My Blog List

Monday, January 19, 2009

ಹನ್ನೆರಡು ಜ್ಯೋತಿರ್ಲಿಂಗಗಳು - ೩

ಎಲ್ಲಿದೆ?

ಈ ದೇವಾಲಯವು ಮಧ್ಯಪ್ರದೇಶದ ಕ್ಷಿಪ್ರಾ ನದಿಯ ದಂಡೆಯ ಮೇಲಿದೆ. ಇದು ಪುರಾಣಗಳಲ್ಲಿ ಅವಂತಿಕಾ ನಗರಿ ಎಂದು ವರ್ಣಿತವಾಗಿತ್ತು. ಇದನ್ನು ಭೂಮಿಯ ನಾಭಿ ಎಂದೂ ವರ್ಣಿಸಲಾಗಿದೆ. ಶ್ರೀ ಕೃಷ್ಣ-ಬಲರಾಮ-ಸುಧಾಮರು ಇಲ್ಲಿ ವಿದ್ಯಾಭ್ಯಾಸ ಮಾಡಿದರಂತೆ. ಪ್ರಸಿದ್ಧವಾದ ವಿಕ್ರಮಾದಿತ್ಯನ ಸಿಂಹಾಸನ ಇಲ್ಲಿಯೇ ಇತ್ತು ಎಂದು ಪ್ರತೀತಿ. ಉಜ್ಜಯನಿಹಲವಾರು ಬಂಗಾರದ ಕಲಶಗಳನ್ನು ಹೊಂದಿರುವ ದೇಗುಲಗಳನ್ನು ಹೊಂದಿರುವುದರಿಂದ "ಸ್ವರ್ಣ ಶೃಂಗ" ಎಂದೂ ಪ್ರಸಿದ್ಧವಾಗಿದೆ. ಬಹಳ ಹಿಂದೆ ಇಲ್ಲಿ ಅನೇಕ ವೇದಾಧ್ಯಯನ ಸಂಪನ್ನ ಶಿವ ಭಕ್ತರಿದ್ದರಂತೆ. ಅವರಲ್ಲಿ ವೇದ ಪ್ರಿಯನೆಂಬುವನು ತನ್ನ ನಾಲ್ಕು ಪುತ್ರರೊಂದಿಗೆ ಶಿವ ಕೈಂಕರ್ಯದಲ್ಲಿ ತೊಡಗಿದ್ದನಂತೆ. ಹೀಗಿರುಬಾಗ, ದೂಷಣನೆಂಬ ರಾಕ್ಷಸನು ತನ್ನ ದುಷ್ಟ ಶಕ್ತಿಯೊಂದಿಗೆ ಇವರ ಮೇಲೆರಗ್ಲು ಶಿವಪೂಜಾ ನಿರತರಾದ್ದ ತನ್ನ ಭಕ್ತರನ್ನು ಕಾಪಡಲು ಶಿವನು ಲಿಂಗಾಕಾರದಿಂದ ಮಹಾಕಾಳನಾಗಿ ಹೊರಬಂದು ರಾಕ್ಷಸ ಸಂಹಾರ ಮಾಡಿದನಂತೆ. ಕೊನೆಗೆ ಭಕ್ತರ ವಿನಂತಿ ಮೇರೆಗೆ ಅದೇ ಆಕಾರದಲ್ಲಿ ಜ್ಯೋತಿರ್ಮಯನಾಗಿ ನಿಂತನಂತೆ. ಉಜ್ಜಯನಿ ಪರಮ ಪವಿತ್ರವಾದ ಕ್ಷೇತ್ರ. ಇಲ್ಲಿ ೭ ಸಾಗರ ತೀರ್ಥಗಳು, ೨೮ ತೀರ್ಥಗಳು, ೮೪ ಸಿದ್ಧಲಿಂಗಗಳು, ೨೫-೩೦ಶಿವಲಿಂಗಗಳು, ಶ್ರೀಯಂತ್ರ ಸಹಿತ ಹರಿಸಿದ್ಧಿ ಮಾತಾಮಂದಿರ, ಬಡಾಗಣೇಶ್, ಗರ್‍ಕಾಲಿಕಾ ಪೂಜಾ ಮಂದಿರಗಳು, ಗೋಮತಿ ಕುಂಡ, ಸಂದೀಪಿನಿ ಆಶ್ರಮ ಮೊದಲಾದ ಯಾತ್ರಾ ಸ್ಥಳಗಳಿವೆ. ಇಲ್ಲಿಂದ ೮ಕಿ.ಮೀ. ದೂರದಲ್ಲಿ ಸ್ಥಿರಮಾನ ಗಣಪತಿ ದೇವಾಲಯವಿದೆ. ಉಜ್ಜಯನಿಯನ್ನು ಸಂದರ್ಶಿಸಿದವರೆಲ್ಲ ಗಣಪತಿಯನ್ನು ದರ್ಶನ ಮಾಡಲೇಬೇಕು.


ಮಹಾಕಾಳೇಶ್ವರನ ವಿಶೇಷ.

ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಮಹಾಕಾಳೇಶ್ವರ ಐದು ಮಹಡಿಗಳ ಬೃಹತ್ ಶಿಲಾ ದೇವಸ್ಥಾನ. ವಿಶೇಷವೆಂದರೆ, ಇಲ್ಲಿ ಜ್ಯೋತಿರ್ಲಿಂಗವಿರುವುದು ಭೂಗರ್ಭದಲ್ಲಿ. 

ಶಿವನಿಗೆ ಇಲ್ಲಿ ಪ್ರತಿದಿನ ಹತ್ತಿರದ ಸ್ಮಶಾನದಿಂದ ತಂದ ಬೂದಿಯಿಂದಲೇ ಲೇಪನ. ನಂತರವೇ ಪೂಜೆ, ಅಭಿಷೇಕ. ಕಾಶಿ-ಗಯಾಗಳಂತೆ ಇಲ್ಲಿ ಕೂಡ ’ಪಿತೃಶ್ರಾದ್ಧ’ ಮಾಡುತ್ತಾರೆ. 

ಇತರ ಮಂದಿರಗಳು:

ಉಜ್ಜಯನಿಯಲ್ಲಿ ಇನ್ನೂಅನೇಕ ದೊಡ್ಡ ದೊಡ್ಡ ದೇವಾಲಯಗಳಿವೆ. - ಶ್ರೀ ರಾಮ ಮಂದಿರ, ಗೋಪಾಲ ಮಂದಿರ, ಹರಿ ಸಿದ್ಧಿ ದೇವೀ ಮಂದಿರ. ಗಣೇಶ ಮಂದಿರ , ಸಂದೀಪಿನೀ ಆಶ್ರಮ, .ಹೀಗೆ ಅನೇಕ ನೋಡತಕ್ಕ ಸ್ಥಳಗಳಿವೆ. ಖಗೋಲ ವಿಜ್ಞಾನ ಕ್ಕೆ ಸಂಬಂಧ ಪಟ್ಟ ಜಂತರ್ ಮಂತರ್ ಪ್ರಯೋಗ ಮಂದಿರ ನೋಡಲೇಬೇಕಾದ ಸ್ಥಳ. ಗೋಪಾಲ ಮಂದಿರ ಬಹಳ ಸುಂದರವಾಗಿದೆ. ಕೃಷ್ಣಜನ್ಮಾಷ್ಟಮಿ ಬಹಳ ವೈಭವದಿಂದ ನಡೆಯುತ್ತದೆ.

ಹರಿ-ಹರ:

ವೈಕುಂಠ ಚತುರ್ದಶಿಯ ದಿನ ಶ್ರೀ ಮಹಾಕಾಳೇಶ್ವರ ಜ್ಯೋತಿರ್ಲಿಂಗದ ಉತ್ಸವ ಇಲ್ಲಿಗೆ ಬರುತ್ತದೆ. ಹರಿ -ಹರ ಮಿಲನದ ಉತ್ಸವ ಆದಿನ ನಡೆಯುತ್ತದೆ. ಶ್ರೀ ಮಹಾಕಾಳೇಶ್ವರನಿಗೆ ಪ್ರಾತಃ ಸಮಯದಲ್ಲಿ ನಡೆಯುವ ಭಸ್ಮಾರತಿ ಬಹಳ ವಿಶೇಷವಾದುದು. ಪ್ರತಿದಿನ ಐದು ಬಾರಿ ಈ ಶ್ರೀ ಮಹಾಕಾಳೇಶ್ವರ ಜ್ಯೋತಿರ್ಲಿಂಗಕ್ಕೆ ವಿಶೇಷ ಆರತಿ ನಡೆಯುತ್ತದೆ.ಶಿವರಾತ್ರಿ ಯಲ್ಲಿ ಬಹಳ ಜನಸಂದಣಿ ಇರುವುದು.

ಕುಂಭಮೇಳ:

ಹರಿದ್ವಾರ , ಪ್ರಯಾಗ , ನಾಸಿಕದಂತೆ ಇಲ್ಲಿಯೂ ಹನ್ನೆರಡು ವರ್ಷಕ್ಕೊಮ್ಮೆ ಕುಂಭಮೇಳ ನಡೆಯುತ್ತದೆ. ಲಕ್ಷಾಂತರ ಜನ ಸೇರುತ್ತಾರೆ. ಕ್ಷಿಪ್ರಾನದಿಯಲ್ಲಿ ಸ್ನಾನ ಮಾಡಿ ತರ್ಪಣ ಕೊಡುತ್ತಾರೆ . ನದಿಯ ಸ್ನಾನಘಟ್ಟಗಳು ವಿಶಾಲವಾಗಿ ಚೆನ್ನಾಗಿವೆ. ಸಮುದ್ರ ಮಥನ ಕಾಲದಲ್ಲಿ ಹುಟ್ಟಿದ ಅಮೃತದ ಬಿಂದುಗಳು ಈ ನಾಲ್ಕು ಸ್ಥಳಗಳಲ್ಲಿ ಬಿದ್ದುದರಿಂದ ಪರ್ವಕಾಲದಲ್ಲಿ ಈ ನದಿಗಳಲ್ಲಿ ಸ್ನಾನ ಮಾಡುವುದರಿಂದ ಮುಕ್ತಿ ದೊರಕುವುದೆಂದು ಹೇಳುತ್ತಾರೆ. ದೇಶದ ನಾನಾ ಭಾಗಗಳಿಂದ ಭಕ್ತರು ಹಾಗೂ ವಿದೇಶೀಯರೂ ಸಹ ಕುಂಭ ಮೇಳದ ಸಮಯದಲ್ಲಿ ಇಲ್ಲಿಗೆ ಆಗಮಿಸುತ್ತಾರೆ.

ಹೇಗೆ ಹೋಗುವುದು? ಉಜ್ಜಯನಿ, ನಾಗ್ಡ ಹಾಗೂ ಭೂಪಾಲ್ ನಡುವಿನ ರೈಲು ನಿಲ್ದಾಣ. 

ಎಲ್ಲಿಂದ ಎಷ್ಟು ದೂರ. ಭೂಪಾಲ್ ಇಂದ ೧೮೪ ಕಿ.ಮೀ. ಇಂದೋರ್ ಇಂದ ೫೫ ಕಿ.ಮೀ. ಅಹಮದಾಬಾದ್ ಇಂದ ೪೭೫ ಕಿ.ಮೀ. ದೆಹಲಿಯಿಂದ ೭೪೯ ಕಿ.ಮೀ. ಬೆಂಗಳೂರಿನಿಂದ ೧೪೮೩ ಕಿ.ಮೀ.

ವಸತಿ. ಧರ್ಮಶಾಲೆ ಮತ್ತು ಹೊಟೆಲ್ಗಳು ಸಾಕಷ್ಟಿವೆ. ಮೊದಲಿಗಿಂತಲೂ ವಸತಿ ಸೌಕರ್ಯಗಳು ಹೆಚ್ಚಾಗಿದ್ದು, ಪ್ರಯಾಣಿಕರಿಗೆ ಅನುಕೂಲವಿದೆ. 


 

2 comments:

  1. ಉಜ್ಜಯನಿ ನಗರದ ಬಗ್ಗೆ ಮತ್ತು ಅಲ್ಲಿನ ದೇವಾಸ್ಥಾನದ ಬಗ್ಗೆ ಚೆನ್ನಾಗಿ ಬರೆದಿದ್ದೀರಿ.....

    ReplyDelete
  2. ಶಿವು,
    ಪ್ರತಿಕ್ರಿಯೆಗೆ ತುಂಬಾ ಥ್ಯಾಂಕ್ಸ್.

    -ಅನಿಲ್.

    ReplyDelete