾಶಿಯಾತ್ರೆ ಮುಗಿಸಿ ಬಂದು ರಾಮೇಶ್ವರನಿಗೆ ಗಂಗಾಸ್ನಾನ ಮಾಡಿಸಿದಾಗಲೇ ಕಾಶಿಯಾತ್ರೆ ಪೂರ್ಣವಾಗುವುದು ಎಂಬ ನಂಬಿಕೆ ಇದೆ.

ಭೇಟಿ ನೀಡುವ ಸಮಯ.
ಮಹಾಶಿವರಾತ್ರಿ ಮತ್ತು ಆಷಾಡ ಮಾಸದ ಎರಡೂ ಚತುರ್ದಶಿಗಳಂದು ಇಲ್ಲಿ ರಥೋತ್ಸವ ನೆರವೇರುತ್ತದೆ. ಪ್ರತಿನಿತ್ಯವೂ ಬೆಳಗಿನ ಜಾವ ೪ ಘಂಟೆಯಿಂದ ರಾತ್ರಿ ಹತ್ತು ಘಂಟೆಯವರೆಗೂ ನಿರಂತರವಾಗಿ ಇಲ್ಲಿ ವಿಶೇಷ ಪೂಜೆ ನಡೆಯುತ್ತಲೇ ಇರುತ್ತದೆ.

ಸೇರುವ ಬಗೆ.
ಬೆಂಗಳೂರಿನಿಂದ ರಾಮೇಶ್ವರಂಗೆ ನೇರವಾದ ರೈಲು ಸೊಲಭ್ಯವಿದೆ. ರಾಮೇಶ್ವರಂ ದಕ್ಷಿಣ ರೈಲ್ವೆಯ ಕಟ್ಟಕಡೆಯ ನಿಲ್ದಾಣ.
ಚೆನ್ನೈ ಇಂದ (೫೬೦ ಕಿ. ಮೀ.), ಮಧುರೈ ಇಂದ (೧೬೦ ಕಿ. ಮೀ.) ದೇವೀಪಟ್ಟಣದಿಂದ ಮಂಟಪಂ ವರೆಗೆ (೫೦ ಕಿ. ಮೀ.) ಹೇರಳವಾದ ಬಸ್ ಸೌಲಭ್ಯವಿದೆ.

ವಸತಿ.
ರಾಮೇಶ್ವರಂ ಟೂರಿಸ್ಟ್ ಆಫೀಸ್ ಮುಖ್ಯವಾದ ವಸತಿ ಕೇಂದ್ರ. ಉಡುಪಿ ಛತ್ರ, ರೈಲ್ವೇ ಹಾಲ್ಟಿಂಗ್ ರೂಂ, ಟಿ. ಟಿ. ಡಿ. ಸಿ. ಹೋಟೆಲ್, ತಮಿಳುನಾಡು ಸರ್ಕಾರದ ಅತಿಥಿಗೃಹ ಸೇರಿದಂತೆ ಉತ್ತಮ ವಸತಿ ಗೃಹಗಳಿವೆ.

--------------------------------------------
ಚಿತ್ರ ಕೃಪೆ: www.skyscrapercity.com

Wednesday, April 08, 2009

ಮಡಿಕೇರಿಯಲ್ಲಿ ಮೆರೆದಾಟ.

ಮಡಿಕೇರಿಯಲ್ಲಿ ಮೆರೆದಾಟ.

ಈ ಪ್ರವಾಸ ನಾವು ಕೈಗೊಂಡಿದ್ದು ಜನವರೀ ೨೪ ೨೦೦೯ರ ಶನಿವಾರದಂದು. ಈ ಪ್ರಯಾಣಕ್ಕೆ ಜೊತೆಯಾದವರು ನನ್ನ ಸಂಬಂಧಿ ರಾಘು, ಆತನ ಸೋದರಿಯರು (ಅವನ Cousins ಸೇರಿ) ಮತ್ತು ಗೆಳೆಯ ರಾಮ.

ಈ ಪ್ರವಾಸಕ್ಕೆ ಹೋಗುವುದೆಂದು ಖಾತ್ರಿಯಾದದ್ದು ಶುಕ್ರವಾರ, ಅಂದರೆ ಜನವರೀ ೨೩ ೨೦೦೯. ಸಂಜೆ ೬ಕ್ಕೆ ರಾಘು, ನನಗೆ ಮತ್ತು ರಾಮನಿಗೆ ಫೋನ್ ಮಾಡಿ ಮಡಿಕೇರಿಗೆ ಹೋಗೋಣವೆಂದು, ನಮ್ಮ ಜೊತೆಗೆ ಆತನ ಸೋದರಿಯರು ಬರುತ್ತಾರೆಂದು ಹೇಳಿದ. ಒಟ್ಟು ೭ ಮಂದಿ. ಎರಡು ಕಾರುಗಳಲ್ಲಿ ಹೋಗುವುದಾಗಿ ಹೇಳಿದ. ನನ್ನ ಮತ್ತು ರಾಘು ಕಾರಿನಲ್ಲಿ ಹೋಗುವುದಾಗಿ ನಿರ್ಧರಿಸಿದೆವು.
ಕೊನೆ ಘಳಿಗೆಯಲ್ಲಿ ಎಲ್ಲರೂ ಒಟ್ಟಿಗೆ ಒಂದೇ ವಾಹನದಲ್ಲಿ ಹೋಗುವ ನಿರ್ಧಾರವಾಯಿತು.

ಈಗ ನಮ್ಮಲ್ಲಿದ್ದ ಗೊಂದಲ ವಾಹನದ arrangement. ನಾಳೆ ಬೆಳಿಗ್ಗೆ ಹೋಗುವ ಪ್ರಯಾಣಕ್ಕೆ ಇಂದು ರಾತ್ರಿ ವಾಹನ ಬುಕ್ ಮಾಡಿದರೆ ಸಿಗುವುದೇ ಎಂಬ ಯೋಚನೆ ಇತ್ತು. ಗೊತ್ತಿದ್ದ ಎಲ್ಲಾ ಟ್ರ್ಯಾವೆಲ್ ಏಜೆಂಟರಿಗೆ ಫೋನ್ ಮಾಡಿದೆವು. ಯಾವ ವಾಹನವೂ ಸಿಗಲಿಲ್ಲ. ಯಾವುದೇ ವಾಹನ ಸಿಗದಿದ್ದಲ್ಲಿ ನಮ್ಮದೇ ಕಾರುಗಳಲ್ಲಿ ಹೋಗುವ ನಿರ್ಧಾರ ಮಾಡಿ, ಕೊನೆಯ ಪ್ರಯತ್ನ ಅಂತ ಇನ್ನೊಬ್ಬ ಟ್ರ್ಯಾವೆಲ್ ಏಜೆಂಟ್ಗೆ ಫೋನ್ ಮಾಡಿದ ರಾಘು. ಟಾಟಾ ಸುಮೋ ಇದೆ ಅಂತ ಹೇಳಿದ ಏಜೆಂಟ್. ಅಬ್ಬಾ ಸದ್ಯ ವಾಹನ ಸಿಕ್ತಲ್ಲಾ ಅಂತ ಟಾಟಾ ಸುಮೋವನ್ನು ಬುಕ್ ಮಾಡಿದ ರಾಘು. ಆಗ ಸಮಯ ರಾತ್ರಿ ೧೨ಘಂಟೆ.

ರಾಘು ನನಗೆ ಮತ್ತು ರಾಮನಿಗೆ ಫೋನ್ ಮಾಡಿ ಟಾಟಾ ಸುಮೋ ಬುಕ್ ಮಾಡಿದ್ದೇನೆ. ಬೆಳಿಗ್ಗೆ ಆರಕ್ಕೆ ನಮ್ಮ ಮನೆಗೆ ಬರುತ್ತದೆ ಅಂತ ಹೇಳಿ ಫೋನ್ ಡಿಸ್ಕನೆಕ್ಟ್ ಮಾಡಿದ.

ಬೆಳಿಗ್ಗೆ ಆರಕ್ಕೆ ರಾಘು ಮನೆಗೆ ಟಾಟಾ ಸುಮೋ ಓಡಿಸಿಕೊಂಡು ಡ್ರೈವರ್ ಮಂಜುನಾಥ್ ಬಂದನು. ಅಲ್ಲಿಂದ ರಾಘು ಮತ್ತು ಅವನ ಸೋದರಿಯರು ನಮ್ಮ ಮನೆಗೆ ಬಂದರು. ಅಲ್ಲಿಂದ ರಾಮನನ್ನು ಕರೆದುಕೊಂಡು ಮಡಿಕೇರಿಯ ಕಡೆಗೆ ಪ್ರಯಾಣ ಬೆಳೆಸಿದೆವು. ಮಧ್ಯಾಹ್ನ ದುಬಾರೆ ಆನೆ ಶಿಬಿರಕ್ಕೆ ತಲುಪಿದೆವು.










ಅಲ್ಲಿ ಊಟವನ್ನು ಮುಗಿಸಿ ಆನೆ ಶಿಬಿರಕ್ಕೆ ಮೋಟಾರ‍್ ದೋಣಿಯಲ್ಲಿ ಹೋದೆವು.



ಅಲ್ಲಿ ಕಂಡ ಕೆಲವು ದೃಶ್ಯಗಳನ್ನು ನನ್ನ ಕ್ಯಾಮೆರಾದಲ್ಲಿ ಸೆರೆಹಿಡಿದೆನು.

ನಂತರ ಮಡಿಕೇರಿಯನ್ನು ತಲುಪುವ ಹೊತ್ತಿಗೆ ಸಂಜೆಯಾಗಿತ್ತು.

ರಾಜಾಸೀಟಿನಲ್ಲಿ ಶನಿವಾರವಾಗಿದ್ದರಿಂದ ಜನಜಂಗುಳಿ.

ಅಲ್ಲೇ ಸೂರ್ಯಾಸ್ತದವರೆಗೂ ಕಾದು ಸೂರ್ಯಾಸ್ತದ ಕೆಲವು ಚಿತ್ರಗಳನ್ನು ಸೆರೆಹಿಡಿದೆನು.

ನಂತರ ಮಡಿಕೇರಿಯಿಂದ ತಲಕಾವೇರಿಯ ಮಾರ್ಗದಲ್ಲಿರುವ "ರತಿ ಹೋಂ ಸ್ಟೇ"ಯಲ್ಲಿ ತಂಗಿದ್ದೆವು.

ಈ ಹೋಂ ಸ್ಟೇಯನ್ನು ಇನ್ನೊಬ್ಬ ಸ್ನೇಹಿತನ ಮೂಲಕ ಮುಂಗಡವಾಗಿ ಕಾದಿರಿಸಿದೆವು. ಬುಕಿಂಗ್ ಮಾಡಿಸಿದಾಗ ರಾತ್ರಿ ಹನ್ನೊಂದು ಘಂಟೆ (ಜನವರೀ ೨೩ ೨೦೦೯). ರಾತ್ರಿ ಹೋಂ ಸ್ಟೇಯಲ್ಲೇ ಭರ್ಜರಿ ಭೋಜನ. ಒಳ್ಳೇ ನಿದ್ದೆ.

ಮಾರನೇ ದಿನ ಬೆಳಿಗ್ಗೆ ಎದ್ದು ತಲಕಾವೇರಿಯ ಕಡೆಗೆ ಹೊರಟೆವು.

ವಾಹನದಲ್ಲಿ ಅಂತ್ಯಾಕ್ಷರಿ ಆಟ. ಎಲ್ಲರೂ ಭಾಗವಹಿಸಿದೆವು. ತಲಕಾವೇರಿಯಲ್ಲಿ ಕಾವೇರಿಯ ಉಗಮ ಸ್ಥಾನವನ್ನು ನೋಡಿ ಅಲ್ಲಿನ view pointಗೆ ಹೋದೆವು.

ಅಲ್ಲಿ ಕಂಡ ಕೆಲವು ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು, ಮಡಿಕೇರಿಯ ಕಡೆಗೆ ಪ್ರಯಾಣ ಬೆಳೆಸಿದೆವು.

ಮಡಿಕೇರಿಯಲ್ಲಿ ಓಂಕಾರೇಶ್ವರ ದೇವಸ್ಥಾನಕ್ಕೆ ಹೋದಾಗ ಸಮಯ ೧೨ ಆಗಿತ್ತು.

ಓಂಕಾರೇಶ್ವರನಿಗೆ ಮಾಡುತ್ತಿದ್ದ ಮಹಾಮಂಗಳಾರತಿಯನ್ನು ವೀಕ್ಷಿಸಿ ಅಲ್ಲಿಂದ ಅಬ್ಬಿ ಜಲಪಾತದ ಕಡೆಗೆ ಹೊರಟೆವು.

ಭಾನುವಾರವಾದ್ದರಿಂದ ಸಿಕ್ಕಾಪಟ್ಟೆ ಜನ. ಅಲ್ಲಿ ಸ್ವಲ್ಪ ಹೊತ್ತು ಕಾಲ ಕಳೆದು ಬೆಂಗಳೂರಿನ ಕಡೆಗೆ ಹೊರಟೆವು.

ಮಾರ್ಗ ಮಧ್ಯದಲ್ಲಿ ಊಟ ಮಾಡಿ ಮೈಸೂರು ತಲುಪುವ ಹೊತ್ತಿಗೆ ಸಂಜೆ ೬ ಆಗಿತ್ತು. ಮೈಸೂರಿನಲ್ಲಿ ತಿಂಡಿ ತಿಂದು ಬೆಂಗಳೂರಿನ ಕಡೆಗೆ ಹೊರಟೆವು.