My Blog List

Wednesday, November 26, 2008

ಮದುವೆಗೆ ಮುಂಚೆ ಮತ್ತು ಮದುವೆಯ ನಂತರ...

ಮದುವೆಗೆ ಮುಂಚೆ...

ಅವನು: ಅಬ್ಬಾ!!!

ಅವಳು: ನಾನು ನಿನ್ನನ್ನು ಬಿಟ್ಟಿರಬೇಕಾ?

ಅವನು: ಇಲ್ಲ!!! ಆ ರೀತಿ ಯೋಚನೆಯೂ ಮಾಡಬೇಡ.

ಅವಳು: ನೀನು ನನ್ನ ಪ್ರೀತಿಸುತ್ತೀಯಾ?

ಅವನು: ಸಂದೇಹವೇ ಬೇಡ... ಹಿಂದೆಯೂ ಮಾಡುತ್ತಿದ್ದೆ, ಮುಂದೆಯೂ ಮಾಡುವೆ.

ಅವಳು: ನನಗೆ ಎಂದಾದರೂ ಮೋಸ ಮಾಡಿದ್ದೀಯಾ?

ಅವನು: ಇಲ್ಲ!!! ಈ ರೀತಿ ಯಾಕೆ ಕೇಳುತ್ತಿದ್ದೀಯಾ?

ಅವಳು: ನನಗೆ ಮುತ್ತು ಕೊಡುತ್ತೀಯಾ?

ಅವನು: ಪ್ರತಿ ಅವಕಾಶಕ್ಕೆ ಕಾಯುತ್ತಿರುತ್ತೇನೆ.

ಅವಳು: ನನಗೆ ಹೊಡೆಯುತ್ತೀಯಾ?

ಅವನು: ಇಲ್ಲ!!! ನಿನಗೇನಾದರೂ ಹುಚ್ಚು ಹಿಡಿದಿದೆಯಾ?

ಅವಳು: ನಾನು ನಿನ್ನನ್ನು ನಂಬಬಹುದಾ?

ಅವನು: ಹಾ...

ಅವಳು: ಪ್ರಿಯತಮ!!!


ಮದುವೆಯ ನಂತರ...

ಬರೆದಿರುವುದನ್ನೇ ಕೆಳಗಿನಿಂದ ಮೇಲಕ್ಕೆ ಓದಿ... Smiling


Tuesday, November 25, 2008

ಕರ್ನಾಟಕ ಸಂಗೀತದ ೭೨ ಮೇಳ ರಾಗಗಳು...

ಕರ್ನಾಟಕ ಸಂಗೀತದ ಎಪ್ಪತ್ತೇಳು ಮೇಳ ರಾಗಗಳ ಪಟ್ಟಿ ಇಲ್ಲಿದೆ.

ಇಲ್ಲಿ ಪ್ರತಿ ಆರು ರಾಗಗಳಿಗೆ ಒಂದೊಂದು ಚಕ್ರಗಳಿವೆ.

ಹಾಗೇ ಎಡಗಡೆಯಲ್ಲಿರುವ ಮೊದಲ ೩೬ ರಾಗಗಳಲ್ಲಿ ಶುದ್ಧ ಮಧ್ಯಮವಿದೆ.

ಹಾಗೇನೇ ಬಲಗಡೆಯಲ್ಲಿರುವ ಕೊನೆಯ ೩೬ ರಾಗಗಳಲ್ಲಿ ಪ್ರತಿ ಮಧ್ಯಮವಿದೆ.

ಉಳಿದಂತೆ, ರಿಷಭ, ಗಾಂಧಾರ, ಧೈವತ, ನಿಷಾದಗಳು ರಾಗಗಳ ಪಟ್ಟಿಯಲ್ಲಿವೆ.

ಯಾವ ಯಾವ ರಾಗಗಳಿಗೆ ಯಾವ ಯಾವ ಸ್ವರ ಬರುತ್ತದೆಂದು ಸುಲಭವಾಗಿ ತಿಳಿದುಕೊಳ್ಳಬಹುದು...

೭೨ ಮೇಳಕರ್ತ ರಾಗಗಳು
ಶುದ್ಧ ಮಧ್ಯಮ ರಾಗಗಳು



ಪ್ರತಿ ಮಧ್ಯಮ
ರಾಗಗಳು
ಚಕ್ರದ ಹೆಸರು ಕ್ರಮ ಸಂಖ್ಯೆ ರಾಗದ ಹೆಸರು ರಿಷಭ ಗಾಂಧಾರ ಧೈವತ ನಿಷಾದ ರಾಗದ ಹೆಸರು ಕ್ರಮ ಸಂಖ್ಯೆ ಚಕ್ರದ ಹೆಸರು
೧ನೇ ಇಂದು ಚಕ್ರ
(ರಗ)
ಕನಕಾಂಗಿ ಶುದ್ಧ ಶುದ್ಧ ಶುದ್ಧ ಶುದ್ಧ ಸಾಲಗ ೩೭ ೭ನೇ ಋಶಿ ಚಕ್ರ (ರಗ)
ರತ್ನಾಂಗಿ ಶುದ್ಧ ಶುದ್ಧ ಶುದ್ಧ ಕೈಶಿಕ ಜಲಾರ್ಣವ ೩೮
ಗಾನಮೂರ್ತಿ ಶುದ್ಧ ಶುದ್ಧ ಶುದ್ಧ ಕಾಕಲಿ ಝಾಲವರಾಳಿ ೩೯
ವನಸ್ಪತಿ ಶುದ್ಧ ಶುದ್ಧ ಚತುಶೃತಿ ಕೈಶಿಕ ನವನೀತ ೪೦
ಮಾನವತಿ ಶುದ್ಧ ಶುದ್ಧ ಚತುಶೃತಿ ಕಾಕಲಿ ಪಾವನಿ ೪೧
ತಾನರೂಪ ಶುದ್ಧ ಶುದ್ಧ ಷಟ್
ಶೃತಿ
ಕಾಕಲಿ ರಘುಪ್ರಿಯ ೪೨










೨ನೇ ನೇತ್ರ ಚಕ್ರ
(ರಗಿ)
ಸೇನಾವತ ಶುದ್ಧ ಸಾಧಾರಣ ಶುದ್ಧ ಶುದ್ಧ ಗಂವಾಂಬೋಧಿ ೪೩ ೮ನೇ ವಸು ಚಕ್ರ (ರಗಿ)
ಹನುಮತೋಡಿ ಶುದ್ಧ ಸಾಧಾರಣ ಶುದ್ಧ ಕೈಶಿಕ ಭವಪ್ರಿಯ ೪೪
ಧೇನುಕ ಶುದ್ಧ ಸಾಧಾರಣ ಶುದ್ಧ ಕಾಕಲಿ ಶುಭಪಂತುವರಾಳಿ ೪೫
೧೦ ನಾಟಕಪ್ರಿಯ ಶುದ್ಧ ಸಾಧಾರಣ ಚತುಶೃತಿ ಕೈಶಿಕ ಷಡ್ವಿಧಮಾರ್ಗಿಣಿ ೪೬
೧೧ ಕೋಕಿಲಪ್ರಿಯ ಶುದ್ಧ ಸಾಧಾರಣ ಚತುಶೃತಿ ಕಾಕಲಿ ಸುವರ್ಣಾಂಗಿ ೪೭
೧೨ ರೂಪವತಿ ಶುದ್ಧ ಸಾಧಾರಣ ಷಟ್
ಶೃತಿ
ಕಾಕಲಿ ದಿವ್ಯಮಣಿ ೪೮










೩ನೇ ಅಗ್ನಿ ಚಕ್ರ
(ರಗು)
೧೩ ಗಾಯಕಪ್ರಿಯ ಶುದ್ಧ ಅಂತರ ಶುದ್ಧ ಶುದ್ಧ ಧವಳಾಂಬರಿ ೪೯ ೯ನೇ ಬ್ರಹ್ಮ ಚಕ್ರ (ರಗು)
೧೪ ವಕುಳಾಭರಣ ಶುದ್ಧ ಅಂತರ ಶುದ್ಧ ಕೈಶಿಕ ನಾಮನಾರಾಮಿಣಿ ೫೦
೧೫ ಮಾಯಾಮಾಳವಗೌಳ ಶುದ್ಧ ಅಂತರ ಶುದ್ಧ ಕಾಕಲಿ ಕಾಮವರ್ಧಿನಿ ೫೧
೧೬ ಚಕ್ರವಾಕ ಶುದ್ಧ ಅಂತರ ಚತುಶೃತಿ ಕೈಶಿಕ ರಾಮಪ್ರಿಯ ೫೨
೧೭ ಸೂರ್ಯಕಾಂತ ಶುದ್ಧ ಅಂತರ ಚತುಶೃತಿ ಕಾಕಲಿ ಗಮನಶ್ರಮ ೫೩
೧೮ ಹಾಟಕಾಂಬರಿ ಶುದ್ಧ ಅಂತರ ಷಟ್
ಶೃತಿ
ಕಾಕಲಿ ವಿಶ್ವಂಬರಿ ೫೪










೪ನೇ ವೇದ ಚಕ್ರ
(ರಿಗಿ)
೧೯ ಝಂಕಾರಧ್ವನಿ ಚತುಶೃತಿ ಸಾಧಾರಣ ಶುದ್ಧ ಶುದ್ಧ ಶ್ಯಾಮಲಾಂಗಿ ೫೫ ೧೦ನೇ ದಿಶಿ ಚಕ್ರ (ರಿಗಿ)
೨೦ ನಠಭೈರವಿ ಚತುಶೃತಿ ಸಾಧಾರಣ ಶುದ್ಧ ಕೈಶಿಕ ಷಣ್ಮುಖಪ್ರಿಯ ೫೬
೨೧ ಕೀರವಾಣಿ ಚತುಶೃತಿ ಸಾಧಾರಣ ಶುದ್ಧ ಕಾಕಲಿ ಸಿಂಹೇಂದ್ರಮದ್ಯಮ ೫೭
೨೨ ಖರಹರಪ್ರಿಯ ಚತುಶೃತಿ ಸಾಧಾರಣ ಚತುಶೃತಿ ಕೈಶಿಕ ಹೇಮವತಿ ೫೮
೨೩ ಗೌರೀಮನೋಹರಿ ಚತುಶೃತಿ ಸಾಧಾರಣ ಚತುಶೃತಿ ಕಾಕಲಿ ಧರ್ಮವತಿ ೫೯
೨೪ ವರುಣಪ್ರಿಯ ಚತುಶೃತಿ ಸಾಧಾರಣ ಷಟ್
ಶೃತಿ
ಕಾಕಲಿ ನೀತಿಮತಿ ೬೦










೫ನೇ ಬಾಣ ಚಕ್ರ
(ರಿಗು)
೨೫ ಮಾರರಂಜನಿ ಚತುಶೃತಿ ಅಂತರ ಶುದ್ಧ ಶುದ್ಧ ಕಾಂತಾಮಣಿ ೬೧ ೧೧ನೇ ರುದ್ರ ಚಕ್ರ (ರಿಗು)
೨೬ ಚಾರುಕೇಶಿ ಚತುಶೃತಿ ಅಂತರ ಶುದ್ಧ ಕೈಶಿಕ ರಿಷಭಪ್ರಿಯ ೬೨
೨೭ ಸರಸಾಂಗಿ ಚತುಶೃತಿ ಅಂತರ ಶುದ್ಧ ಕಾಕಲಿ ಲತಾಂಗಿ ೬೩
೨೮ ಹರಿಕಾಂಬೋಜಿ ಚತುಶೃತಿ ಅಂತರ ಚತುಶೃತಿ ಕೈಶಿಕ ವಾಚಸ್ಪತಿ ೬೪
೨೯ ಧೀರಶಂಕರಾಭರಣ ಚತುಶೃತಿ ಅಂತರ ಚತುಶೃತಿ ಕಾಕಲಿ ಮೇಚಕಲ್ಯಾಣಿ ೬೫
೩೦ ನಾಗಾನಂದಿನಿ ಚತುಶೃತಿ ಅಂತರ ಷಟ್
ಶೃತಿ
ಕಾಕಲಿ ಚಿಕ್ರಾಂಬರಿ ೬೬










೬ನೇ ಋತು ಚಕ್ರ
(ರುಗು)
೩೧ ಯಾಗಪ್ರಿಯ ಷಟ್
ಶೃತಿ
ಅಂತರ ಶುದ್ಧ ಶುದ್ಧ ಸಚರಿತ್ರ ೬೭ ೧೨ನೇ ಆದಿತ್ಯ ಚಕ್ರ (ರುಗು)
೩೨ ರಾಗವರ್ಧಿನಿ ಷಟ್
ಶೃತಿ
ಅಂತರ ಶುದ್ಧ ಕೈಶಿಕ ಜ್ಯೋತಿಶ್ಮತಿ ೬೮
೩೩ ಗಾಂಗೇಯಭೂಷಣಿ ಷಟ್
ಶೃತಿ
ಅಂತರ ಶುದ್ಧ ಕಾಕಲಿ ಧಾತುವರ್ಧಿನಿ ೬೯
೩೪ ವಾಗಧೀಶ್ವರಿ ಷಟ್
ಶೃತಿ
ಅಂತರ ಚತುಶೃತಿ ಕೈಶಿಕ ನಾಸಿಕಭೂಷಣಿ ೭೦
೩೫ ಶೂಲಿನಿ ಷಟ್
ಶೃತಿ
ಅಂತರ ಚತುಶೃತಿ ಕಾಕಲಿ ಕೋಸಲ ೭೧
೩೬ ಚಲನಾಟ ಷಟ್
ಶೃತಿ
ಅಂತರ ಷಟ್
ಶೃತಿ
ಕಾಕಲಿ ರಸಿಕಪ್ರಿಯ ೭೨










ಮರೆತಿದ್ದೆ:

ಮೇಲೆ ತಿಳಿಸಿರುವ ೭೨ ರಾಗಗಳೂ ಸಂಪೂರ್ಣ ರಾಗಗಳು.

ಈ ೭೨ ರಾಗಗಳಿಂದಲೇ ಅನೇಕ ರಾಗಗಳು ಕರ್ನಾಟಕ ಸಂಗೀತದಲ್ಲಿ ಸೃಷ್ಟಿಯಾಗಿರುವುದು.

ಆಗುತ್ತೋ? ಆಗೊಲ್ವೋ?

ಸೋಮಾರಿ ಪುರಾಣ

ಕ್ರೀಮ್ ಬಿಸ್ಕತ್ ನಲ್ಲಿ ಕ್ರೀಮ್ ಇರುತ್ತೆ... ಆದರೆ ಬೆಣ್ಣೆ ಬಿಸ್ಕತ್ ನಲ್ಲಿ ಬೆಣ್ಣೆ ಇರುತ್ತಾ?

ನೀನ್ ಬಸ್ಸಿನಲ್ಲಿ ಹತ್ತಿದ್ರೂ... ಬಸ್ ನಿನ್ ಮೇಲೆ ಹತ್ತಿದ್ರೂ ಟಿಕೆಟ್ ತೊಗೊಳ್ಳೋನು ನೀನೇ... Smiling

ಟಿಕೆಟ್ ತೊಗೊಂಡು ಒಳಗೆ ಹೋಗೋದು "Cinema theater" ಗೆ… ಒಳಗೆ ಹೋಗಿ ಟಿಕೆಟ್ ತೊಗೊಳೋದು "Operation Theater"…

Cell ನಲ್ಲಿ 'BALANCE' ಇಲ್ಲ ಅಂದ್ರೆ 'CALL' ಮಾಡೋಕೆ ಆಗೊಲ್ಲ... ಮನುಷ್ಯನಿಗೆ ’ಕಾಲು’ ಇಲ್ಲ ಅಂದ್ರೆ 'BALANCE' ಮಾಡೋಕೆ ಆಗೊಲ್ಲ...

ರೈಲು ಎಷ್ಟೇ ವೇಗವಾಗಿ ಚಲಿಸಿದರೂ ಕೊನೆಯ ಬೋಗಿ ಕೊನೆಗೇ ಬರೋದು...

ಬಸ್ ಹೋದ್ರೂ 'BUS STAND' ಅಲ್ಲೇ ಇರುತ್ತೆ... ಆದ್ರೆ ಸೈಕಲ್ ಹೋದ್ರೆ 'CYCLE STAND' ಜೊತೆಗೇ ಹೋಗುತ್ತೆ...

ನಾಯಿಗೆ ನಾಲ್ಕು ಕಾಲುಗಳೇ ಇರ್ಬಹುದು... ಆದ್ರೂ ಅದಕ್ಕೆ ಕಾಲ ಮೇಲೆ ಕಾಲು ಹಾಕಿಕೊಂಡು ಕೂರೋದಕ್ಕೆ ಆಗುತ್ತಾ?

ಸೊಳ್ಳೆ ಕಚ್ಚಿದರೆ ’ಆನೆ ಕಾಲು’ ಬರುತ್ತೆ. ಆದ್ರೆ, ಆನೆ ಕಚ್ಚಿದ್ರೆ ’ಸೊಳ್ಳೆ ಕಾಲು’ ಬರುತ್ತಾ?

೧೦ ಇರುವೆಗಳು ಸೇರಿ ಒಂದು ಆನೆಗೆ ಕಚ್ಚಬಹುದು... ಆದ್ರೆ ೧೦ ಆನೆ ಸೇರಿ ಒಂದು ಇರುವೆನ ಕಚ್ಚೋಕೆ ಆಗುತ್ತಾ?

ಹೇಗೆ ಓದಿದರೂ ಒಂದೇ!!!

ಮೊನ್ನೆ ಭಾನುವಾರ ಸ್ನೇಹಿತನ ಮನೆಗೆ ಹೋಗಿದ್ದಾಗ ಅವರ ಮನೆಯಲ್ಲಿ ತರಿಸುವ ವಿಕ ದಿನಪತ್ರಿಕೆಯ ಸಾಪ್ತಾಹಿಕ ವಿಜಯದಲ್ಲಿ ಕಂಡು ಬಂದದ್ದು ಈ ಪದಗಳು.

ಇಂಥಾ ಪದಗಳಿಗೆ ಪಲಿನ್ದ್ರೋಮೆ ಎಂದು ಕರೆಯಲಾಗುವುದು...

ಇಂಥಾ ಪದಗಳನ್ನು ಹೇಗೆ ಓದಿದರೂ ಸರಿ.

ಕನಕ

ಕಿಟಕಿ

ಕಟಕ

ಕುಟುಕು

ಗುಡುಗು

ಗುನುಗು

ಚಮಚ

ಜಲಜ

ನಮನ

ನರ್ತನ

ಸರಸ

ಸಮಾಸ

ಸಮೋಸ

ಟಮೋಟ

ಕುಬೇರನಿಗೇನಿರಬೇಕು

ಗದಗ

ರಿಪೇರಿ

ವಿಕಟಕವಿ

ಮಧ್ಯಮ

ಇದೇ ರೀತಿಯ ಇನ್ನಷ್ಟು ಪದಗಳನ್ನು ಸೇರಿಸ್ತೀರಾ?


~.~

Monday, November 10, 2008

ಭಾರತಕ್ಕೆ ಮರಳಿ ಬಂದ ಬಾರ್ಡರ್‍-ಗವಾಸ್ಕರ್‍ ಟ್ರೋಫಿ

ಭಾರತ ತಂಡದ ವಿಜಯೋತ್ಸವ... ಇಂದು ಕ್ರಿಕೆಟ್ ಲೋಕದಲ್ಲಿ ಭಾರತಕ್ಕೆ ಅತ್ಯಂತ ಸ್ಮರಣೀಯ ದಿನ.

ಇಂದು ಭಾರತ ಆಸ್ಟ್ರೇಲಿಯಾವನ್ನು ೧೭೨ ರನ್ ಗಳ ಅಂತರದಿಂದ ಸೋಲಿಸಿ ಬಾರ್ಡರ್‍-ಗವಾಸ್ಕರ್‍ ಟ್ರೋಫಿಯನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ.

೨೦೦೪ರಲ್ಲಿ ಭಾರತದಲ್ಲಿ ಆಡಿದ್ದಾಗ ಈ ಟ್ರೋಫಿಯನ್ನು ಆಸ್ಟ್ರೇಲಿಯಾಗೆ ಬಿಟ್ಟುಕೊಟ್ಟಿತ್ತು.

೨೦೦೭/೦೮ ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಸರಣಿಯಲ್ಲೂ ಭಾರತ ೨-೧ ಅಂತರದಿಂದ ಸೋತಿತ್ತು.

ಆದರೆ, ಈ ಸರಣಿಯಲ್ಲಿ ಭಾರತ ೨-೦ ಅಂತರದಿಂದ ಭಾರತ ಆಸ್ಟ್ರೇಲಿಯಾವನ್ನು ಸೋಲಿಸಿ ಅವರಿಗೆ ಮಣ್ಣು ಮುಕ್ಕಿಸಿದೆ.

ಭಾರತ ಈ ಪಂದ್ಯದಲ್ಲಿ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ ೪೪೧ ರನ್ ಗಳನ್ನು ಗಳಿಸಿತ್ತು.

ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯಾ ೩೫೫ ರನ್ ಗಳಿಸಿ ಆಲೌಟ್ ಆಗಿತ್ತು.

ಮತ್ತೆ ಎರಡನೆಯ ಇನ್ನಿಂಗ್ಸ್ ನಲ್ಲಿ ಭಾರತ ೨೯೫ ರನ್ ಗಳನ್ನು ಗಳಿಸಿ ಆಲೌಟ್ ಆಯಿತು.

ಆಸ್ಟ್ರೇಲಿಯಾಗೆ ಗೆಲ್ಲಲು ೩೮೧ ರನ್ ಗಳು ಬೇಕಾಗಿತ್ತು.

ಆಸ್ಟ್ರೇಲಿಯಾ ಇದಕ್ಕೆ ಉತ್ತರವಾಗಿ ಕೇವಲ ೨೦೯ ರನ್ ಗಳನ್ನು ಗಳಿಸಿ ಆಲೌಟ್ ಆಯಿತು.

ಹರ್ಭಜನ್ ಸಿಂಗ್ ಮಿಚೆಲ್ಲ್ ಜಾನ್ಸನ್ ಅವರನ್ನು ಎಲ್. ಬಿ. ಡಬ್ಲ್ಯು ಮೂಲಕ ಅವರ ವಿಕೆಟ್ ಕಬಳಿಸುತ್ತಿದ್ದಂತೆಯೇ ಭಾರತ ಈ ಟ್ರೋಫಿಯನ್ನು ಗೆದ್ದುಕೊಂಡಿತು.

ಇನ್ನೊಂದು ಸೋಜಿಗದ ಸಂಗತಿ.

ಭಾರತ ಮೊದಲ ಇನ್ನಿಂಗ್ಸ್: ೪೪೧ ರನ್ ಗಳು.

ಎರಡನೆಯ ಇನ್ನಿಂಗ್ಸ್: ೨೯೫ ರನ್ ಗಳು.

ಅಂತರ: ೧೪೬.

ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್: ೩೫೫ ರನ್ ಗಳು.

ಎರಡನೆಯ ಇನ್ನಿಂಗ್ಸ್: ೨೦೯ ರನ್ ಗಳು.

ಅಂತರ: ೧೪೬.

ಮರೆತಿದ್ದೆ: ಈ ವಿಜಯದ ನಡುವೆ ಒಂದು ವಿಷಾದಕರ ಸಂಗತಿಯೆಂದರೆ, ಇಂದು ಸೌರವ್ ಗಂಗೂಲಿ ತಮ್ಮ ಕ್ರಿಕೆಟ್ ಜೀವನದ ಕೊನೆಯ ಪಂದ್ಯವನ್ನು ಆಡಿದ್ದು Sad

Sunday, November 09, 2008

ವಚನಕಾರರು - ೨

ಬಸವಣ್ಣಬಸವಣ್ಣನವರು (೧೧೩೦ - ೧೧೬೭): ಭಕ್ತಿ ಭಂಡಾರಿ ಬಸವಣ್ಣನವರು ಸಮಾಜ ಸುಧಾರಕರು. ಜನರಲ್ಲಿ ಮೇಲುಕೀಳೆಂಬ ಭಾವನೆಯನ್ನು ತೊಡೆದು ಹಾಕಲು ಯತ್ನಿಸಿ ಭಾವೈಕ್ಯತೆಯನ್ನು ಸಾಧಿಸಲು ಶ್ರಮಿಸಿದರು. ವೀರಶೈವ ಮತವನ್ನು ಬಲಪಡಿಸಿದರು.

ಗಹನವಾದ ವಿಷಯಗಳನ್ನು ವಚನಗಳ ಮೂಲಕ ತಿಳಿಗನ್ನಡದಲ್ಲಿ ಎಲ್ಲರಿಗೂ ಅರ್ಥವಾಗುವಂತೆ ತಿಳಿಸಿದರು. ಹನ್ನೆರಡನೆಯ ಶತಮಾನದಲ್ಲೇ ಸಾಮಾಜಿಕ ಪ್ರಜ್ಞೆಯನ್ನು ಜನರಲ್ಲಿ ಮೂಡಿಸುವಂಥಹ ಕಾರ್ಯವು ಕನ್ನಡಿಗರಾದ ಇವರಿಂದ ನಡೆಯಿತು.

ಬಾಗೇವಾಡಿಯಲ್ಲಿ ಜನಿಸಿದರು ಬಸವಣ್ಣನವರು. ಬಿಜ್ಜಳನ ಮಂತ್ರಿಯಾಗಿ ಅಧಿಕಾರವನ್ನು ವಹಿಸಿಕೊಂಡರು. ಜೊತೆಗೆ ಶಿವಶರಣರ ಸೇವೆಯನ್ನು ಮಾಡುತ್ತಾ, ಧರ್ಮ ಪ್ರಚಾರ ಕಾರ್ಯದಲ್ಲಿ ತೊಡಗಿದರು. ಸಂಗಮೇಶ್ವರನ ಭಕ್ತರಾಗಿ "ಕೂಡಲಸಂಗಮದೇವ" ಎಂಬ ಅಂಕಿತದೊಡನೆ ಅನೇಕ ವಚನಗಳನ್ನು ರಚಿಸಿದರು.

ಇಂದಿಗೂ ಅಣ್ಣ ಬಸವಣ್ಣನವರ ವಚನಗಳು ತುಂಬಾ ಪ್ರಸಿದ್ಧವಾಗಿವೆ.

ಈ ಮಾಹಿತಿ ಕೃಪೆ: ಕರ್ನಾಟಕ ಸಂಗೀತ - ಪ್ರಾಥಮಿಕ ಹಂತ [ಜೂನಿಯರ್ ಗ್ರೇಡ್] ಪುಸ್ತಕ

Friday, November 07, 2008

ವಚನಕಾರರು - ೧

ಅಕ್ಕಮಹಾದೇವಿಅಕ್ಕಮಹಾದೇವಿ (೧೧೩೦ - ೧೧೬೦): ಸಮಾಜಸಧಾರಣೆಯಲ್ಲಿ ಮಹಿಳೆಯ ಪಾತ್ರವು ಹಿರಿದಾದುದು. ಪುರಷಪ್ರಧಾನವಾದ ಸಮಾಜದಲ್ಲಿ ಮಹಿಳೆಯರು ಪುರುಷರಿಗೆ ಸಮಾನವಾಗಿ ನಿಲ್ಲಬಲ್ಲರೆಂಬ ಪ್ರಜ್ಞೆಯನ್ನು ಸುಮಾರು ಎಂಟುನೂರು ವರ್ಷಗಳ ಹಿಂದೆಯೇ ಮೂಡಿಸಿದ ಕರ್ನಾಟಕದ ಪ್ರಪ್ರಥಮ ಮಹಿಳೆಯೆಂದರೆ ಅಕ್ಕಮಹಾದೇವಿ.

ಹನ್ನೆರಡನೆಯ ಶತಮಾನದಲ್ಲೇ ಇಂತಹ ಮಹಿಳಾ ಜಾಗೃತಿಯನ್ನು ಮೂಡಿಸಿದರು. ಸಂಸಾರವನ್ನು ತ್ಯಜಿಸಿ, ಚೆನ್ನಮಲ್ಲಿಕಾರ್ಜುನ ದೇವರೇ ತನ್ನ ಪತಿಯೆಂಬುದಾಗಿ ನಂಬಿದರು. ತಮ್ಮ ವೈರಾಗ್ಯದ ಮೂಲಕವೇ ಪುರುಷರೊಡನೆ ಹೋರಾಡಿ ಸಮಾಜೋದ್ಧಾರದ ಕಾರ್ಯದಲ್ಲಿ ನೆರವಾದರು ಈ ಶಿವಶರಣೆ. ತಮ್ಮ ಭಾವನೆಗಳನ್ನು ವಚನಗಳ ಮೂಲಕ ತಿಳಿಗನ್ನಡದಲ್ಲಿ ತಿಳಿಸಿದರು. ಲಿಂಗಭೇದವಿಲ್ಲದೆ, ಜಾತಿಭೇದವಿಲ್ಲದೆ ಪ್ರತಿಯೊಬ್ಬರೂ ಲೋಕವಿಚಾರಗಳನ್ನು ಅರಿಯುವಂತೆ ಮಾಡಿದರು.

ಉಡುತಡಿ ಗ್ರಾಮವಾಸಿಗಳಾದ ಮಹಾದೇವಿ ಪರಮಶಿವಭಕ್ತರಾಗಿದ್ದರು. ಶ್ರೀಶೈಲ ಚೆನ್ನಮಲ್ಲಿಕಾರ್ಜುನನೇ ಇವರ ಆರಾಧ್ಯದೈವವಾದನು. ಶಿವಭಕ್ತೆಯಾದ ಮಹಾದೇವಿಯು ಕೆಲವು ಷರತ್ತುಗಳನ್ನು ಹಾಕಿ ರಾಜ ಕೌಶಿಕನನ್ನು ಮದುವೆಯಾದರು. ಆಕೆಯ ಷರತ್ತುಗಳನ್ನು ರಾಜನು ಮುರಿಯಲು ಸಂಸಾರವನ್ನು ತ್ಯಜಿಸಿ ವಿರಾಗಿಯಾದರು. ಎಲ್ಲರಿಗೂ ಅಕ್ಕಳಾಗಿ ಅಕ್ಕಮಹಾದೇವಿ ಎನಿಸಿದರು. ಶಿವಶರಣರಾದ ಬಸವಣ್ಣನವರ ಸಮಕಾಲೀನರು ಇವರು.

ಸರ್ವಸಂಗ ಪರುತ್ಯಾಗಿಯಾಗಿ ಶಿವನನ್ನೇ ಪತಿಯೆಂದು ನಂಬಿ ಚೆನ್ನಮಲ್ಲಿಕಾರ್ಜುನ ಅಂಕಿತದೊಡನೆ ಅನೇಕ ವಚನಗಳನ್ನು ತಿಳಿಗನ್ನಡದಲ್ಲಿ ರಚಿಸಿ ಗಹನವಾದ ತತ್ವಗಳನ್ನು ಸಾಮಾನ್ಯ ಜನರಿಗೂ ತಲುಪಿಸಿದರು. ಶಿವಶರಣೆಯಾಗಿ ಅಕ್ಕನವರು ಅಂದಿನ ಸಮಾಜದಲ್ಲಿ ಸ್ತ್ರೀಯರಿಗೆ ಉನ್ನತಸ್ಥಾನವನ್ನು ಗಳಿಸಿಕೊಟ್ಟರು.

ಈ ಮಾಹಿತಿ ಕೃಪೆ: ಕರ್ನಾಟಕ ಸಂಗೀತ - ಪ್ರಾಥಮಿಕ ಹಂತ [ಜೂನಿಯರ್ ಗ್ರೇಡ್] ಪುಸ್ತಕ

Sunday, November 02, 2008

ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿದ ಮಹಾನ್ ಹೋರಾಟಗಾರ.

ಅನಿಲ್ ಕುಂಬ್ಳೆ ಟೆಸ್ಟ್ ಕ್ರಿಕೆಟ್ ಗೆ ಕುಂಬ್ಳೆ ವಿದಾಯ ಹೇಳಿದ್ದಾರೆ. ಇಂದು ಅವರು ತಮ್ಮ ಕೊನೆಯ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಆಡಿದರು.

ಅನಿಲ್ ಕುಂಬ್ಳೆ (ಜನನ: ಅಕ್ಟೋಬರ್ ೧೭, ೧೯೭೦)

ಕುಂಬ್ಳೆ ಲೆಗ್ ಸ್ಪಿನ್ನರ್. ಇವರ ಗೂಗ್ಲಿ ಕ್ರಿಕೆಟ್ ಜಗತ್ತಿನಲ್ಲಿ ಬಹಳ ಪ್ರಸಿದ್ಧ.

ಇವರು ಮೊದಲು ಮಧ್ಯ ವೇಗದ ಬೌಲರ್ ಆಗಿ ಕ್ರಿಕೆಟ್ ಪ್ರವೇಶಿಸಿದ್ದು. ಇದು ಅವರಿಗೆ ಕೊಡುಗೆ ಎಂಬಂತೆ ವೇಗವಾಗಿ ಬೌಲ್ ಮಾಡಲು ಸಹಾಯಕವಾಗಿದೆ.

ಸಾಧಾರಣವಾಗಿ ಸ್ಪಿನ್ ಬೌಲರ್‌ಗಳು ಬಾಲ್ ಹಾಕುವ ವೇಗಕ್ಕಿಂತ ಹೆಚ್ಚು ವೇಗದಲ್ಲಿ ಬೌಲ್ ಮಾಡುವ ಅನಿಲ್ ಕುಂಬ್ಳೆ, ೬೦೦ಕ್ಕೂ ಹೆಚ್ಚು ಟೆಸ್ಟ್ ವಿಕೆಟ್‌ಗಳನ್ನು ಪಡೆದಿದ್ದಾರೆ.

ಇವರು ಒಂದು ದಿನದ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದು ಎಪ್ರಿಲ್ ೨೫, ೧೯೯೦ ರಂದು, ಶ್ರೀಲಂಕಾ ಮೇಲಿನ ಪಂದ್ಯದಲ್ಲಿ.

ಅದೇ ವರ್ಷ ಇಂಗ್ಲೆಂಡ್ ವಿರುದ್ಧ ಮ್ಯಾಂಚೆಸ್ಟರ್‌ನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಕಾಲಿಟ್ಟರು.

ಟೆಸ್ಟ್ ಕ್ರಿಕೆಟ್ ನಲ್ಲಿ ಇವರು ಪಡೆದ ಮೊದಲ ವಿಕೆಟ್ ಇಂಗ್ಲೆಂಡ್ ನ ಅಲನ್ ಲ್ಯಾಂಬ್.
ಟೆಸ್ಟ್ ಕ್ರಿಕೆಟ್ ನಲ್ಲಿ ಇವರು ಪಡೆದ ಕೊನೆಯ ವಿಕೆಟ್ ಆಸ್ಟ್ರೇಲಿಯಾದ ಮಿಚೆಲ್ಲ್ ಜಾನ್ಸನ್.

೬೦೦ ವಿಕೆಟ್ಗಳನ್ನು ಪಡೆದವರಲ್ಲಿ ಕುಂಬ್ಳೆ ಮೂರನೆಯವರು.

೧೩೨ ಟೆಸ್ಟ್ ಪಂದ್ಯಗಳನ್ನು ಆಡಿ ೬೧೯ ವಿಕೆಟ್ಗಳನ್ನು ಪಡೆದಿದ್ದಾರೆ.

೨೭೧ ಏಕ ದಿನ ಪಂದ್ಯಗಳಲ್ಲಿ ೩೩೭ ವಿಕೆಟ್ಗಳನ್ನು ಪಡೆದಿದ್ದಾರೆ.

ದಿಲ್ಲಿಯ ಫಿರೋಜ್ ಷಾ ಕೋಟ್ಲಾ ದಲ್ಲಿ ಪಾಕಿಸ್ತಾನದ ವಿರುದ್ಧ ೧೦/೭೪ ಅವರ ಟೆಸ್ಟ್ ಜೀವನದ ಶ್ರೇಷ್ಟ ಬೌಲಿಂಗ್ ಪ್ರದರ್ಶನ.

ವೆಸ್ಟ್ ಇಂಡೀಸ್ ವಿರುದ್ಧ ೬/೧೨ ಅವರ ಏಕದಿನದ ಶ್ರೇಷ್ಟ ಬೌಲಿಂಗ್ ಪ್ರದರ್ಶನ.

ಚಿತ್ರಪುಟ: ಅಂತರ್ಜಾಲದಿಂದ ಡೌನ್ ಲೋಡ್ ಮಾಡಿದ್ದು.